ಚಾಮರಾಜನಗರ:- ಬಂಡೀಪುರ ಅಧಿಕಾರಿಗಳ ವಿರುದ್ದ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ, ಕಿಲೋಮೀಟರ್ ಸಾಲು ಗಟ್ಟಿ ನಿಂತ ವಾಹನಗಳು ಪರದಾಡಿದ ಸಾರ್ವಜನಿಕರು.
ಬಂಡೀಪುರದಲ್ಲಿ ಅರಣ್ಯ ಅಧಿಕಾರಿಗಳೇ ಕಾನೂನು ಉಲ್ಲಂಘನೆ ನಡೆಸಿದ್ದಾರೆ. ಎಂದು ಆರೋಪಿಸಿ ಇಂದು ರೈತ ಸಂಘಟನೆ ಮುಖಂಡರು ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು ತಾಲೂಕಿನ ಬಂಡೀಪುರ ಹುಲಿ ಸಂರಕ್ಚಿತ ಅರಣ್ಯ ಪ್ರದೇಶದ ಹಿಮವದ್ ಗೋಪಾಲಸ್ವಾಮಿಬೆಟ್ಟದಲ್ಲಿ ಸ್ಥಳೀಯರಿಗೆ ಒಂದು ಕಾನೂನು ಹಾಗೂ ಕೇರಳದವರಿಗೆ ಒಂದು ಕಾನೂನು ರೂಪಿಸಿರುವ ಬಂಡೀಪುರ ಅರಣ್ಗ ಇಲಾಖೆ ಅಧಿಕಾರಿಗಳು ಸರ್ಕಾರದ ಆದೇಶವೆಂದು ಸುಳ್ಳು ಪತ್ರ ವ್ಯವಹಾರ ನಡೆಸಿ ಅರಣ್ಯ ಕಾಯಿದೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ಅರಣ್ಯ ಕಾಯಿದೆ ಉಲ್ಲಂಘನೆಗೆ ಅವಕಾಶ ನೀಡಿ ಕಾನೂನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಬಂಡೀಪುರ ಎಸಿಎಫ ಹಾಗೂ ಆರ್.ಎಫ.ಓ ರನ್ನು ಅಮಾನತ್ತುಗೊಳಿಸಿ ಎಂದು ರೈತ ಹೋರಾಟಗಾರರು ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಸುಮಾರು 2 ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸುಮಾರು ಕಿಲೋಮೀಟರ್ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರು ಪರದಾಡುವಂತಾಯಿತು. ಪೋಲೀಸರು ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾಯ್ತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ಶೂಟಿಂಗ್ ನಡೆಸಲು ಸಿನಿಮಾದವರು ತಹಸೀಲ್ದಾರ್ ಬಳಿ ಅನುಮತಿ ಪಡೆಯಬೇಕಿತ್ತು. ಅಲ್ಲದೆ ಚಿತ್ರೀಕರಣ ತಂಡದವರು ಶೂಟಿಂಗ್ ನಡೆಸಲು ಮೇಲಧಿಕಾರಿಗಳ ಬಳಿ ಅನುಮತಿ ಪಡೆದಿದ್ದಾರೆ ತಪ್ಪಿದ್ದರೆ ಸರಿಪಡಿಸೋಣ ಎಂದು ಪ್ರತಿಭಟನಾಕಾರರ ಮನವೊಲಿಸಿಲು ಪ್ರಯತ್ನಿಸಿದರು.
ಸಿನಿಮಾದವರು ಮೇಲಾಧಿಕಾರಿಗಳ ಅನುಮತಿ ಪಡೆದಿದ್ದಾರೆ. ರೈತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿರುವ ಕಾರಣ ಮೂರ್ನಾಲ್ಕು ದಿನದಲ್ಲಿ ಅಧಿಕಾರಿಗಳ ಸಭೆ ಕರೆದು ಕೂಲಂಕುಷವಾಗಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದರು. ರಸ್ತೆ ತಡೆಯಿಂದ ಕಿಲೋಮೀಟರವರೆಗೆ ಸಾರ್ವಜನಿಕರಿಗೆ ವಾಹನ ಸವಾರರಿಗೆ ತುರ್ತು ರೋಗಿಗಳಿಗೆ ಸಮಸ್ಯೆ ತಲೆ ದೋರಲಿದೆ ಕೂಡಲೆ ಪ್ರತಿಭಟನೆ ಹಿಂಪಡೆಯಿರಿ ಎಂದು ಮನವಿ ಮಾಡಿದರು.
ಶಾಸಕರ ಭರವಸೆ ಮೇರೆಗೆ ಪ್ರತಿಭಟನಾಕಾರರು ರಸ್ತೆ ತಡೆದು ಪ್ರತಿಭಟನೆಯನ್ನು ನಡೆಸುವುದನ್ನು ಕೈಬಿಟ್ಟು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮುಂದುವರಿಸಿದರು.