ಚಾಮರಾಜನಗರ.:- ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಸಫಾರಿ ವಲಯದ ಕೆರೆಯೊಂದರಲ್ಲಿ ಜಿಂಕೆಯೊಂದು ನೀರು ಹರಸಿ ಬಂದು ಹುಲಿಗೆ ಆಹಾರವಾದ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ತಾವರೆಕಟ್ಟೆ ಸಫಾರಿ ವಲಯದಲ್ಲಿ ಈ ಘಟನೆ ನಡೆದಿದೆ.
ಸಫಾರಿ ವಲಯದ ತಾವರೆಕಟ್ಟೆ ಕೆರೆಯಲ್ಲಿ ಮದ್ಯಾಹ್ನ ಬಾಯಾರಿಕೆ ತಣಿಸಲು ಜಿಂಕೆಯೊಂದು ಬಂದಿದೆ. ಈ ವೇಳೆ ಮೂರ್ಕೆರೆ ಫೀಮೇಲ್ ಟೈಗರ್ ಹೊಂಚು ಹಾಕುತ್ತಾ ಜಿಂಕೆಯನ್ನು ಭೇಟೆಯಾಡಿ ಕೊಂದು ಹಾಕಿದೆ.
ನಂತರ ತನ್ನ ನಾಲ್ಕು ಮರಿಗಳನ್ನೂ ಭೇಟೆಯಾಡಿದ ಜಿಂಕೆಗೆ ಆಹಾರ ನೀಡಿ ಭಾನುವಾರದ ಭರ್ಜರಿ ಭೋಜನ ಮುಗಿಸಿದೆ. ಈ ದೃಶ್ಯವನ್ನು ಸಫಾರಿಗೆ ತೆರಳಿದ್ದ ಪ್ರವಾಸಿಗರು ಕಣ್ತುಂಬಿಕೊಂಡಿದ್ದು ಹುಲಿಯು ಜಿಂಕೆ ಭೇಟೆಯಾಡುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.