ಬೆಂಗಳೂರು:- ಯುವತಿಯ ಎದೆ ಮುಟ್ಟಿ ಯುವಕನೋರ್ವ ಇತ್ತೀಚೆಗೆ ವಿಕೃತಿ ಮೆರೆದಿದ್ದ. ಅಲ್ಲದೇ ದೂರು ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದ. ಆದರೆ ಇದೀಗ ಬೀದಿ ಕಾಮುಕ ಕೊನೆಗೂ ಅರೆಸ್ಟ್ ಆಗಿದ್ದಾನೆ.
ಹುಬ್ಬಳ್ಳಿಯಲ್ಲಿ ಬಾಲಕಿಯ ಕೊಲೆ ಕೇಸ್: ಮೃತ ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ!
ಕೇರಳದಲ್ಲಿ ಕಾಮುಕ ಸೆರೆಸಿಕ್ಕಿದ್ದಾನೆ. ಒಟ್ಟು 10 ದಿನ, 700 ಸಿಸಿಟಿವಿ, ಹತ್ತಾರು ಪೊಲೀಸರು, ಆಪರೇಷನ್ ಬಳಿಕ ಆರೋಪಿ ಕಾರ್ಯಾಚರಣೆಯೇ ಬಲು ರೋಚಕ ಆಗಿತ್ತು.
ಮಾರ್ಚ್ 3ರ ಮಧ್ಯರಾತ್ರಿ 1.50ರ ಸಮಯದಲ್ಲಿ ಸದ್ದುಗುಂಟೆ ಪಾಳ್ಯದಲ್ಲಿ ನಡೆದ ಈ ಭಯಾನಕ ಘಟನೆ ಬೆಂಗಳೂರನ್ನ ಬೆಚ್ಚಿಬೀಳಿಸಿತ್ತು. ಹೆಣ್ಮಕ್ಕಳಿಗೆ ಸಿಲಿಕಾನ್ ಸಿಟಿ ಸೇಫ್ ಅಲ್ವಾ ಅನ್ನೋ ಪ್ರಶ್ನೆ ಹುಟ್ಟು ಹಾಕಿತ್ತು. ಈ ಘಟನೆ ನಡೆದು ವಾರ ಕಳೆದ್ರೂ ಆರೋಪಿ ಸಂತೋಷ್ ಪತ್ತೆಯಾಗದಿರೋದು ಆಕ್ರೋಶಕ್ಕೂ ಕಾರಣವಾಗಿತ್ತು. ಆದ್ರೀಗ ಕೊನೆಗೂ ಕತ್ತಲ ಕಾಮುಕ ಲಾಕ್ ಆಗಿದ್ದಾನೆ
ಸದ್ದುಗುಂಟೆ ಪಾಳ್ಯದಲ್ಲಿ ನಡೆದ ಕಾಮುಕನ ಕೃತ್ಯದ ಸಂಬಂಧ ಸ್ಥಳೀಯ ನಿವಾಸಿ ಲೋಕೇಶ್ ಗೌಡ ದೂರು ದಾಖಲಿಸಿದ್ರು. ಸಿಸಿಟಿವಿ ದೃಶ್ಯಾವಳಿ ಸಮೇತ ಪೊಲೀಸರಿಗೆ ಕಂಪ್ಲೆಂಟ್ ನೀಡಿದ್ರು. ತಕ್ಷಣ ಆರೋಪಿ ಪತ್ತೆಗಾಗಿ ಎರಡು ಪ್ರತ್ಯೇಕ ತಂಡ ರಚಿಸಿದ್ದ ಡಿಸಿಪಿ ಸಾರಾ ಫಾತೀಮಾ ಶೋಧ ಕಾರ್ಯ ಆರಂಭಿಸಿದ್ರು. ಎರಡು ಪ್ರತ್ಯೇಕ ಪೊಲೀಸ್ ತಂಡ ರಚಿಸಿಕೊಂಡು ಹೊರರಾಜ್ಯದಲ್ಲಿ ಹುಡುಕಾಟ ನಡೆಸಿದ್ರು. ಆರೋಪಿ ಪತ್ತೆಗಾಗಿ ಬರೋಬ್ಬರಿ 700ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ಮಾಡಿದ್ದರು. ಅಂತಿಮವಾಗಿ ಆರೋಪಿಯ ಗುರುತು ಹಾಗೂ ಮುಖಚಹರೆ ಪತ್ತೆ ಹಚ್ಚಿ ಸರ್ಚಿಂಗ್ ಚುರುಕುಗೊಳಿಸಿದ್ರು. ಇದೀಗ ಕೇರಳದಲ್ಲಿ ಆರೋಪಿಯನ್ನ ಬಂಧಿಸಲಾಗಿದೆ.