ಚಿಕ್ಕೋಡಿ : ಜಾತಿಗಣತಿ ಪ್ರಾಮಾಣಿಕತೆಯಿಂದ ಕೂಡಲ್ಲ ಹಾಗೂ ಅವೈಜ್ಞಾನಿಕವಾಗಿದೆ ಎಂದ ಶ್ರೀಶೈಲ ಸೂರ್ಯಸಿಂಹಾಸನ ಮಹಾಪೀಠದ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಜಾತಿಗಣತಿ ವರದಿಯನ್ನು ಜಾರಿ ಮಾಡಲು ಹೊರಟಿದೆ ಜಾತಿಗಣತಿ ಪ್ರಾಮಾಣಿಕತೆಯಿಂದ ಕೂಡಲ್ಲ ಹಾಗೂ ಅವೈಜ್ಞಾನಿಕವಾಗಿದೆ ಯಾವುದೇ ಆಧಾರವಿಲ್ಲದ,ಗೊತ್ತು -ಗುರಿಯಿಲ್ಲದ ಜಾತಿಗಣತಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತಿಗಣತಿ ಪ್ರಾಮಾಣಿಕತೆಯಿಂದ ಕೂಡಿಲ್ಲ. ಮನೆ ಮನೆಗೆ ತೆರಳಿ ಜಾತಿ ಗಣತಿ ಮಾಡಿಲ್ಲ. ಸರ್ಕಾರ ಜಾತಿಗಣತಿಯನ್ನ ಜಾರಿ ಮಾಡಿದ್ರೆ ಕೈ ಸುಟ್ಟಕೊಳ್ಳುತ್ತದೆ. ವೀರಶೈವ ಸಮಾಜಕ್ಕೆ ಅನ್ಯಾಯವಾಗದಂತೆ ಸಮಾಜದ ಶಾಸಕರು ಸಚಿವರು ನೋಡಿಕೊಳ್ಳಬೇಕು. ಸರ್ಕಾರದ ಮೇಲೆ ಒತ್ತಡ ಹಾಕಿ ಜಾತಿಗಣತಿ ಜಾರಿಯಾಗದಂತೆ ನೋಡಿಕೊಳ್ಳಿ ಎಂದು ವೀರಶೈವ ಸಮಾಜದ ಶಾಸಕ ಹಾಗೂ ಸಚಿವರಿಗೆ ಶ್ರೀಗಳ ಕರೆ ನೀಡಿದರು.
ಜಾತಿಗಣತಿ ಕಿಚ್ಚು: ಯಾವುದೇ ತೀರ್ಮಾನಕ್ಕೆ ಬರದ ಸರ್ಕಾರ: ಚರ್ಚೆ ಅಪೂರ್ಣ, ಒಮ್ಮತಕ್ಕೆ ಬಾರದ ಸಂಪುಟ ಸಭೆ!
ಜನಸಂಖ್ಯೆ ಬೆಳವಣಿಗೆ ಆಗುತ್ತದೆಯೇ ಹೊರತು ಕಡಿಮೆ ಆಗಲ್ಲ. ಜಾತಿಗಣತಿಯಲ್ಲಿ ವೀರಶೈವರ ಸಂಖ್ಯೆ ೧ ಕೋಟಿಗಿಂತ ಹೆಚ್ಚಳ ಇರಬೇಕಿತ್ತು. ಕೇವಲ 65 ಲಕ್ಷ ಮಾತ್ರಕ್ಕೆ ಸೀಮಿತಗೋಳಿಸಿದ್ದಾರೆ. ಈ ಜಾತಿಗಣತಿಯನ್ನ ಕೈ ಬಿಟ್ಟು ಮರು ಜಾತಿಗಣತಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.