Close Menu
Ain Live News
    Facebook X (Twitter) Instagram YouTube
    Tuesday, June 17
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Thimmapura: ದನಕರುಗಳಿಗೆ ಮೇವು ಕೊರತೆ ಆಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಲು ಕರೆ: ಆರ್ ಬಿ ತಿಮ್ಮಾಪುರ

    By AIN AuthorNovember 29, 2023
    Share
    Facebook Twitter LinkedIn Pinterest Email
    Demo

    ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನಲ್ಲಿ ಸುಮಾರು 30,300 ರಷ್ಟು ಕಬ್ಬು ಬೆಳೆದಿದೆ ಮಳೆ ಇಲ್ಲದ ಕಾರಣ 18,699 ರಷ್ಟು ಕಬ್ಬು ನಾಶವಾಗಿದೆ.  ಜಮಖಂಡಿ ಮತ್ತು ರಬಕವಿ ಬನಹಟ್ಟಿಯಲ್ಲಿ ಈ ಎರಡು ತಾಲೂಕಿನಲ್ಲಿ ಬರ ಅಧ್ಯಾಯನ ನಡೆಸಿದ್ದೇವೆ ಕಳೆದ ಬಾರಿ ಎರಡು ಸಾವಿರ ಹೆಕ್ಟೇರ ಎಷ್ಟು ಅರಿಶಿಣ  ಬೆಳೆದಿತ್ತು. ಮಳೆ ಇಲ್ಲದ ಕಾರಣ ಈ ಬಾರಿ 1000 ಹೆಕ್ಟೇರ ಎಷ್ಟು ಅರಿಶಿನ ಬೆಳೆದು ಬಾರಿ ಇಳುವರಿ ಕಂಡಿದೆ.

    ರಬಕವಿ ಬನಹಟ್ಟಿಯಲ್ಲಿ 612 ಬೋರ್ವೆಲ್ಗಳಿವೆ ಅದರಲ್ಲಿ 480 ಬೋವೆಲ್ಗಳಲ್ಲಿ ನೀರು ಇದೆ 112 ರಲ್ಲಿ ನೀರು ಬತ್ತಿ ಹೋಗಿದೆ ಸದ್ಯದ ಪರಿಸ್ಥಿತಿಯಲ್ಲಿ ರಬಕವಿ ಬನಹಟ್ಟಿ ರಾಮಪುರ ಹೊಸೂರಗಳಲ್ಲಿ ಸಾರ್ವಜನಿಕರ ಕುಡಿಯುವ  ನೀರಿಗೆ ಯಾವುದೇ ತೊಂದರೆ ಇಲ್ಲ

    ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಗರಸಭೆ ಸಭಾಭವನದಲ್ಲಿ ಅಧಿಕಾರಿಗಳ ಪರಿಶೀಲನ ಸಭೆ ನಡೆಯಿತು.  ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರು ಮತ್ತು ಮೇವು ಯಾವುದೇ ತೊಂದರೆ ಇಲ್ಲ ಅದರಲ್ಲಿ ಈ ತಾಲೂಕಿನಲ್ಲಿ 40 ಗ್ರಾಮ ಗ್ರಾಮಗಳು ಬರ ಎದುರಿಸುತ್ತಿವೆ  ಮತ್ತು ಕುಡಿಯುವ ನೀರಿಗೆ ಸ್ವಲ್ಪ ವ್ಯತ್ಯವಾಗಿದೆ ಅದನ್ನು ಕೂಡ ನಮ್ಮ ಅಧಿಕಾರಿಗಳು ಸರಿಪಡಿಸಲಿದ್ದಾರೆ ಎಂದು ಹೇಳಿದರು.

    https://ainlivenews.com/wp-content/uploads/2023/11/WhatsApp-Video-2023-11-28-at-8.20.25-AM.mp4

    ಬರಗಾಲದಿಂದ ಹಾನಿಗೆ ಒಳಗಾದ ಭೂಮಿಗಳಿಗೆ ಕೇಂದ್ರ ಸರ್ಕಾರ   ಎನ್ ಡಿ ಆರ್ ಎಫ್ ರೇಟ್ ನಿಗದಿಯಂತೆ  ಶೀಘ್ರದಲ್ಲಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು. ಜಲಕ್ಷಾಮದಿಂದ ನೇರವಾಗಿ ಪರಿಣಾಮ ಎದುರಾಗುವುದು ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯ ಮೇಲೆ. ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಕುಡಿಯುವ ನೀರಿಗೆ ಅಗತ್ಯವಾದ ನೀರನ್ನು ಜಾಗೃತೆಯಿಂದ ಉಳಿಸಿಕೊಂಡು  ಸಾರ್ವಜನಿಕರಿಗೆ ಪೂರೈಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸಮಸ್ಯಾತ್ಮಕ ಹಳ್ಳಿಗಳನ್ನು ತಕ್ಷಣ ಗುರುತಿಸಿ ಕುಡಿಯುವ ನೀರು ಒದಗಿಸುವ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು.  ಜಾನುವಾರುಗಳ ರಕ್ಷಣೆಗಾಗಿ ಅಗತ್ಯವಾದ ಸ್ಥಳಗಳಲ್ಲಿ ಗೋಶಾಲೆಗಳ ನಿರ್ಮಾಣ, ಮೇವು ಸಂಗ್ರಹ, ಹೊರರಾಜ್ಯಕ್ಕೆ ಮೇವು ಸಾಗಾಣಿಕೆಯನ್ನು ನಿಷೇಧಿಸುವುದು ಮೊದಲಾದ ಉಪಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

    ಒಂದು ಕಾಲದಲ್ಲಿ ಬರಬಿದ್ದಾಗ ಸಾಮೂಹಿಕ ಗುಳೇ ಹೋಗುವ ಪರಿಸ್ಥಿತಿ ಇತ್ತು. ಆಹಾರದ ಕೊರತೆಯಿಂದಾಗಿ ಈಗ ಯಾರೂ ಊರು ಬಿಟ್ಟು ಹೋಗುವ ಸ್ಥಿತಿ ಇಲ್ಲ. ಅನ್ನಭಾಗ್ಯ ಯೋಜನೆ, ಉದ್ಯೋಗ ಖಾತ್ರಿ ಯೋಜನೆಗಳಿವೆ. ಆ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.

    ಎಲ್ಲಕ್ಕಿಂತ ಮುಖ್ಯವಾಗಿ ಬರಗಾಲದಂತ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿಯಾದರೂ ರಾಜಕೀಯ ಮರೆತು ಪರಿಹಾರೋಪಾಯಗಳ ಕಡೆಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ.  ಅಂಥ ಸಮಚಿತ್ತ, ಸಮಭಾವ, ಪರಿಪಕ್ವತೆ ನಮ್ಮ ರಾಜಕಾರಣಿಗಳಿಗೆ ಬರಲಿ, ಅಧಿಕಾರಶಾಹಿ ಇಂಥ ಸಂದರ್ಭದಲ್ಲಾದರೂ ಭ್ರಷ್ಟಾಚಾರಕ್ಕೆ ಸ್ವಯಂ ನಿಯಂತ್ರಣ ಹಾಕಿಕೊಂಡು ರಾಜ್ಯಕ್ಕೆ ಎದುರಾಗಿರುವ ಬರಗಾಲವೆಂಬ ಗಂಡಾಂತರವನ್ನು ಎದುರಿಸಲು ಸಜ್ಜಾಗಬೇಕಾಗಿದೆ.

    ಅಧ್ಯಯನದ ಪರಿಣಾಮ ಬೆಳೆಹಾನಿಯಾದ ರೈತನಿಗೆ ವೈಜ್ಞಾನಿಕ ಪರಿಹಾರ, ಬಡವನ ತಟ್ಟೆಗೆ ರೊಟ್ಟಿ ಬೇಕಾಗಿದೆ ಹೊರತು ಬರಗಾಲದ ಹೆಸರಿನಲ್ಲಿ ನಡೆಯುವ ಪ್ರಚಾರದ ಭರಾಟೆಯಂತೂ ಖಂಡಿತ ಅಲ್ಲ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವರಿ ಸಚಿವ ಆರ್ ಬಿ ತಿಮ್ಮಾಪುರ್ ಹೇಳಿದರು.

    ಪ್ರಕಾಶ ಕುಂಬಾರ

    ಬಾಗಲಕೋಟೆ

    Demo
    Share. Facebook Twitter LinkedIn Email WhatsApp

    Related Posts

    ಅಮ್ಯೂಸ್’ಮೆಂಟ್ ಪಾರ್ಕ್ ಮಾದರಿ KRS ಅಭಿವೃದ್ಧಿ ವಿಚಾರ: ಸುಮಲತಾ ಅಂಬರೀಶ್ ಹೇಳಿದ್ದೇನು..?

    June 17, 2025

    ಅಭಿಮಾನಿಗಳು, ಕಾರ್ಯಕರ್ತರ ಸಮ್ಮುಖದಲ್ಲಿ ಜನ್ಮ ದಿನ ಆಚರಿಸಿಕೊಂಡ ಬಂಡೆಪ್ಪ ಖಾಶೆಂಪುರ್

    June 17, 2025

    ಕೋಲಾರ: ಮೇಕೆ ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ: ಗಂಭೀರ ಗಾಯ

    June 17, 2025

    ಚಾಮರಾಜನಗರ: ಹಾಡುಹಗಲೆ ಮೇಕೆಯನ್ನು ಹೊತ್ತೊಯ್ದ ಹುಲಿರಾಯ..!

    June 17, 2025

    ಕೊಡಗು: RCB ವಿಜಯೋತ್ಸವ ದುರಂತ ಖಂಡಿಸಿ ಜಿಲ್ಲಾ BJPಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ

    June 17, 2025

    ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೋದಾಗ ಹಾವು ಕಚ್ಚಿ ವ್ಯಕ್ತಿ ಸಾವು..!

    June 17, 2025

    ಶಾಲಾ ಕಟ್ಟಡ, ಕಂಪೌಂಡಗಳಿಗೆ ರಾಜ್ಯ ಸರ್ಕಾರ ಅನುದಾನವನ್ನು ಶೀಘ್ರವಾಗಿ ನೀಡಬೇಕು: ಶಾಸಕ ಎಂ ಆರ್ ಪಾಟೀಲ್

    June 17, 2025

    ಮುಂದಿನ ಪ್ರಧಾನಿ ರಾಹುಲ್ ಗಾಂಧಿ: ಸಲೀಂ ಅಹ್ಮದ್ ವಿಶ್ವಾಸ

    June 17, 2025

    ನೀಟ್ ಪರೀಕ್ಷೆಯಲ್ಲಿ ಆಕಾಶ ಎಜ್ಯುಕೇಷನಲ್ ಸರ್ವೀಸಸ್ ಲಿಮಿಟೆಡ್‌ನ ವಿದ್ಯಾರ್ಥಿಗಳ ಸಾಧನೆ

    June 17, 2025

    ಧಾರಕಾರ ಮಳೆ: ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳ!

    June 17, 2025

    ಹಾಸನದಲ್ಲಿ ನಿಲ್ಲದ ಪುಡಿರೌಡಿಗಳ ಹಾವಳಿ: ಕೊಲೆ ಮಾಡಲು ತನ್ನೊಟ್ಟಿಗೆ ಬರದ ಯುವಕನಿಗೆ ಮಾರಣಾಂತಿಕ ಹಲ್ಲೆ!

    June 17, 2025

    ಮಳೆ ಅಬ್ಬರ: ರಸ್ತೆಗೆ ಉರುಳಿಬಿದ್ದ ಬೃಹತ್ ಮರ; ಸಂಚಾರ ಸ್ಥಗಿತ!

    June 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.