ವಿಜಯಪುರ : ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆ ಖಂಡಿಸಿ ವಿಜಯಪುರದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಯತ್ನಾಳ್ ಆಪ್ತರೇ ಗೈರಾಗಿದ್ದಾರೆ. ಶುಕ್ರವಾರ ಸಂಜೆ ವಿಜಯಪುರ ನಗರದ ಸಿದ್ದೇಶ್ವರ ದೇಗುಲದಿಂದ ಗಾಂಧಿ ಚೌಕ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆದಿದೆ. ಈ ಪ್ರತಿಭಟನೆಯಲ್ಲಿ ಅನರ್ಹಗೊಂಡ 17 ಬಿಜೆಪಿ ಪಾಲಿಕೆ ಸದಸ್ಯರ ಪೈಕಿ ಕೇವಲ ಇಬ್ಬರೇ ಭಾಗಿಯಾಗಿದ್ದು, ಇನ್ನುಳಿದವರು ಪ್ರತಿಭಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ಅನರ್ಹ ಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಪಾಟೀಲ್, ಹಾಗೂ ರಾಜಶೇಖರ ಕುರಿಯವರ ಮಾತ್ರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಯತ್ನಾಳ್ ಆಪ್ತರು ಬಿಜೆಪಿಯಿಂದ ಕ್ರಮದ ಭೀತಿಯಿಂದ ದೂರ ಉಳಿದಿದ್ದಾರೆ. ಅನರ್ಹ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಪ್ರತಿಭಟನಾ ರ್ಯಾಲಿ ಇದೆ ಎಂದಿದ್ದವರು, ಇದೀಗ ನಾಪತ್ತೆಯಾಗಿದ್ದಾರೆ.
ಯಡಿಯೂರಪ್ಪ ಮಗ ಒತ್ತಡ ತಂದು ನನ್ನ ಉಚ್ಚಾಟನೆ ಮಾಡಿಸಿದ್ದಾರೆ: ಶಾಸಕ ಯತ್ನಾಳ್ ಆರೋಪ
ಸುದ್ದಿಗೋಷ್ಠಿಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡ್ತೀವಿ ಎಂದಿದ್ದ ಪ್ರೇಮಾನಂದ ಬಿರಾದಾರ ಸೇರಿದಂತೆ ಅನರ್ಹ ಬಿಜೆಪಿ ಪಾಲಿಕೆ ಸದಸ್ಯರಾದ ರಾಜು ಮಗಿಮಠ, ಶಿವರುದ್ರ ಬಾಗಲಕೋಟೆ, ರಾಹುಲ್ ಜಾಧವ್, ಮಲ್ಲಿಕಾರ್ಜುನ ಗಡಗಿ, ವಿಠ್ಠಲ ಹೊಸಪೇಟೆ, ಎಂ ಎಸ್ ಕರಡಿ, ಸುನೀತಾ ಒಡೆಯರ್, ಮಳಗೌಡ ಬಿರಾದಾರ,ಸುನಂದಾ ಕುಮಸಗಿ ರಶ್ಮಿ ಕೋರಿ, ರಾಧಾಬಾಯಿ ದೇವಗಿರಿ, ಸ್ವಪ್ನಾ ಕಣಮುಚನಾಳ, ಸೇರಿದಂತೆ ಹಲವರು ಗೈರಾಗಿದ್ದಾಋೆ.
ಇತ್ತ ಪ್ರತಿಭಟನೆ ನಡೆಯುತ್ತಿದ್ರೆ, ಅತ್ತ ಅನರ್ಹ ಬಿಜೆಪಿ ಪಾಲಿಕೆ ಸದಸ್ಯರು ಸಚಿವ ಎಂ ಬಿ ಪಾಟೀಲ್ ಭೇಟಿಗೆ ಬೆಂಗಳೂರಿಗೆ ತೆರಳಿದ್ದರು ಎನ್ನಲಾಗುತ್ತಿದೆ.