ಬೆಂಗಳೂರು: ವ್ಯಕ್ತಿಯೊಬ್ಬನನ್ನು ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಕಿಡ್ನಾಪ್ ಗ್ಯಾಂಗ್ ವಿರುದ್ದ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಮೊಹಮ್ಮದ್ ಝಬಿ ಹಾಗು ಗ್ಯಾಂಗ್ ನಿಂದ ಉದ್ಯಮಿ ಕೈಲಾಶ್ ಕುಮಾರ್ ಎಂಬಾತನ ಕಿಡ್ನಾಪ್ ಮಾಡಿ ಹಲ್ಲೆ ಮಾಡಲಾಗಿದ್ದು,
ಬಟ್ಟೆ ವ್ಯಾಪಾರಿ ಕೈಲಾಶ್ ಕುಮಾರ್ ,ರವಿ ಎಂಬಾತನ ಜೊತೆ ವ್ಯವಹಾರವಿತ್ತು. 3.45 ಲಕ್ಷ ವ್ಯವಹಾರದಲ್ಲಿ ಈಗಾಗಲೇ1.5 ಲಕ್ಷ ಹಣ ವಾಪಸ್ ಕೊಟ್ಟಿದ್ದರು. ಉಳಿದ 1.95 ಲಕ್ಷ ಹಣ ವ್ಯವಹಾರದ ನಷ್ಟದಿಂದ ಐದು ಕಂತಿನಂತೆ ಕೊಡೊದಾಗಿ ಮಾತುಕತೆ ಆಗಿತ್ತು.
ಮಧುಮೇಹಿಗಳ ಗಮನಕ್ಕೆ: ಶುಗರ್ ಕಂಟ್ರೋಲ್ ಮಾಡಲು ಖಾಲಿ ಹೊಟ್ಟೆಗೆ ಈ ಒಣ ಹಣ್ಣು ಸೇವಿಸಿ!
ಆದ್ರು ಕೂಡ ನಿನ್ನೆ ಬೆಳಿಗ್ಗೆ 11 ಗಂಟೆಗೆ, ಆರಿಫ್ ಡಾನ್, ಜಬಿ, ರವಿ, ರೋಲ್ಕಲ್ ಇಮ್ರಾನ್ ಮತ್ತು ಆಸಿಡ್ ಮಂಜ ಎಂಬಾತರಿಂದ ಉದ್ಯಮಿ ಕೈಲಾಶ್ ಕಿಡ್ನಾಪ್ ಮಾಡಿ ಮಾಗಡಿ ರಸ್ತೆಯಲ್ಲಿರುವ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಮನಬಂದಂತೆ ಹಲ್ಲೆ ಮಾಡಿ ಚಾಕು ತೋರಿಸಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ತಲೆಗೆ ಗನ್ ಇಟ್ಟು ಮೂರು ದಿನಗಳಲ್ಲಿ 20 ಲಕ್ಷ ಹಣ ಕೊಡಬೇಕು ಅಂತ ವಾರ್ನಿಂಗ್ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.