ಮಂಡ್ಯ : ಜನಾದೇಶದ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ, ವಸತಿ ಇಲಾಖೆಯಲ್ಲಿನ ಭ್ರಷ್ಟಾಚಾರ ಇವೆಲ್ಲವೂ ಸರ್ಕಾರಕ್ಕೆ ಮುಜುಗರಕ್ಕೀಡು ಮಾಡಿದೆ.
ತಲೆಯಲ್ಲಿ ವಿಪರೀತ ಹೇನಿದ್ಯಾ? ಹಾಗಿದ್ರೆ ಹೀಗೆ ಮಾಡಿ, ತಕ್ಷಣವೇ ಒಂದೂ ಉಳಿಯದಂತೆ ಉದುರಿಹೋಗುತ್ತೆ!
ಅದರಂತೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮತ್ತೊಂದು ಲಂಚಾವತಾರ ಬಯಲಾಗಿದೆ. ಶಿಕ್ಷಕರ ಸಂಬಳ ರಿಲೀಸ್ಗೆ ಲಕ್ಷ ಲಕ್ಷ ಲಂಚ ಕೊಡಬೇಕಂತೆ. ಇದು ಮಂಡ್ಯದ ಶಿಕ್ಷಣ ಇಲಾಖೆಯ ಉಪನಿರ್ದೇಶಕನ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಮಂಡ್ಯದ ಮಳವಳ್ಳಿ ತಾಲ್ಲೂಕಿನ ಹಾಡ್ಲಿ ಗ್ರಾಮದ ಅರುಣೋದಯ ಶಿಕ್ಷಣ ಸಂಸ್ಥೆಯ ಸಹ ಶಿಕ್ಷಕರಿಂದ ಆರೋಪ ಮಾಡಲಾಗಿದ್ದು, ಸಂಸ್ಥೆಯ ನಾಲ್ವರು ಸಹ ಶಿಕ್ಷಕರನ್ನ 2023 ರಲ್ಲಿ ಖಾಯಂ ಶಿಕ್ಷಕರಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರು. ಸರ್ಕಾರ ಆದೇಶ ಹೊರಡಿಸಿ ಎರಡು ವರ್ಷ ಕಳೆದ್ರು ಜಿ.ಪಂ ಗೆ ಉಪನಿರ್ದೇಶಕರು ಶಿಫಾರಸ್ಸು ಮಾಡಿಲ್ಲ. ಉಪನಿರ್ದೇಶಕ ಶಿವರಾಮೇಗೌಡರಿಂದ ಲಂಚಕ್ಕೆ ಬೇಡಿಕೆ ಇಡಲಾಗಿದೆ. 5 ಲಕ್ಷ ಲಂಚ ನೀಡದ ಹಿನ್ನೆಲೆ ಶಿಫಾರಸು ಮಾಡ್ತಿಲ್ಲ ಎಂದು ಆರೋಪ ಕೇಳಿ ಬಂದಿದೆ. ಅರುಣೋದಯ ಶಿಕ್ಷಣ ಸಂಸ್ಥೆಯ ಶಿಕ್ಷಕರಾದ ರಮೇಶ್ ಹಾಗೂ ಪಲ್ಲವಿಯಿಂದ ಗಂಭೀರ ಆರೋಪ ಮಾಡಲಾಗಿದೆ. ಲಂಚಾವತಾರಕ್ಕೆ ಬೇಸತ್ತು ನೊಂದ ಶಿಕ್ಷಕರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಲಾಗಿದೆ. ನೊಂದ ಶಿಕ್ಷಕರ ನೆರವಿಗೆ ದಲಿತಪರ ಹೋರಾಟಗಾರರು ನಿಂತಿದ್ದಾರೆ.