ಬೆಂಗಳೂರು: ಜಾತಿಗಣತಿ ವರದಿ ವಿಚಾರವಾಗಿ ರಾಜಕೀಯ ಟೀಕೆ ಟಿಪ್ಪಣಿಗಳಿಗೆ ಉತ್ತರ ಕೊಡಲು ಹೋಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗ ವರದಿಯ ಬಗ್ಗೆ ನಾವು ಏನು ಹೇಳಲು ಆಗುವುದಿಲ್ಲ.
2018ರಿಂದ ಪ್ರಾರಂಭವಾಗಿದ್ದು, 10 ವರ್ಷಗಳ ಬಳಿಕ ನಾವು ಆಚೆಗೆ ತರುತ್ತಿದ್ದೇವೆ. ಸ್ಟಡಿ ಮಾಡಿ ಚರ್ಚೆ ಮಾಡೋಣ. ರಾಜಕೀಯ ಟೀಕೆ ಟಿಪ್ಪಣಿಗಳಿಗೆ ಉತ್ತರ ಕೊಡಲು ಹೋಗುವುದಿಲ್ಲ. ಸಮುದಾಯದ ಅಭಿಪ್ರಾಯಗಳು,
ಹುಡುಗಿಯರೇ ನೀವು ಕೂಡ ಮೆಡಿಮಿಕ್ಸ್ ಸೋಪ್ ಬಳಸ್ತಿದ್ದೀರಾ? ಇದು ಖಂಡಿತ ನಿಮಗಲ್ಲ!
ರಾಜಕಾರಣಿಗಳ ಅಭಿಪ್ರಾಯಗಳು ಎಲ್ಲವೂ ಬರುತ್ತಿದೆ. ಚರ್ಚೆ ಮಾಡಿ ನಂತರ ನೋಡುತ್ತೇವೆ ಎಂದು ಹೇಳಿದರು. ನಾನು ವರದಿಯನ್ನು ಇನ್ನೂ ಓದುತ್ತಿದ್ದೇನೆ, ನಾಲ್ಕೈದು ಪೇಜ್ ಓದಿದ್ದೇನೆ. ಒಟ್ಟಾರೆ ಇದರಲ್ಲಿ ಎರಡು ಮೂರು ವಿಚಾರಗಳಿವೆ. ಅದರ ಪರಿಣಾಮ, ಯೋಜನೆಗಳು, ಚರ್ಚೆ ಒಂದು ಭಾಗದಲ್ಲಿ ಇಡೋಣ ಎಂದು ತಿಳಿಸಿದರು.