ಬೆಳಗಾವಿ: ಬೆಳಗಾವಿಯ ಟಿಳಕವಾಡಿಯಲ್ಲಿ ನಿರ್ಮಾಣವಾಗಿರುವ ಕಲಾಮಂದಿರವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು. ಕಲಾಮಂದಿರ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಕಲಾಮಂದಿರ ಮತ್ತು ಮಳಿಗೆ ಇರುವ ಹೊಸ ಕಟ್ಟಡ ಉದ್ಘಾಟನೆ ಮಾಡಿದ್ದೇವೆ. ಈ ಕಟ್ಟಡವನ್ನ ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಇದು ಬಹು ಉಪಯುಕ್ತವಾದಂತ ಕಟ್ಟಡವಾಗಿದೆ. ಇದರ ಆದಾಯ ಕೂಡ ಬೆಳಗಾವಿಗೆ ಬರುತ್ತದೆ. ಸ್ಮಾರ್ಟ್ ಸಿಟಿ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸೇರಿ ಮಾಡುವ ಕಾರ್ಯಕ್ರಮ ಎಂದರು.
ಸ್ಮಾರ್ಟ್ ಸಿಟಿ ಇಡೀ ದೇಶದಲ್ಲಿ ಪ್ರಾರಂಭವಾಗಿದೆ. ಎರಡು ಸರ್ಕಾರಗಳು ಐವತ್ತು ಪರ್ಸೆಂಟ್ ಹಾಕಿ ಕಟ್ಟಿರುವುದು. ಯಾವುದೋ ಒಂದು ಸರ್ಕಾರ ಮಾಡಿದ ಕಾರ್ಯಕ್ರಮ ಅಲ್ಲಾ. ಕೇಂದ್ರ ಸರ್ಕಾರ ಒಂದೇ ಮಾಡಿದ್ದು ಅಲ್ಲಾ ರಾಜ್ಯ ಸರ್ಕಾರ ಕೂಡ ಒಂದೇ ಮಾಡಿದ ಕಾರ್ಯಕ್ರಮ ಅಲ್ಲಾ. ಮಳಿಗೆಗಳನ್ನ ಹರಾಜು ಮಾಡಿ ನೀಡುವಂತೆ ಹೇಳಿದ್ದೇನೆ. ಇದರಿಂದ ಬಂದ ಹಣವನ್ನು ಬೆಳಗಾವಿ ನಗರ ಅಭಿವೃದ್ಧಿಗೆ ಖರ್ಚು ಮಾಡಬೇಕು ಎಂದರು. ಜಾಗೃತಿಯಿಂದ ಹರಾಜು ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಆರ್.ಅಶೋಕ್ ಯಾವತ್ತು ಸತ್ಯ ಹೇಳಲ್ಲ ; ಸಾಮ್ರಾಟ್ ವಿರುದ್ಧ ಸಿಎಂ ಸಿದ್ದು ಗರಂ
ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ, ಆದರೆ ಅವರನ್ನು ಖಾಯಂಗೊಳಿಸಿ ಹದಿನೇಳು ಸಾವಿರ ಸಂಬಳ ಕೊಟ್ಟಿದ್ದು ನಮ್ಮ ಸರ್ಕಾರ. ರಾಜ್ಯದ ಎಲ್ಲಾ ಪೌರ ಕಾರ್ಮಿಕರನ್ನು ನಮ್ಮ ಸರ್ಕಾರ ಖಾಯಂಗೊಳಿಸುತ್ತೇವೆ. ಲಾರಿ ಡ್ರೈವರ್ ಗಳನ್ನ ಕೂಡ ಖಾಯಂಗೊಳಿಸುತ್ತೇವೆ. ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಎಸ್ಟಿಪಿ ಪ್ಲಾಂಟ್ ಗೆ ಜಮೀನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಸರ್ಕಾರ ಕೋರ್ಟ್ ನಲ್ಲಿ ಹಣವನ್ನ ಡೆಪಾಸಿಟ್ ಮಾಡಿದೆ ಎಂದರು. ಹೆಚ್ಚು ಪರಿಹಾರ ನೀಡಿ ಅಂತಾ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಸಿಎಂ ಅವರು ಹೆಬ್ಬಾಳ್ಕರ್ ಹೆಸರು ಹೇಳುತ್ತಿದ್ದಂತೆ ಎದ್ದು ನಿಂತು ಪರಿಹಾರ ಕುರಿತು ಮಾತನಾಡಲು ಮುಂದಾಗಿದ್ದು, ಈ ವೇಳೆ ನಾನು ಮಾತಾಡ್ತೇನಿ ನೀನು ಕುಳಿತುಕೊಳಮ್ಮಾ ಎಂದರು.