ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಿಂದ ಬಂದ್ಮೇಲೆ ಟೆಂಪಲ್ ರನ್ ಶುರು ಮಾಡಿದ್ದಾರೆ. ಇಂದು ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕೊಟ್ಟಿಯೂರು ದೇವಸ್ಥಾನಕ್ಕೆ ನಟ ದರ್ಶನ್ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಮಳೆಯಲ್ಲಿಯಯೇ ಡಿಬಾಸ್ ಮಹಾದೇವನ ದರ್ಶನ ಪಡೆದಿದ್ದಾರೆ.
ಈ ಹಿಂದೆ ಕೇರಳದ ಶ್ರೀಮಡಾಯಿ ಕಾವು ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ದರ್ಶನ್ ಕೊಲೆ ಅರೋಪದಲ್ಲಿ ಜಾಮೀನು ಸಿಕ್ಕ ಬಳಿಕ ದೇವರ ಮೊರೆ ಹೋಗುತ್ತಿದ್ದಾರೆ. ಇಂದು ಪತ್ನಿ ವಿಜಯಲಕ್ಷ್ಮೀ, ಧನ್ವೀರ್ ಜೊತೆ ದಚ್ಚು ಕೊಟ್ಟಿಯೂರು ಮಹಾದೇವನಿಗೆ ನಮಿಸಿದ್ದಾರೆ.
ಈ ದೇವಸ್ಥಾನ ವರ್ಷದಲ್ಲಿ ಎರಡು ತಿಂಗಳ ಕೆಲವು ದಿನ ಮಾತ್ರ ತೆರೆಯಲ್ಪಟ್ಟಿರುತ್ತದೆ. 27ರಿಂದ, 28 ದಿನಗಳ ವರೆಗೂ ಭಕ್ತರಿಗೆ ಭೇಟಿಗೆ ಅವಕಾಶ ಇರುತ್ತದೆ.ಸಾಧಾರಭವಾಗಿ ಜೂನ್ 8ರಿಂದ ಜುಲೈ 4ರ ತನಕ ಈ ದೇವಸ್ಥಾನ ಭಕ್ತಾದಿಗಳ ಭೇಟಿಗೆ ಮುಕ್ತವಾಗಿರುತ್ತದೆ. ಇಕ್ಕರೆ ಕೊಟ್ಟಿಯೂರು ದೇವಸ್ಥಾನ ವರ್ಷಪೂರ್ತಿ ತೆರೆದಿದ್ದರೂ ಅಕ್ಕರೆ ಕೊಟ್ಟಿಯೂರು ಬರೀ 28 ದಿನ ತೆರೆದಿರುತ್ತದೆ. ಸದ್ಯ ದರ್ಶನ್ ಅವರು ಸದ್ಯ ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.