ಚಿಕ್ಕೋಡಿ:- ಬಾಗಿನ ಅರ್ಪಿಸಲು ಹೋಗಿ ಕೃಷ್ಣಾ ನದಿಗೆ ಇಳಿದ ಮಹಿಳೆ ನೀರು ಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ದಿನಕ್ಕೆ ಮಹಿಳೆ ಶವವಾಗಿ ಪತ್ತೆಯಾಗಿದೆ. ಕಳೆದ 17 ರಂದು ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ಮಹಿಳೆ ತೆರಳಿದ್ದರು.
ಸಿಕ್ಕ ಸಿಕ್ಕ ಲಿಂಕ್ ಕ್ಲಿಕ್ ಮಾಡುವರು ಈ ಸುದ್ದಿ ಮಿಸ್ ಮಾಡ್ದೆ ನೋಡಿ: ಸೈಬರ್ ವಂಚಕರಿದ್ದಾರೆ ಹುಷಾರ್!
ಈ ವೇಳೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ನಿವಾಸಿ ಸಂಗೀತಾ ಮಾಂಜರೇಕರ್(40) ಕಾಲು ಜಾರಿ ಬಿದ್ದಿದ್ದರು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ನಿರಂತರ ಶೋಧ ನಡೆಸಿದ್ದು, ಇದೀಗ ಮಾಂಜರಿ ಗ್ರಾಮದಿಂದ 2ಕಿಮೀ ದೂರದ ಕೃಷ್ಣಾ ನದಿ ದಡದಲ್ಲಿ ಶವ ಪತ್ತೆಯಾಗಿದೆ.
ನಾಲ್ಕು ದಿನಗಳಿಂದ ಮಹಿಳೆಗಾಗಿ ಅಗ್ನಿಶಾಮಕ ಮತ್ತು ಎಸ್ಡಿಆರ್ಎಫ್ ತಂಡ ಶೋಧ ನಡೆಸಿತ್ತು. ಇದೀಗ ಮಹಿಳೆ ಶವ ಪತ್ತೆಯಾಗಿದೆ. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.