Close Menu
Ain Live News
    Facebook X (Twitter) Instagram YouTube
    Wednesday, May 21
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    World Cup: ಅಂತಿಮ ಕ್ಷಣದಲ್ಲಿ ಬದಲಾಯ್ತ ಪಿಚ್!? -ಕೊಹ್ಲಿ-ಅಯ್ಯರ್ ಶತಕ ಸಂಭ್ರಮ ನಡುವೆಯೇ ಹೀಗೊಂದು ವಿವಾದ

    By AIN AuthorNovember 15, 2023
    Share
    Facebook Twitter LinkedIn Pinterest Email
    Demo

    ಟೀಂ ಇಂಡಿಯಾಗೆ ವಿಶ್ವಕಪ್ ಟೂರ್ನಿಯಲ್ಲಿ ಬೇಕಾಗುವಂತೆ ಪಿಚ್, ಭಾರತದ ಬೌಲರ್‌ಗಳಿಗೆ ನೆರವಾಗುವ ಬಾಲ್ ನೀಡಲಾಗುತ್ತಿದೆ. ಡಿಆರ್‌ಎಸ್, ಆಂಪೈರ್ ನಿರ್ಧಾರಗಳು ಭಾರತದ ಪರವಾಗಿ ಬರುತ್ತಿದೆ ಅನ್ನೋ ಆರೋಪ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಸೇರಿದಂತೆ ಕೆಲವರು ಮಾಡಿದ್ದಾರೆ.

    ಈ ಆರೋಪ-ಟೀಕೆಗಳ ನಡುವೆ ಮುಂಬೈ ಪಿಚ್ ವಿವಾದ ಶುರುವಾಗಿದೆ. ಭಾರತ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಬಿಸಿಸಿಐ ಅಂತಿಮ ಕ್ಷಣದಲ್ಲಿ ಪಿಚ್ ಬದಲಾಯಿಸಿದೆ ಅನ್ನೋ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ. ವಿರಾಟ್ ಕೊಹ್ಲಿ ದಾಖಲೆಯ ಶತಕ ಹಾಗೂ ಶ್ರೇಯಸ್ ಅಯ್ಯರ್ ಸ್ಫೋಟಕ ಸೆಂಚುರಿ ಬಳಿಕ ಈ ಪಿಚ್ ವಿವಾದ ಜೋರಾಗಿದೆ.

    ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ವಾಂಖೆಡೆ ಕ್ರೀಡಾಂಗಣದಲ್ಲಿ ಪಿಚ್‌ಗಳ ಪೈಕಿ ಹೊಸ ಪಿಚ್ ಅಂತಿಮಗೊಳಿಸಲಾಗಿತ್ತು. ಐಸಿಸಿ ಪಿಚ್ ಕನ್ಸಲ್ಟೆಂಟ್ ಆಯಂಡಿ ಅಟ್ಕಿನ್ಸನ್ ಈ ಪಿಚ್ ಅಂತಿಮಗೊಳಿಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಬಿಸಿಸಿಐ ಪಿಚ್ ಬದಲಿಸಿದೆ. ಮುಂಬೈನ ವಾಂಖೆಡೆಯಲ್ಲಿ ಐಸಿಸಿ ಲೀಗ್ ಪಂದ್ಯಕ್ಕೆ ಬಳಸಲಾದ ಪಿಚನ್ನು ಸೆಮಿಫೈನಲ್ ಪಂದ್ಯಕ್ಕೆ ಬಳಸಲಾಗಿದೆ ಎಂದು ಡೈಲ್ ಮೇಲ್ ವರದಿ ಮಾಡಿದೆ.

    ಬಿಸಿಸಿಐ ಟೀಂ ಇಂಡಿಯಾಗೆ ಅನುಗುಣವಾಗಿ ಪಿಚ್ ಬದಲಿಸಲಾಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಲೀಗ್ ಹಂತದ ಪಂದ್ಯದಲ್ಲಿ ಬಳಕೆಯಾದ ಪಿಚ್‌ನ್ನು ಐಸಿಸಿ ಅಂತಿಮಗೊಳಿಸಿತ್ತು. ಆದರೆ ಬಿಸಿಸಿಐ ಸ್ಲೋ ಪಿಚ್‌ಗೆ ಬದಲಾಯಿಸಿದೆ. ಇದು ಟೀಂ ಇಂಡಿಯಾಗೆ ವರವಾಗಲಿದೆ ಅನ್ನೋ ಆರೋಪಗಳು ಎದುರಾಗಿದೆ. ಪಿಚ್ ಲಾಭ ಪಡೆದಿರುವ ಭಾರತ ಈಗಾಗಲೇ ಎರಡು ಸೆಂಚುರಿ ಸಿಡಿಸಿದೆ. ಇನ್ನು ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ ಅನ್ನೋ ಆರೋಪಗಳು ವ್ಯಕ್ತವಾಗಿದೆ.

    ವಾಂಖೆಡೆ ಪಿಚ್ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಸುನಿಲ್ ಗವಾಸ್ಕರ್, ಒಂದು ಪಿಚ್ ಆಯ್ಕೆ ಮಾಡಿದರೆ ಎರಡೂ ತಂಡಗಳು ಅದೇ ಪಿಚ್‌ನಲ್ಲಿ ಆಡಲಿದೆ. ಭಾರತ ತಂಡ ಯಾವುದೇ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದೆ. ಲೀಗ್ ಹಂತದ 9 ಪಂದ್ಯದಲ್ಲಿ ಭಾರತ ತಂಡದ ಸಾಮರ್ಥ್ಯವನ್ನು ಎಲ್ಲೂ ಕಂಡಿದ್ದಾರೆ. ಮುಂಬೈನ ವಾಂಖೆಡೆ ಪಿಚ್ ಬ್ಯಾಟಿಂಗ್ ಸಹಕಾರಿ ಪಿಚ್‌ಗಳಾಗಿದೆ. ಹೀಗಾಗಿ ಇಲ್ಲಿ ರನ್ ಮಳೆ ಹರಿಯುತ್ತದೆ. ಅನಗತ್ಯ ಪಿಚ್ ಚರ್ಚೆಯ ಅಗತ್ಯವಿಲ್ಲ. ಭಾರತದ ಅದ್ಭುತ ಬೌಲಿಂಗ್ ದಾಳಿ ಹೊಂದಿದೆ. ಹೀಗಾಗಿ ಯಾವುದೇ ಟಾರ್ಗೆಟ್ ನೀಡಿದರೂ ಡಿಫೆಂಡ್ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

    ಮಾಧ್ಯಮಗಳು ಅನಗತ್ಯ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ಟಾಸ್ ಬಳಿಕ ಪಿಚ್ ಬದಲಾಯಿಸಿದ್ದರೆ ಅದು ಅಕ್ರಮ. ಅಂತಹ ಸಂದರ್ಭದಲ್ಲಿ ಈ ಚರ್ಚೆ ಅವಶ್ಯಕತ. ಇಲ್ಲಿ ಪಂದ್ಯದ ದಿನಕ್ಕೂ ಮೊದಲೇ ಪಿಚ್ ಬದಲಾಯಿಸಲಾಗಿದೆ ಎಂದಿದ್ದಾರೆ

    Post Views: 3

    Demo
    Share. Facebook Twitter LinkedIn Email WhatsApp

    Related Posts

    PAK vs BAN: ಪಾಕಿಸ್ತಾನ ಕ್ರಿಕೆಟ್ʼನಿಂದ ಬಾಬರ್, ರಿಜ್ವಾನ್, ಶಾಹೀನ್ ಔಟ್..!?

    May 21, 2025

    IPL 2025: MI vs DC ಪಂದ್ಯಕ್ಕೆ ಮಳೆ ಭೀತಿ: ಮ್ಯಾಚ್‌ ರದ್ದಾದ್ರೆ ಪ್ಲೇಆಫ್ ಪ್ರವೇಶ ಯಾರಿಗೆ..?

    May 21, 2025

    IPL 2025: MS ಧೋನಿ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ವೈಭವ್ ಸೂರ್ಯವಂಶಿ!

    May 21, 2025

    ಮುಂಬೈ-ಡೆಲ್ಲಿ ಪಂದ್ಯಕ್ಕೆ ಮಳೆ ಕಾಟ.. ಮ್ಯಾಚ್ ರದ್ದಾದ್ರೆ ಯಾರು ಪ್ಲೇ ಆಫ್ ಗೆ?

    May 21, 2025

    IPL 2025: ಐಪಿಎಲ್ ಫೈನಲ್ ಪಂದ್ಯ ನಡೆಯೋದು ಎಲ್ಲಿ!? ಪ್ಲೇಆಫ್ ವೇಳಾಪಟ್ಟಿ ಹೀಗಿದೆ!

    May 20, 2025

    IPL 2025: RCB ಫ್ಯಾನ್ಸ್ ಗೆ ಸಿಕ್ತು ಗುಡ್ ನ್ಯೂಸ್:ಸ್ಟಾರ್​ ಬೌಲರ್​ ಫುಲ್ ಫಿಟ್!

    May 20, 2025

    Digvesh Rathi: ಲಕ್ನೋಗೆ ಬ್ಯಾಡ್ ನ್ಯೂಸ್: IPL ಪಂದ್ಯದಿಂದ ದಿಗ್ವೇಶ್ ರಾಥಿ ಅಮಾನತು..!

    May 20, 2025

    Breaking: RCB V/s SRH ಪಂದ್ಯ ಬೆಂಗಳೂರಿನಲ್ಲಿ ರದ್ದು..ಹಾಗಿದ್ರೆ ಎಲ್ಲಿ ನಡೆಯಲಿದೆ ಮ್ಯಾಚ್!‌

    May 20, 2025

    2 ಕ್ಯಾಚ್’ಗಳು, ಓ ಸ್ಟಂಪಿಂಗ್.. ಬ್ಯಾಟಿಂಗ್’ನಲ್ಲಿಯೇ ಅಲ್ಲ, ಕೀಪಿಂಗ್’ನಲ್ಲೂ ವಿಫಲ..!

    May 20, 2025

    CSK vs RR: ಗೌರವಕ್ಕಾಗಿ ಹೋರಾಟ: ಚೆನ್ನೈ vs ರಾಜಸ್ಥಾನ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ..?

    May 20, 2025

    LSG vs SRH: ಲಕ್ನೋಗೆ ಬಿಗ್ ಶಾಕ್ ಕೊಟ್ಟ ಹೈದರಾಬಾದ್..! ಪ್ಲೇ-ಆಫ್ ರೇಸ್’ನಿಂದ ಔಟ್

    May 20, 2025

    ಹೈದರಾಬಾದ್ ವಿರುದ್ಧ ಸೋತು ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಲಕ್ನೋ.. ಕ್ಯಾಪ್ಟನ್ ಕೊಟ್ಟ ಸಮರ್ಥನೆ ಹೀಗಿದೆ!

    May 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.