ಬೆಂಗಳೂರು:- ಕಳೆದ ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ.
ವಿಧಾನಸೌಧ ಮುಂಭಾಗದಲ್ಲಿ ಯೋಗ ದಿನಾಚರಣೆ: 5 ಸಾವಿರ ಜನರಿಂದ ಸಾಮೂಹಿಕ ಯೋಗ ಪ್ರದರ್ಶನ!
ಅದರಂತೆ ಘಟನೆಗೆ ಸಂಬಂಧಿಸಿದಂತೆ ನಿನ್ನೆ ಬಹುತೇಕ 30 ಕ್ಕು ಹೆಚ್ಚು ಪೊಲೀಸರ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದೆ. ಮುಂದುವರಿದು, ಇಂದು ಕೆ.ಎಸ್.ಸಿ.ಎ ಖಜಾಂಚಿ ಮತ್ತು ಸೆಕ್ರೆಟ್ರಿ ಗೆ ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ನೊಟೀಸ್ ಜಾರಿ ಮಾಡಿದ್ದಾರೆ. ಇಂದು ಕೆ.ಎಸ್.ಸಿ.ಎ ಖಜಾಂಚಿ ಶಂಕರ್ ಮತ್ತು ಸೆಕ್ರೆಟ್ರಿ ಜಯರಾಮ್ ಗೆ ಬುಲಾವ್ ನೀಡಲಾಗಿದ್ದು, ಇದರ ಜೊತೆಗೆ ಜೈಲಿಗೆ ಹೋಗಿದ್ದ ನಾಲ್ವರಲ್ಲಿ ಮೂವರಿಗೆ ಇಂದು ಬುಲಾವ್ ಕೊಡಲಾಗಿದೆ. ಸುನಿಲ್ ಮ್ಯಾಥ್ಯೂವ್, ಸುಮಂತ್, ಕಿರಣ್ ಗು ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಮೂಲಕ ಸೂಚನೆ ಕೊಡಲಾಗಿದೆ.
ಇಂದು ಸಹ ಜಿಲ್ಲಾಧಿಕಾರಿ ಇಪ್ಪತ್ತಕ್ಕು ಹೆಚ್ಚು ಜನರ ಹೇಳಿಕೆ ದಾಖಲಿಸಲಿದ್ದಾರೆ.