Close Menu
Ain Live News
    Facebook X (Twitter) Instagram YouTube
    Wednesday, June 25
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಜಾತಿ ಗಣತಿ ವರದಿ: ಸಿದ್ದು ಸಂಪುಟದ ಸಚಿವರು ಏನಂದ್ರು..?

    By Author AINApril 11, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಜಾತಿಗಣತಿ ವರದಿ ವರದಿ ಸ್ವೀಕಾರ ಮಾಡಬೇಕೋ ಬೇಡವೋ ಎಂಬುದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೆಲವೇ ಹೊತ್ತಲ್ಲಿ ನಿರ್ಧಾರವಾಗಲಿದೆ.

    ಆದರೆ, ಜಾತಿ ಗಣತಿ ವರದಿ ಬಗ್ಗೆ ಸಚಿವರು ತಮ್ಮದೇ ಅಭಿಪ್ರಾಯ ಹೇಳಿದ್ದಾರೆ.  ಜಾತಿ ಗಣತಿ ವರದಿ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಯುತ್ತೆ. ಕ್ಯಾಬಿನೆಟ್ ನಲ್ಲಿ ಚರ್ಚೆಯಾದ ಬಳಿಕ ಮಾತನಾಡುತ್ತೇನೆ. ವರದಿ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ ಎಂದ ಸಚಿವ ಶಿವರಾಜ್ ತಂಗಡಗಿ, ವರದಿ ಎಲ್ಲಿಯೂ ಬಹಿರಂಗ ಆಗಿಲ್ಲ. ಈಗ ಬರುತ್ತಿರುವ ಅಂಕಿ ಸಂಖ್ಯೆ ಊಹಾಪೋಹ. ಇದು ಜಾತಿಗಣತಿ ಅಲ್ಲ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ. ಇದಕ್ಕೆ ಯಾರು ಆತಂಕಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

    ವರದಿ ಓಪನ್ ಆಗಲಿ, ಆಮೇಲೆ ನೋಡೋಣ

    ಜಾತಿ ಗಣತಿ ವರದಿ ಜಾರಿಗೆ ಮುಹೂರ್ತ ಫಿಕ್ಸ್ ಆಗಿದೆ. ಎಲ್ಲರೂ ಒಟ್ಟಾಗಿ ತೀರ್ಮಾನ ಮಾಡುತ್ತೇವೆ. ವರದಿ ಜಾರಿ ಬಳಿಕ ನೋಡೋಣ ಏನು ಆಗುತ್ತದೆ ಎಂದು ಹೇಳಿರುವ ಸಚಿವ ಸತೀಶ್ ಜಾರಕಿಹೊಳಿ‌,  ಪ್ರಬಲ ಸಮುದಾಯದ ವಿರೋಧದ ಬಗ್ಗೆ ವರದಿ ಓಪನ್ ಆಗಲಿ, ಆಮೇಲೆ ನೋಡೋಣ. ವರದಿ ಜಾರಿಯಾದ ಮೇಲೆ ಸದನವನ್ನೇ ಕರೆಯಬೇಕು. ಅಲ್ಲಿ ಯಾರೆಲ್ಲ ಏನೇನು ಪ್ರಶ್ನೆ ಕೇಳ್ತಾರೆ ನೋಡೋಣ ಎಂದಿದ್ದಾರೆ.

    ನಮ್ಮ ಹೈಕಮಾಂಡ್ ವರದಿ ಜಾರಿಗೆ ಬದ್ಧ

    ಜಾತಿ ಗಣತಿ ವರದಿ ಜಾರಿಗೆ ನಮ್ಮ ಹೈಕಮಾಂಡ್ ವರದಿ ಜಾರಿಗೆ ಬದ್ಧವಾಗಿದೆ ಎಂದಿರುವ ಸಚಿವ ಕೆ.ಹೆಚ್‌ ಮುನಿಯಪ್ಪ, ಕ್ಯಾಬಿನೆಟ್ ನಿರ್ಧಾರ ಏನಾಗುತ್ತಿದೆ ನೋಡಿ.  ಎಐಸಿಸಿ ಅಧ್ಯಕ್ಷರು, ನಮ್ಮ ನಾಯಕರು ಜಾತಿಗಣತಿ ಆದ್ರೆ ಯಾವುದೇ ಜಾತಿಗೆ ಅನ್ಯಾಯ ಆಗಲ್ಲ ಅಂತ ಹೇಳಿದ್ದಾರೆ. ಇದರಿಂದ ಯಾವುದೇ ಸಮುದಾಯಕ್ಕೆ ತೊಂದರೆ ಆಗುವುದಿಲ್ಲ. ವರದಿಗೆ ಯಾರ ವಿರೋಧವೂ ಇಲ್ಲ. ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ತೊಂದರೆ ಆಗುವುದಿಲ್ಲ ಎಂದಿದ್ದಾರೆ.

    ಜಾತಿ ಗಣತಿ ಅಲ್ಲ.‌.ಸಾಮಾಜಿಕ ಆರ್ಥಿಕ ಸಮೀಕ್ಷೆ

    ಇದು ಜಾತಿ ಗಣತಿ ವರದಿ ಅಲ್ಲ. ಸಾಮಾಜಿಕ ಆರ್ಥಿಕ ಸಮೀಕ್ಷೆ. ಅದರಲ್ಲಿ ಏನಿದೆ, ಏನಿಲ್ಲ ಗೊತ್ತಿಲ್ಲ. ವರದಿ ಮಂಡನೆ ಬಳಿಕ ಏನಿದೆ, ಏನಿಲ್ಲ ಅಂತ‌ ಗೊತ್ತಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅದರಲ್ಲಿ ಅಂಕಿ ಅಂಶ ಏನಿದೆ, ಸೆನ್ಸೆಸ್ ರಿಪೋರ್ಟ್ ಸರಿಸಮನಾಗಿದೆಯಾ ಇಲ್ಲವಾ ಗೊತ್ತಾಗಲಿದೆ. ದತ್ತಾಂಶ ಟ್ಯಾಲಿ ಆಗಬೇಕು.  ಒಳ ಮೀಸಲಾತಿ ವಿಚಾರವಾಗಿ ಜಸ್ಟೀಸ್ ನಾಗಮೋಹನ್ ದಾಸ್ ಕಮಿಟಿ ವರದಿ ಮಾಡಬೇಕು.  ಏನಾಗಲಿದೆ ನೀಡೋಣ ಎಂದಿದ್ದಾರೆ.

    ಲಿಂಗಾಯತ ಸಮುದಾಯ ವಿರೋಧ ಇಲ್ಲ

    ಜಾತಿ ಗಣತಿ ವರದಿಗೆ ಒಕ್ಕಲಿಗರು, ಲಿಂಗಾಯತ ಸಮಾಜದ ವಿರೋಧ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಹತ್ತು ವರ್ಷಗಳಾಗಿರೋದ್ರಿಂದ ರಿವ್ಯೂ ಆಗಬೇಕು ಅಂತ ಬೇಡಿಕೆ ಇದೆ. ಜಾತಿ ಗಣತಿ ಆಗಬೇಕು ಅಂತ ಎಲ್ಲಾ ಸಮುದಾಯ ಒಪ್ಪಿದೆ. ನಮ್ಮ‌ ಪಕ್ಷದಲ್ಲಿ ಕೂಡ ಯಾವುದೇ ವ್ಯತ್ಯಾಸ ಇಲ್ಲ. ಕ್ಯಾಬಿನೆಟ್ ನಲ್ಲಿ ಚರ್ಚೆಮಾಡಿ, ಸಬ್ ಕಮಿಟಿ ಮಾಡೋದಾ ಅಂತ ನೋಡಬೇಕು. ಇಲ್ಲ ಜನರ ಅಭಿಪ್ರಾಯಕ್ಕೆ ಬಿಡೋದಾ ನೋಡಬೇಕು.  ಯಾವುದೇ ಸಮುದಾಯಕ್ಕೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ‌ ಎಂದಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ!

    June 25, 2025

    ಅಬ್ಬಬ್ಬಾ.. ಜನರು ಹೆಚ್ಚು ಖರ್ಚು ಮಾಡೋದು ಇದಕ್ಕೇನಾ..? ವರದಿಯಲ್ಲಿ ಶಾಕಿಂಗ್ ವಿಷಯ ಬಯಲು

    June 25, 2025

    ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡುವವರ ವಿರುದ್ಧ ಸಿಎಂ-ಡಿಸಿಎಂ ಕ್ರಮ ತಗೊತಾರೆ: ಎಂಬಿ ಪಾಟೀಲ್!

    June 25, 2025

    Post Office Scheme: ಸಣ್ಣ ಉಳಿತಾಯ.. ದೊಡ್ಡ ಲಾಭ: ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿ ಮಾಡುತ್ತೆ ಈ ಪೋಸ್ಟ್ ಆಫೀಸ್ ಸ್ಕೀಮ್..!

    June 25, 2025

    ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಯುವತಿ ಸಾವು: ಡಿಸಿಪಿ ಸಾರಾ ಫಾತೀಮಾ ಹೇಳಿದ್ದೇನು?

    June 24, 2025

    ಬೆಳ್ಳಂ ಬೆಳಗ್ಗೆ ಭ್ರಷ್ಟರ ಬೇಟೆಯಾಡಿದ ‘ಲೋಕಾಯುಕ್ತ’: ಒಟ್ಟು 34.90 ಕೋಟಿ ಮೌಲ್ಯದ ಆಸ್ತಿ ಪತ್ತೆ!

    June 24, 2025

    ಕೆಐಎಡಿಬಿ ಭೂಸ್ವಾಧೀನಕ್ಕೆ ವಿರೋಧ: 495 ಎಕರೆ ಕೈ ಬಿಡಲು ಸರ್ಕಾರ ನಿರ್ಧಾರ.. ಪ್ರತಿಭಟನೆ ಕೈಬಿಡಲು ಒಪ್ಪದ ರೈತರು!

    June 24, 2025

    ರಾತ್ರಿ ಹೊತ್ತು ಎರಡು ಲವಂಗ ತಿನ್ನೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 24, 2025

    ಯಾವ ರೋಗವೂ ನಿಮ್ಮ ಬಳಿ ಸುಳಿಯದಿರಲು ನಿತ್ಯ ಒಂದು ಹಿಡಿ ಈ ಸೊಪ್ಪು ತಿನ್ನಿ!

    June 24, 2025

    Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ನಾಳೆ ಕರೆಂಟ್‌ ಕಟ್‌!

    June 24, 2025

    ನನಗೆ ಅಪಮಾನ ಮಾಡಿದ ಅಧಿಕಾರಿ ರಾಜೇಂದ್ರ ಕಠಾರಿಯ ವಿರುದ್ಧ ಸರ್ಕಾರ ಕ್ರಮ ಜರುಗಿಸಲೇ ಇಲ್ಲ: ರಾಜು ಕಾಗೆ

    June 24, 2025

    ಹೈಟೆಕ್ ಡಿಫೆನ್ಸ್ & ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿಗೆ ಜಮೀನು: ಸಚಿವ ಎಂ ಬಿ ಪಾಟೀಲ್

    June 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.