ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹುಲಸಗುಂದಿ ಗ್ರಾಮದಲ್ಲಿ ಹುಲಿವೊಂದು ಹಾಡು ಹಗಲೇ ಮೇಕೆಯನ್ನು ಕಚ್ಚಿಕೊಂಡು ಹೋಗುತಿರುವ ಚಿತ್ರ ಸ್ಥಳೀಯರ ಮೊಬೈಲ್ ನಲ್ಲಿ ಸರಿಯಾಗಿದೆ,ಗ್ರಾಮದ ರೈತ ಮಹಾದೇವೇಗೌಡ ಎಂಬುವವರ ಜಮೀನಿನಲ್ಲಿ ಮೇಕೆಯನ್ನು ಹುಲಿ ತಿಂದ್ದು ಹಾಕಿರುವ ಘಟನೆ ಇಂದು ಸರಿ ಸುಮಾರು11ಗಂಟೆಯಲ್ಲಿ ನಡೆದಿದೆ.
Smartphone Explosion: ಈ ತಪ್ಪುಗಳನ್ನು ಎಂದಿಗೂ ಮಾಡ್ಬೇಡಿ: ಮೊಬೈಲ್ ಬ್ಲಾಸ್ಟ್ ಆಗತ್ತೆ!
ರೈತ ಮಹದೇವೇಗೌಡ ಜಮೀನಿಗೆ ಮೇಕೆ ಮೇಯಿಸಲು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು ರೈತ ಪರಿಹಾರಕ್ಕಾಗಿ ಬಂಡಿಪುರ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ. ಕೆಲವು ತಿಂಗಳುಗಳಿಂದ ಕಾಡಿನಲ್ಲಿರುವ ಪ್ರಾಣಿಗಳು ನಾಡಿನತ್ತ ಬರುತ್ತಿರುವ ಪ್ರಕರಣ ಗಳು ಹೆಚ್ಚಾಗಿದೆ,ಇದಕ್ಕೆ ಕಡಿವಾಣ ಹಾಕಲು ಬಂಡೀಪುರ ಅರಣ್ಯ ಇಲಾಖೆಯು ಎಚ್ಚೆತ್ತುಕೊಳ್ಳಬೇಕಾಗಿದೆ,