ಬೆಂಗಳೂರು :- ಬಿಜೆಪಿ ಜನಾಕ್ರೋಶ ಯಾತ್ರೆ ವಿಚಾರವಾಗಿ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಅವರೇನೋ ಆರಂಭ ಶೂರತ್ವ ಮಾಡಿದರು. ನಿನ್ನೆಯಿಂದ ಧ್ವನಿ ಕಡಿಮೆ ಆದಂಗಿದೆ. ಅವರದ್ದೇ ಸರ್ಕಾರ ಬೆಲೆ ಏರಿಕೆ ಮಾಡಿದೆ. ನ್ಯಾಚುರಲ್ ಪಾರ್ಟಿಯಾಗಿ ಯಾವ ರೀತಿ ವರ್ತನೆ ಮಾಡಬೇಕಿತ್ತು. ಪ್ರತಿಭಟನೆ ಮಾಡಲು ಬಿಜೆಪಿ ಅವರಿಗೆ ನೈತಿಕತೆ ಇಲ್ಲ. ಟ್ರಂಪ್ ಹೊಡೆದ ಅಷ್ಟು ಸುಲಭವಾಗಿಲ್ಲ.
ಪ್ರತಿಭಟನೆ ಬಿಟ್ಟು ವಾಪಸ್ ಬನ್ನಿ. ಟಮೊಟೋ, ಬೆಳ್ಳುಳ್ಳಿ ದರ ಒಂದು ಎರಡು ರೂಪಾಯಿ ಆಗಿದೆ. ಕೃಷಿಗೆ ಆದ್ಯತೆ ಕೊಡಬೇಕು ಅದಕ್ಕೆ ಕಾರ್ಗೋ ಎಕ್ಸಪರ್ಟ್ ಮುಖ್ಯ ಎಂದರು.
ತಾವು ಸಚಿವ ಸ್ಥಾನ ಆಕಾಂಕ್ಷಿಯ ಎಂಬ ವಿಚಾರವಾಗಿ ಮಾತನಾಡಿ, ನಾನು ಒಂದೇ ಪಾರ್ಟಿ, ಒಂದೇ ಕ್ಷೇತ್ರ. ೧೦ ಬಾರಿ ಚುನಾವಣೆ ಎದುರಿಸಿದ್ದೇನೆ. ನಾನು ಪಕ್ಷಕ್ಕೆ ವಿಧೇಯನಾಗಿ ಇದ್ದೇನೆ. ನನ್ನೇನು ಸುಮ್ಮನೆ ಕೂರಿಸಿಲ್ಲ ದೆಹಲಿ ಪ್ರತಿನಿಧಿ ಮಾಡಿದ್ದಾರೆ. ಬದಲಾದ ರಾಜಕೀಯ ಪರಿಸ್ಥಿತಿ ಏನು ಬೇಕಾದ್ರೂ ಆಗಬಹುದು. ಸರ್ಕಾರಕ್ಕೆ ಎರಡು ವರ್ಷ ಹಾಗಾಗಿ ಊಹಾಪೋಹಾ ಬರಬಹುದು. ನಾನು ಖರ್ಗೆ ಅವರ ಮೂಡಸ್ ಆಫ್ ಆಪರೆಂಡಿ ನೋಡಿದ್ದೇನೆ. ಬಹಳ ಗುಟ್ಟನ್ನ ಕಾಪಾಡಿಕೊಳ್ತಾರೆ. ಒಂದು ಸಣ್ಣ ಸುಳಿವೂ ಬಿಟ್ಟುಕೊಡಲ್ಲ ಎಂದರು.
2ನೇ ಏರ್ ಪೋರ್ಟ್ ವಿಚಾರವಾಗಿ ಮಾತನಾಡಿ, ದೇವನಹಳ್ಳಿ ನಾಲ್ಕು ಸಾವಿರ ಎಕರೆ ಇದೆ. ಈಗಾಗಲೇ ಇದು ನಂಬರ್ ಒನ್ ಏರ್ಪೋರ್ಟ್ ಅಂತ ಹೆಸರು ಪಡೆದಿದೆ. ದೆಹಲಿ ಬಾಂಬೆಯನ್ನ ದೇವನಹಳ್ಳಿ ಏರ್ ಪೋರ್ಟ್ ಮೀರಿಸಿದೆ. ಇಲ್ಲಿರೋ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನದಿಂದ ಹೆಸರು ಮಾಡಿದೆ. ಬೇರೆ ಬೇರೆ ದೇಶಕ್ಕೂ ಹೋಗೋದು ಇಲ್ಲಿಂದ. ಎರಡನೇ ಏರ್ಪೋರ್ಟ್ ಮಾಡಲು ಕೆಲವೊಂದು ಕಂಡೀಷನ್ ಇದೆ. ೧೫೦ ಕಿಮೀ ಅಂತರದಲ್ಲಿ ಎರಡನೇ ಏರ್ ಪೋರ್ಟ್ ಅಗಬೇಕು. ಈಗಾಗಲೇ ಟೀಂ ಬಂದಿದೆ ಪರಿಶೀಲನೆ ಮಾಡಿದ್ದಾರೆ. ಶಿರಾದಲ್ಲಿ ಏರ್ ಪೋರ್ಟ್ ಯಾಕೆ ಆಗಬೇಕು ಅಂದರೆ ಈ ರಸ್ತೆಗೆ ನಾಲ್ಕು ಹೆದ್ದಾರಿ ಸಿಗುತ್ತದೆ. ಶಿರಸ ಹೈವೇನಿಂದ ಅನೇಕ ರಸ್ತೆಗಳು ಬೇರೆ ಬೇರೆ ಕಡೆ ಹೋಗುತ್ತವೆ. ಶಿರಾದಲ್ಲಿ ಏರ್ಪೋರ್ಟ್ ಆಗಬೇಕು ಅಂತ ಮನವಿ ಸಲ್ಲಿಸಿದ್ದೇವೆ. ನಾನು ಸಮಯ ತೆಗೆದುಕೊಂಡಿದ್ದೇವೆ. ವಿಮಾನಯಾನ ನಾಗರೀಕ ಸಚಿವರನ್ನ ಭೇಟಿ ಮಾಡ್ತೀನಿ. ಮುಂಬರುವ ವರ್ಷಗಳಲ್ಲಿ ಬೆಂಗಳೂರಲ್ಲಿ ಜನಸಂಖ್ಯೆ ಹೆಚ್ಚಾಗಲಿದೆ
ಹಾಗಾಗಿ ಶಿರಾ ಹೆಬ್ಬಾಗಿಲು ಆಗಲಿದೆ. ಏರ್ ಪೋರ್ಟ್ ನ ಒಂದಿಷ್ಟು ಕಂಡೀಷನ್ ಫುಲ್ ಫಿಲ್ ಆಗೋದು ಶಿರಾದಲ್ಲಿ ಮಾತ್ರ. ಅಗ್ರಿಕಲ್ಚರ್ ಎಕ್ಸಪೋರ್ಟ್ ಗೆ ಇದು ಅನುಕೂಲ ಆಗಲಿದೆ. ಹಾಗಾಗಿ ಅನೇಕ ಶಾಸಕರು ಶಿರಾದಲ್ಲಿ ಆಗಲಿ ಅನ್ನೋದು ನಮ್ಮ ಮನವಿ. ನಾವು ಭೇಟಿ ಮಾಡಿ ಮನವಿ ಕೊಟ್ಟಿದ್ದೇವೆ. 2032 ಕ್ಕೆ ಎರಡನೇ ಏರ್ಪೋರ್ಟ್ ಆಗೋದು. ಈಗಲೇ ಆಗೋದಿಲ್ಲ ಅದಕ್ಕೆ ಈಗಿನಿಂದ ತಯಾರಿ ಆಗುತ್ತದೆ ಅಷ್ಟೆ. ಶಿರಾದಲ್ಲಿ ಮಾಡಿದರೆ ಬೇರೆ ಬೇರೆ ಜಿಲ್ಲೆಯ ಫ್ಲೈಟ್ ಗಳು ಕನೆಕ್ಟ್ ಆಗುತ್ತವೆ.ಹಿಂದೆ ಬಿಡದಿ ಬಳಿ ಜಾಗ ನೋಡಿದ್ದರು ಆದರೆ ಅದು ಬೇಡ ಅಂದ್ರು. ಈಗ ನೆಲಮಂಗಲ ಮಾಡಿದರೆ ಮತ್ತಷ್ಟು ಟ್ರಾಫಿಕ್ ಹೆಚ್ಚಾಗುತ್ತದೆ. ಯಾವ ಹಿನ್ನೆಲೆಯಲ್ಲಿ ಶಿರಾದಲ್ಲಿ ಏರ್ಪೋರ್ಟ್ ಮಾಡಬೇಕು ಅಂತ ಹೇಳಿದ್ದೇವೆ ಎಂದರು.