ಬೆಂಗಳೂರು: ಬೂದಿಮುಚ್ಚಿದ ಕೆಂಡದಂತಿದ್ದ ಜಾತಿ ಗಣತಿ ವಿವಾದದ ಕಿಡಿ ಸಮೀಕ್ಷಾ ವರದಿ ಸರ್ಕಾರದ ಕೈಸೇರುತ್ತಿದ್ದಂತೆ ಧಗ್ ಎಂದು ಹೊತ್ತಿಕೊಂಡಿದೆ. ಜಾತಿಗಣತಿಯಲ್ಲಿ ಅನೇಕ ಲೋಪದೋಷಗಳಿಗೆ ಎಂಬ ಆರೋಪಗಳಿಗೆ ಕೆಲ ಸಮುದಾಯಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಲು ಶುರುವಾಗಿದೆ.
ಅದೇನೆಂದು ನೋಡೋದಾದರೆ..
-ಗೊಲ್ಲ ಮತ್ತು ಯಾದವ ಜಾತಿಗಳ ನಾಯಕರಿಂದ ಸಮೀಕ್ಷೆಗೆ ತೀವ್ರ ಆಕ್ಷೇಪ
– ರಾಜ್ಯದಲ್ಲಿ ಗೊಲ್ಲ ಸಮುದಾಯದ ಜನ ಸಂಖ್ಯೆ ಸುಮಾರು 30 ಲಕ್ಷಕಿಂತ ಹೆಚ್ಚಾಗಿದೆ
– ನಮ್ಮ ಸಮುದಾಯವನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ
-ಒಟ್ಟಾರೆಯಾಗಿ ಗೊಲ್ಲರು ಅತೀ ಹಿಂದುಳಿದ ವರ್ಗಗಳಲ್ಲಿ ಇವೆ
ಗೊಲ್ಲ, ಯಾದವ, ಹಣಬಾರ ಮತ್ತು ಕಾಡುಗೊಲ್ಲ ಸಮುದಾಯಗಳು ಪ್ರಸ್ತುತ ಪ್ರವರ್ಗ-1 ರಲ್ಲಿ ಇರುತ್ತದೆ
-ಈಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯವನ್ನು ಪ್ರವರ್ಗ -1ಎರಲ್ಲಿ ಸೇರಿಸಿರುತ್ತಾರೆ
-ಯಾದವರನ್ನು ಪ್ರವರ್ಗ-1ಬಿ ಗೆ ಸೇರಿಸಿ ಗೊಲ್ಲ-ಯಾದವರನ್ನು ಬೇರ್ಪಡಿಸಿರುವುದು ಖಂಡನೀಯ
-ಈಗ ಸರ್ಕಾರದ ಮುಂದಿರುವ ವರದಿ ಪ್ರಕಾರ ಪ್ರವರ್ಗ-1ಎ ರಲ್ಲಿ ಬರುವ ಅಲೆಮಾರಿ- ಅರೆ ಅಲೆಮಾರಿ ವರ್ಗಗಳಿಗೆ ಆಘಾತ ಉಂಟು ಮಾಡುವ ರೀತಿಯಲ್ಲಿದೆ
-ಕೆನೆಪದರ ನೀತಿಯನ್ನು ಅಳವಡಿಸಲು ಸೂಚಿಸಿರುವುದು ಸರಿಯಾದ ಕ್ರಮವಲ್ಲ
-ಇದನ್ನು ಸರ್ಕಾರವು ಕೊಡಲೇ ಸರಿ ಪಡಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎನ್ನುತ್ತಿದ್ದಾರೆ ಯಾದವ ಗೊಲ್ಲ ಸಮುದಾಯದ ನಾಯಕರು
– ಇದೇ ಮಾದರಿಯಲ್ಲಿ ಹಲವು ಜಾತಿಗಳ ವರ್ಗೀಕರಣ ಮಾಡಿರುವ ಸಮೀಕ್ಷೆ
-ಒಂದೇ ಜಾತಿಯ ಬೇರೆ ಬೇರೆ ಉಪ ಪಂಗಡಗಳನ್ನು ಬೇರೆ ಬೇರೆ ಕ್ಯಾಟಗರಿಯಲ್ಲಿ ಸೇರ್ಪಡೆ ಮಾಡಿದ್ದಕ್ಕೆ ತೀವ್ರ ವಿರೋಧ