Close Menu
Ain Live News
    Facebook X (Twitter) Instagram YouTube
    Thursday, May 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಜನಗಣತಿಯ ಜೊತೆಗೆ ದೇಶಾದ್ಯಂತ ಜಾತಿಗಣತಿ: ಇದು ಕೇಂದ್ರದ ಐತಿಹಾಸಿಕ ತೀರ್ಮಾನ ಎಂದ ಮಾಜಿ ಸಚಿವ ಎಚ್ ಆಂಜನೇಯ !

    By AIN AuthorMay 22, 2025
    Share
    Facebook Twitter LinkedIn Pinterest Email
    Demo

    ವಿಜಯಪುರ:- ಜನಗಣತಿಯ ಜೊತೆ ಜಾತಿ ಗಣತಿ ನಡೆಸಲು ತೀರ್ಮಾನಿಸಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಐತಿಹಾಸಿಕ ತೀರ್ಮಾನ ಸ್ವಾಗತಾರ್ಹ ಎಂದು ಮಾಜಿ ಸಚಿವ ಎಚ್ ಆಂಜನೇಯ ಹೇಳಿದ್ದಾರೆ.

    ಕಬ್ಬೂರ ಪಟ್ಟಣ ಪಂಚಾಯತಿ ಮುಖ್ಯಧಿಕಾರಿಯಿಂದ ತುಘಲಕ್ ಆಡಳಿತ: ಕಚೇರಿಗೆ ಬೀಗ ಜಡಿದ ಸಾರ್ವಜನಿಕರು!

    ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು,ರಾಹುಲ್ ಗಾಂಧಿ ಜನಗಣತಿ ಆಗಬೇಕು ಅಂತಾ ಹೇಳಿದ್ರೂ. ಅದೇ ರೀತಿ ಪ್ರಧಾನಿ ಮೋದಿ ಅವರು ಜನಗಣತಿ ಜೊತೆಗೆ ಜಾತಿ ಗಣತಿ ಮಾಡ್ತೆವೆ ಅಂತಾ ಹೇಳಿದ್ದಾರೆ. ಈ ಐತಿಹಾಸಿಕ ತೀರ್ಮಾನವನ್ನ ನಾವು ಸ್ವಾಗತಿಸುತ್ತೇವೆ. ಸಂಪತ್ತು ಯಾರೊಬ್ಬರ ಸ್ವತ್ತು ಆಗಬಾರದು. ಎಲ್ಲರಿಗೂ ಸಂಪತ್ತು ಸಮಾನಾಗಿ ಹಂಚಿಕೆ ಆಗಬೇಕು.

    ಹಾವನೂರು ವರದಿ ಬಂದಾಗ ಕೂಡ ಅದನ್ನ ಯಾರು ಒಪ್ಪಲಿಲ್ಲ. ಯಾವಾಗಲು ಕೂಡ ವಿರೋಧ ಮಾಡುವವರು ಇದ್ದೇ ಇರ್ತಾರೆ. ಇದಕ್ಕೆ ಆಳುವ ದೊರೆ ಮಣೆ ಹಾಕಬಾರದು. ದೇವರಾಜ ಅರಸು ಅವರಿಗೂ ಅನೇಕ ವಿರೋಧ ವ್ಯಕ್ತವಾಗಿದ್ದವು. ಆದ್ರೆ ಅವರು ದಿಟ್ಟವಾಗಿ ಜಾರಿಗೆ ತರಲಿಲ್ಲವೇ. ಅದೆ ರೀತಿ ಸಿಎಂ‌ ಕೂಡ ದಿಟ್ಟ ನಿರ್ಧಾರ ತಗೆದುಕೊಂಡು ಜಾರಿಗೆ ತರಬೇಕು. ಇದನ್ನ ವೀರಶೈವರು ಒಪ್ಪಬೇಕು, ಲಿಂಗಾಯತರು ಒಪ್ಪಬೇಕು.ಎಲ್ಲಿ ಆದ್ರೂ ಅನ್ಯಾಯ ಆಗಿದ್ರೆ ಹೇಳೀ ಸರಿಪಡಿಸೋಣ ಎಂದರು.

    ಹೊಸ ಹುದ್ದೆ ತುಂಬಲಾರದ ವಿಚಾರವಾಗಿ ಮಾತನಾಡಿ, ಕಳೆದ ಅಕ್ಟೋಬರ್ 28 ತಾರಿಖಿಗೆ ಒಳಮೀಸಲಾತಿಯನ್ನ ನಾವು ಜಾರಿಗೆ ತರ್ತೆವೆ ಅಂತಾ ಸರಕಾರ ತೀರ್ಮಾನ ತಗೆದುಕೊಂಡಿತ್ತು. ಅದರ ಜೊತೆಗೆ ನಾವು ಒತ್ತಡ ಹಾಕಿ ಆ ದಿನಾಂಕದಿಂದ ಈ ರಾಜ್ಯದಲ್ಲಿ ಯಾವುದೆ ಹೊಸ ಹುದ್ದೆಯನ್ನ ತುಂಬಿಕೊಳ್ಳಬಾರದು. ಎಲ್ಲ ಪೋಸ್ಟ್ ಗಳನ್ನ‌ ಸ್ಥಗಿತಗೊಳಿಸಬೇಕು
    ಒಳಮೀಸಲಾತಿ ಅನುಷ್ಠಾನ ಆದ ನಂತರ ಹುದ್ದೆಗಳನ್ನ ತುಂಬಬೇಕು ಅಂತಾ ಒತ್ತಡ, ಷರತ್ತು ಹಾಕಿದ್ವಿ, ಅದಕ್ಕೆ ಯಾವುದೆ ಹುದ್ದೆ ಭರ್ತಿ ಆಗಿಲ್ಲ. ಬ್ಯಾಕ್ ಲಾಗ್ ಹುದ್ದೇ ತುಂಬಿಕೊಳ್ಳುವದು ನಿಲ್ಲಿಸಿದ್ದೇವೆ. ಜೂನ್ ತಿಂಗಳಲ್ಲೆ ಜಾರಿ ಆಗಬೇಕು. ಇಲ್ಲವಾದ್ರೆ ಮುಂದೆ ಏನ ಮಾಡಬೇಕು ಅಂತಾ ನಾವು ಈಗಾಗಲೆ ಯೋಚಿಸಿದ್ದೇವೆ, ನಮ್ಮ‌ ಹೋರಾಟ ಮುಂದುವರೆಯುತ್ತೆ ಎಂದು ಮಾಜಿ ಸಚಿವ ಎಚ್ ಆಂಜನೇಯ ಹೇಳಿದ್ದಾರೆ.

    Post Views: 10

    Demo
    Share. Facebook Twitter LinkedIn Email WhatsApp

    Related Posts

    ನೀನು ಹೇಳಿದ್ದು ಸಾಬೀತಾದ್ರೆ ಗುಂಡು ಹೊಡೆದುಕೊಂಡು ಸಾಯ್ತೇನೆ: ಶಿವಾನಂದ ಪಾಟೀಲ್ ಗೆ ಎಸ್ ಕೆ ಬೆಳ್ಳುಬ್ಬಿ ನೇರ ಸವಾಲ್!

    May 22, 2025

    ಕಬ್ಬೂರ ಪಟ್ಟಣ ಪಂಚಾಯತಿ ಮುಖ್ಯಧಿಕಾರಿಯಿಂದ ತುಘಲಕ್ ಆಡಳಿತ: ಕಚೇರಿಗೆ ಬೀಗ ಜಡಿದ ಸಾರ್ವಜನಿಕರು!

    May 22, 2025

    ಅಂಗನವಾಡಿ ಸಹಾಯಕಿಯಿಂದ ಲಂಚಕ್ಕೆ ಬೇಡಿಕೆ: ಲಾಕ್ ಆದ ಅಧಿಕಾರಿ, ಸಿಬ್ಬಂದಿ!

    May 22, 2025

    ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ಬಂದ ಕೋತಿ.. ಅಪರೂಪದ ಘಟನೆಗೆ ವೈದ್ಯರೇ ಶಾಕ್!

    May 22, 2025

    ಕ್ಯಾನ್ಸರ್‌ ರೋಗಿಗಳಿಗೆ ಗುಡ್‌ ನ್ಯೂಸ್.. 16 ಜಿಲ್ಲಾಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇಂದ್ರಗಳ ಆರಂಭಕ್ಕೆ ಸರ್ಕಾರ ನಿರ್ಧಾರ!

    May 22, 2025

    ಪತ್ನಿಯ ಜೊತೆ ಅಕ್ರಮ ಸಂಬಂಧ: ಪ್ರಿಯಕರನನ್ನು ಮಚ್ಚಿನಿಂದ ಕೊಚ್ಚಿ ಕೊಂದ ಗಂಡ..!

    May 22, 2025

    ಪರಮೇಶ್ವರ್ ವಿರುದ್ಧ ಇಡಿ ದಾಳಿ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ: ಪ್ರಹ್ಲಾದ್ ಜೋಶಿ ಆರೋಪ

    May 22, 2025

    ಮೇಯರ್ ಮುಂದೆ ಹುಬ್ಬಳ್ಳಿಯ ಸಮಸ್ಯೆಗಳ ಅನಾವರಣ: ಅವ್ಯವಸ್ಥೆಗಳ ತಾಣ..!

    May 22, 2025

    ಕೋಡಿ ಹರಿಯುತ್ತಿದೆ ನೋಡ ಉಣಕಲ್ ಕೆರೆ: ವರುಣನ ಅಬ್ಬರಕ್ಕೆ ಮೈತುಂಬಿದ ಪ್ರತಿಷ್ಠಿತ ತಾಣ..!

    May 22, 2025

    ಅತ್ಯಾಚಾರ ಕೇಸ್: ಕಾಮಿಡಿ ಕಿಲಾಡಿ ಮಡೆನೂರು ಮನು ಅರೆಸ್ಟ್‌

    May 22, 2025

    ರಾಮನಗರ ಜಿಲ್ಲೆ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ!

    May 22, 2025

    ಭಾರತ ದೇಶಕ್ಕೆ ಸಣ್ಣ ಅಪಚಾರ ಮಾಡಿದರೂ ಭಾರತಾಂಬೆ ಸುಮ್ಮನೆ ಬಿಡುವುದಿಲ್ಲ: ಸಚಿವ ವಿ ಸೋಮಣ್ಣ

    May 22, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.