ಹುಬ್ಬಳ್ಳಿ: ಸಿನಿಮಾ ಶೈಲಿಯಲ್ಲಿ ವ್ಯಕ್ತಿಯೋರ್ವನ ಅಪಹರಣ, ಥಳಿತದ ವಿಚಾರವಾಗಿ ಪ್ರಕರಣ ದಾಖಲಿಸಿಕೊಂಡು ಆರು ಜನರನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಡುಗಿ ವಿಚಾರವಾಗಿ ರಾಜಗೋಪಲ ನಗರ ನಿವಾಸಿ ವಿನಾಯಕ ಭಂಡಾರಿ ಎಂಬಾತನಿಗೆ ಹಿಗ್ಗಾಮುಗ್ಗ ಥಳಿಸಿ, ಅಪಹರಣ ಮಾಡಲಾಗಿತ್ತು.
ಬೊಜ್ಜಿಗೆ ಮತ್ತೊಂದು ಹೊಸ ಮೆಡಿಸನ್.. ಒಂದೇ ಇಂಜೆಕ್ಷನ್’ನಿಂದ 100 ಕೆಜಿ ತೂಕ ಇಳಿಸಬಹುದು..! ಇದರ ಬೆಲೆ ಎಷ್ಟು?
ಇನ್ನು ವಿನಾಯಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಈತನ ಮೇಲೆ ಪೃಥ್ವಿ ಮತ್ತು ಸಹಚರರಿಂದ ಹಲ್ಲೆ ನಡೆದಿತ್ತು ಎಂದಿದ್ದಾರೆ.ಇಂದಿರಾ ನಗರದ ಯುವತಿಯನ್ನು ವಿನಾಯಕ ಪ್ರೀತಿಸುತ್ತಿದ್ದ, ಆದ್ರೆ ಮೂರು ವರ್ಷದ ಹಿಂದೆ ಬ್ರೇಕ್ ಆಪ್ ಆಗಿತ್ತು. ನಂತರ ಆರೋಪಿ ವಿನಾಯಕನ ಮಾಜಿ ಪ್ರೇಯಸಿ ಪೃಥ್ವಿಯನ್ನು ಪ್ರೀತಿಸುತ್ತಿದ್ದಳು.
ಇದೇ ಕಾರಣಕ್ಕೆ ವಿನಾಯಕನ ಮೇಲೆ ಹಲ್ಲೆ ಮಾಡಲಾಗಿದೆ. ಹುಡುಗಿ ಆತನಿಗೆ ಏನು ಹೇಳಿದ್ದಾಳೋ ಗೊತ್ತಿಲ್ಲಾ, ಆಕೆಯ ಮಾತನ್ನು ಕೇಳಿ, ಕಬ್ಬಿಣದ ರಾಡ್ ನಿಂದ ಇಂದಿರಾ ನಗರದಲ್ಲಿರೋ ಶೆಡ್ ಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಲಾಗಿದೆ. ಈ ಬಗ್ಗೆ ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.