ಬೆಂಗಳೂರು: ಹಸಿದಾಗ ಹಲಸು,ಉಂಡಾಗ ಮಾವು ಎನ್ನುವ ಮಾತಿದೆ. ಅಂದ್ರೆ ಹಸಿವಾದಾಗ ಹಲಸಿನ ಹಣ್ಣು ತಿನ್ನಬೇಕು. ಆದ್ರೆ ಇಲ್ಲೋರ್ವ ಹಲಸಿನ ಹಣ್ಣು ಕದಿಯಲು ಹೋಗಿ ಮರದಲ್ಲಿ ನೇತಾಡಿದ್ದಾನೆ.
ಕೊಡಗಿನಲ್ಲಿ ಧಾರಕಾರ ಮಳೆ: ತುಂಬಿ ಹರಿಯುತ್ತಿರುವ ನದಿ ತೊರೆಗಳು.. ರಸ್ತೆ ಸಂಪರ್ಕ ಬಂದ್!
ನಗರದ ಕಮಿಷನರ್ ಕಚೇರಿ ಹಿಂಬಾಗ ಹಲಸಿನಹಣ್ಣು ಕದಿಯಲು ಬಂದು ವ್ಯಕ್ತಿಯೊಬ್ಬ ಮರದಲ್ಲೇ ನೇತಾಡಿದ್ದಾನೆ. ಅಲಿಅಸ್ಕರ್ ರಸ್ತೆಯ ಎಂಬಾಸಿ ಅಪಾರ್ಟ್ಮೆಂಟ್ ಆವರಣದಲ್ಲಿ ಹಲಸಿನ ಮರಕ್ಕೆ ಹತ್ತಿದ್ದ ವ್ಯಕ್ತಿಯನ್ನ ಸೆಕ್ಯೂರಿಟಿ ಗಮನಿಸಿದ್ದ. ಈ ವೇಳೆ ಗಾಬರಿಗೊಂಡ ವ್ಯಕ್ತಿ ಮರದಿಂದ ಜಿಗಿಯಲು ಯತ್ನಿಸಿ ಮರದಲ್ಲೆ ನೇತಾಡಿದ್ದಾನೆ. ಕೊನೆಗೆ ಮರದಲ್ಲಿ ಸಿಲುಕಿ ಒದ್ದಾಡಿದ ವ್ಯಕ್ತಿಯನ್ನ ಪೊಲೀಸ್ರು ಹಾಗೂ ಸ್ಥಳಿಯರು ಟಾರ್ಪಲ್ ಮೇಲಿಂದ ಬಿದ್ದ ವ್ಯಕ್ತಿಯನ್ನ ರಕ್ಷಿಸಿದ್ದಾರೆ.
ಸದ್ಯ ಆ ವ್ಯಕ್ತಿಯನ್ನ ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.