ಬೆಂಗಳೂರು( ಗ್ರಾಮಾಂತರ): ರೈತರ ಜಮೀನಿನಲ್ಲಿದ್ದ ಮರಗಳು ತೆರವು ಮಾಡಲು ಮರಗಳನ್ನ ಕಡಿಯುತ್ತಿದ್ದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಹೊಸಕೋಟೆ ತಾಲೂಕಿನ ಮಾರನಗೆರೆ ಗ್ರಾಮದಲ್ಲಿ nweಘಟನೆ.
ವೆಂಕಟರತ್ನಮ್ಮ, ರುಕ್ಮಿಣಿ ಮತ್ತು ಸುರೇಶ್ ಎಂಬುವವರ ಮೇಲೆ ಗುಂಪು ಕಟ್ಟಿಕೊಂಡು ಬಂದ ಅದೇ ಗ್ರಾಮದ ಶ್ರೀನಿವಾಸ್, ಸುರೇಶ್, ವೆಂಕಟೇಶ್, ಬಾಬು ಮತ್ತು ಸರಸ್ವತಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
Video Player
00:00
00:00
ಮಾರಣಾಂತಿಕವಾಗಿ ಹಲ್ಲೆಗೊಳಗಾದ ಗಾಯಾಳುಗಳಿಗೆ ಹೊಸಕೋಟೆ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪದೇ ಪದೇ ಜಮೀನು ವಿಚಾರಕ್ಕೆ ಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಯತ್ನದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಹಲ್ಲೆಗೆ ಸಂಬಂಧಿಸಿದಂತೆ 5 ಜನರ ವಿರುದ್ದ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ fir ದಾಖಲಾಗಿದೆ.