ಹುಬ್ಬಳ್ಳಿ:- ಕಳೆದ ಎರಡು ದಿನಗಳ ಹಿಂದೆ ಧಾರಾಕಾರ ಮಳೆಗೆ ನೀರಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಹುಬ್ಬಳ್ಳಿ ಬೆಳಗಲಿ ರಸ್ತೆಯಲ್ಲಿ ನಿನ್ನೆ ಪತ್ತೆಯಾಗಿತ್ತು. ಬೀರಬಂದ ಓಣಿಯ ಹುಸೇನ ಕಳಸ ನಿವಾಸ ಮೃತ ವ್ಯಕ್ತಿ.
ಘಟನೆಯಿಂದ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಮೃತ ವ್ಯಕ್ತಿ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಡಿಸಿ ದಿವ್ಯ ಪ್ರಭು, ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಭಾಗಿಯಾಗಿದ್ದರು.
ನಗರದಲ್ಲಿ ಕಳೆದ ಮೂರು ದಿನಗಳ ಹಿಂದೆ ಧಾರಾಕಾರವಾಗಿ ಸುರಿದ ಮಳೆರಾಯನ ಅಬ್ಬರಕ್ಕೆ ಹುಸೇನ ಕಳಸ ನಿವಾಸ ನೀರಿನಲ್ಲಿ ಕೊಚ್ಚಿಕೊಗಿದ್ದ. ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗಲಿ ರಸ್ತೆಯಲ್ಲಿ ಘಟನೆ ನಡೆದಿತ್ತು. ನೀರಿನಲ್ಲಿ ಆಯ ತಪ್ಪಿ ಜಾರಿ ಬಿದ್ದ ಹಿನ್ನೆಲೆ ರಸ್ತೆಯ ಪಕ್ಕದ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ. ಘಟನೆ ಬಳಿಕ ಎಸ್ ಡಿಆರ್ ಎಫ್ , ಸ್ಥಳಿಯ ಪೊಲೀಸ್ ರಿಂದ ಸತತವಾಗಿ ಮೂರು ದಿನಗಳ ಕಾರ್ಯಚರಣೆ ನಡೆಸಿ, ಇದೀಗ ಶವ ಪತ್ತೆಯಾಗಿದೆ.