ನವದೆಹಲಿ: ಕಾಂಗ್ರೆಸ್ನವರು ವಕ್ಸ್ ಆಸ್ತಿ ಕಬಳಿಸಿರುವುದನ್ನು ಮುಚ್ಚಿ ಹಾಕಲು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ವಕ್ಫ್ ಬಿಲ್ 1950ರ ದಶಕದಲ್ಲಿ ಬಂದಿದ್ದು. 1990 ಹಾಗೂ 2013ರಲ್ಲಿ ತಿದ್ದುಪಡಿಯಾಗಿದೆ. ಈಗ ತಿದ್ದುಪಡಿ ಮಾಡುತ್ತಿರುವುರುವುದು ಹೊಸದೇನಲ್ಲ.
2013ಕ್ಕಿಂತ ಮೊದಲು ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಸಮಿತಿ ಕೆಲವು ಶಿಫಾರಸು ಮಾಡಿತ್ತು. ಅವುಗಳಲ್ಲಿ ಆಗಿನ ಯುಪಿಎ ಸರ್ಕಾರ ಕೆಲವೇ ಕೆಲವು ಅಂಶಗಳನ್ನು ತಿದ್ದುಪಡಿ ಮಾಡಿ ಕೆಲವು ಅಂಶಗಳನ್ನು ಹಾಗೇ ಬಿಟ್ಟಿತ್ತು ಎಂದರು.
ಮುಖ್ಯವಾಗಿ ದೇಶದ ಕಾನೂನು ಬಹಳ ದೊಡ್ಡದು, ಸಂವಿಧಾನ ದೊಡ್ಡದು. 1990 ಹಾಗೂ 2013ರ ಕಾಯ್ದೆಯಲ್ಲಿ ಎಲ್ಲಾ ಕಾನೂನಿಗಿಂತ ವಕ್ಫ್ ದೊಡ್ಡದು ಎಂದು ಹೇಳಿದೆ. ಸುಪ್ರೀಂಕೋರ್ಟ್ ಕೂಡಾ ಇದರಲ್ಲಿ ಮಧ್ಯಸ್ಥಿಕೆ ವಹಿಸದಂತೆ ಮಾಡಲಾಗಿದೆ. ಅದನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದರು.
ಇನ್ನೊಂದು ಇದರಲ್ಲಿ ಸಾಕಷ್ಟು ವ್ಯಾಜ್ಯಗಳಿವೆ. ಮುಸಲ್ಮಾನರ ಆಸ್ತಿಯೇ ವಕ್ಫ್ಗೆ ಹೋಗಿದೆ. ವಕ್ಫ್ ಆಸ್ತಿಯೇ ಕಾಂಗ್ರೆಸ್ ನಾಯಕರ ಕೈಗೆ ಹೋಗಿದೆ. ಕರ್ನಾಟಕದಲ್ಲಿ ವಕ್ಫ್ ಆಸ್ತಿ ಕಾಂಗ್ರೆಸ್ ನಾಯಕರ ಕೈಯಲ್ಲಿರುವ ಬಗ್ಗೆ ದೊಡ್ಡ ವರದಿಯೇ ಇದೆ. ಸುಮಾರು 1500 ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ ವಕ್ಫ್ ಆಸ್ತಿ ಎಂದು ಮಾಡಲಾಗಿದೆ ಎಂದು ದೂರಿದರು.