Close Menu
Ain Live News
    Facebook X (Twitter) Instagram YouTube
    Tuesday, May 13
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಬೆಂಗಳೂರಿನಲ್ಲಿ ‘ವೀರ ಧೀರ ಶೂರನ್‍’ ಚಿತ್ರದ ಪ್ರಚಾರ ಮಾಡಿದ ‘ಚಿಯಾನ್‍’

    By Author AINMarch 25, 2025
    Share
    Facebook Twitter LinkedIn Pinterest Email
    Demo

    ತಮಿಳಿನ ಜನಪ್ರಿಯ ನಟ ‘ಚಿಯಾನ್‍’ ವಿಕ್ರಮ್‍ ಅಭಿನಯದ ‘ವೀರ ಧೀರ ಶೂರನ್‍ – ಭಾಗ 2’ ಚಿತ್ರವು ಮಾರ್ಚ್  27ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲೂ ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಪ್ರಚಾರಕ್ಕಾಗಿ ವಿಕ್ರಮ್‍ ಇತ್ತೀಚೆಗೆ ಬೆಂಗಳೂರಿಗೆ ಬಂದು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

    ಮಲ್ಲೇಶ್ವರಂನ ಮಂತ್ರಿ ಮಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಕ್ರಮ್‍, ‘ಇದು ನನ್ನ ಪಾಲಿಗೆ ವಿಶೇಷವಾದ ಚಿತ್ರ. ಇದೊಂದು ಮಾಸ್‍ ಚಿತ್ರ. ಅಷ್ಟೇ ನೈಜವಾಗಿಯೂ ಇದೆ. ಚಿತ್ರದಲ್ಲಿ ಎಲ್ಲರ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ಚಿತ್ರ ಎಮೋಷನಲ್‍ ಆಗಿ ಮೂಡಿಬಂದಿದೆ. ಹಾಡು, ಫೈಟ್‍ಗಳೆಲ್ಲಾ ಮಾಸ್‍ ಆಗಿ ಮೂಡಿಬಂದಿವೆ. ಸಾಮಾನ್ಯವಾಗಿ ಒಂದು ಚಿತ್ರ ನಾಯಕನ ಪರಿಚಯದಿಂದ ಶುರುವಾಗಿ, ಹಾಡು, ಫೈಟು ಎಂದು ಮುಂದುವರೆಯುತ್ತದೆ. ಇಲ್ಲಿ ಎಲ್ಲವೂ ವಿಭಿನ್ನ. ನಾಯಕನ ಪರಿಚಯ, ಇಂಟರ್‍ವೆಲ್ ಬ್ಲಾಕ್‍ ಎಲ್ಲವೂ ಬೇರೆ ತರಹ ಇದೆ. ಈ ಚಿತ್ರದ ಮೂಲಕ ಹೊಸ ಪ್ರಯೋಗ ಮಾಡಿದ್ದೇವೆ’ ಎಂದರು.

    ಈ ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಈ ಪೈಕಿ ಎರಡನೇ ಭಾಗ ಮೊದಲು ಬಿಡುಗಡೆಯಾಗುತ್ತಿದೆ. ಆ ನಂತರ ಮೊದಲ ಭಾಗ ಬರಲಿದೆ. ಎರಡನೇ ಭಾಗ ಮೊದಲು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿಕ್ರಮ್, ‘ಈ ಕಥೆ ಕೇಳಿದಾಗ ಬಹಳ ರೋಮಾಂಚನವಾಯಿತು. ಕಥೆಯಲ್ಲಿ ಸಾಕಷ್ಟು ವಿಷಯಗಳಿವೆ. ಅದರಲ್ಲೂ ಫ್ಲಾಶ್‍ಬ್ಯಾಕ್‍ ದೃಶ್ಯಗಳು ಬಹಳ ಇಂಟರೆಸ್ಟಿಂಗ್‍ ಆಗಿದೆ. ಅದೇ ಒಂದು ಪ್ರತ್ಯೇಕವಾದ ಕಥೆ ಇದ್ದಂತಿದೆ. ಆಮೇಲೆ ಚರ್ಚೆಯಲ್ಲಿ ಇನ್ನಷ್ಟು ವಿಷಯಗಳು ಬಂದವು. ಹಾಗಾಗಿ, ಮೊದಲು ಅಂದುಕೊಂಡಂತೆ ಈ ಚಿತ್ರ ಮಾಡಿ, ಬೇರೆ ವಿಷಯಗಳನ್ನು ಇನ್ನೊಂದು ಭಾಗದಲ್ಲಿ ಹೇಳೋಣ ಅಂತ ಈ ಚಿತ್ರ ಮಾಡಿದ್ದೇವೆ. ಇದು ಎರಡನೇ ಭಾಗದ ಕಥೆ. ಹಾಗಾಗಿ, ಮೊದಲು ಈ ಚಿತ್ರ ಮಾಡಿ, ಆ ನಂತರ ಮೊದಲ ಭಾಗ ಮಾಡುವ ಯೋಚನೆ ಇದೆ’ ಎಂದರು.

    ‘ವೀರ ಧೀರ ಶೂರನ್‍’ ಚಿತ್ರವನ್ನು ಅರುಣ್ ಕುಮಾರ್‍ ಬರೆದು ನಿರ್ದೇಶನ ಮಾಡಿದ್ದು, ಎಚ್‍.ಆರ್‍. ಪಿಕ್ಚರ್ಸ್‍ ಬ್ಯಾನರ್ ಅಡಿಯಲ್ಲಿ ರಿಯಾ ಶಿಭು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ವಿಕ್ರಮ್, ಎಸ್‍.ಜೆ. ಸೂರ್ಯ, ಸೂರಜ್‍ ವೆಂಜಾರಮೂಡು, ಸಿದ್ಧಿಖ್‍, ದುಶಾರಾ ವಿಜಯನ್‍ ಮುಂತಾದವರು ಅಭಿನಯಿಸಿದ್ದು, ಚಿತ್ರಕ್ಕೆ ಜಿ.ವಿ. ಪ್ರಕಾಶ್‍ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ.

    Post Views: 1

    Demo
    Share. Facebook Twitter LinkedIn Email WhatsApp

    Related Posts

    ಮಂತ್ರಾಲಯದಲ್ಲಿ ರಿಯಲ್‌ ಸ್ಟಾರ್‌ ಉಪ್ಪಿ: ಗುರು ರಾಯರ ಮೊರೆಹೋದ ಉಪೇಂದ್ರ video

    May 12, 2025

    Anushka Sharma: ಟೆಸ್ಟ್ ಕ್ರಿಕೆಟ್ʼಗೆ ಕೊಹ್ಲಿ ವಿದಾಯ: ಭಾವನಾತ್ಮಕ ಪತ್ರ ಬರೆದ ಅನುಷ್ಕಾ ಶರ್ಮಾ

    May 12, 2025

    ‘ಪೀಟರ್’ಗಾಗಿ ಬಂದ ಬಾಲಿವುಡ್ ಗಾಯಕ ಅಜಯ್ ಗೋಗವಾಲೆ

    May 12, 2025

    ತೆಲುಗಿನ ಮಹೇಶ್‌ ಬಾಬು ನಿರ್ದೇಶನದಲ್ಲಿ ಉಪೇಂದ್ರ.. ಖಳನಾಯಕನಾಗಿ ರಿಯಲ್‌ ಸ್ಟಾರ್‌ ಅಬ್ಬರ?

    May 12, 2025

    ಯೋಧರಿಂದ ʼಕುಲದಲ್ಲಿ ಕೀಳ್ಯಾವುದೋʼ ಟ್ರೇಲರ್ ಲಾಂಚ್..ಲಾಭದ 30ರಷ್ಟು ಭಾಗ ಸೈನಿಕರಿಗೆ ಅರ್ಪಣೆ..

    May 12, 2025

    ಬಣ್ಣ ಹಚ್ಚಲು ರೆಡಿನಾ ಉಪೇಂದ್ರ ಪುತ್ರ..ಆಯುಷ್‌ ಉಪೇಂದ್ರಗೆ ಆಕ್ಷನ್‌ ಕಟ್‌ ಹೇಳ್ತಿರೋದು ಯಾರು?

    May 12, 2025

    ಅಂಕಿತಾ ಅಮರ್‌ಗೆ ಸಿಕ್ತು ಬೊಂಬಾಟ್‌ ಚಾನ್ಸ್..ರಿಯಲ್‌ ಸ್ಟಾರ್‌ ಉಪೇಂದ್ರಗೆ ನಮ್ಮನೆ ಯುವರಾಣಿ ನಾಯಕಿ!

    May 12, 2025

    ರಜನಿಕಾಂತ್‌-ಕಮಲ್‌ ಹಾಸನ್‌ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ನಿಂತಿದ್ದೇಕೆ? ಕಾರಣ ಬಿಚ್ಚಿಟ್ಟ ಸ್ಟಾರ್‌ ಡೈರೆಕ್ಟರ್!

    May 12, 2025

    ಅಪ್ಪನ ನಿಧನದ ಬಳಿಕ ಕುಟುಂಬದ ಜವಾಬ್ದಾರಿ ಹೊತ್ತಿದ್ದ ರಾಕೇಶ್..ಈಡೇರಲಿಲ್ಲ ರಾಕೇಶ್‌ ಪೂಜಾರಿ ಅದೊಂದು ಕನಸು!

    May 12, 2025

    ಡ್ಯಾನ್ಸ್ ಮಾಡುವಾಗಲೇ ಕಾಣಿಸಿಕೊಂಡಿತ್ತು ಎದೆ ನೋವು: ರಾಕೇಶ್ ಪೂಜಾರಿ ಕೊನೆ ಕ್ಷಣದ ವಿಡಿಯೋ ವೈರಲ್‌

    May 12, 2025

    ರಾಕೇಶ್‌ಗೆ ದಚ್ಚು ಅಂದ್ರೆ ಅಚ್ಚುಮೆಚ್ಚು..ದಾಸನ ಭೇಟಿಯಾಗಿ ಪುಳಕಗೊಂಡಿದ್ದ ನಟ!

    May 12, 2025

    ವೇದಿಕೆ ಮೇಲೆ ಕುಸಿದು ಬಿದ್ದ ಅಪ್ಪು ಸ್ನೇಹಿತ..ವಿಶಾಲ್ ಆರೋಗ್ಯಕ್ಕೆ ಏನಾಗಿದೆ?

    May 12, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.