ಬೆಂಗಳೂರು:- ಕಾನ್ಸ್ ಟೇಬಲ್ ಮಹಿಳೆಗೆ ಬೂಟ್ ಕಾಲಿನಿಂದ ಒದ್ದ ಆರೋಪದಡಿ ಹೆಡ್ ಕಾನ್ಸ್ಟೇಬಲ್ ಬಿ.ಜಿ.ಗೋವಿಂದರಾಜು ವಿರುದ್ದ ಕೇಸ್ ದಾಖಲಾಗಿದೆ.
ಕಾನ್ಸ್ ಟೇಬಲ್ ರೇಣುಕಾ ದೂರು ಆಧರಿಸಿ ಹೆಡ್ ಕಾನ್ಸ್ಟೇಬಲ್ ಬಿ.ಜಿ.ಗೋವಿಂದರಾಜು ವಿರುದ್ದ ಕೇಸ್ ದಾಖಲಾಗಿದೆ. ಇದೇ ತಿಂಗಳ 10ರಂದು ರಾತ್ರಿ ಕಂಪ್ಯೂೂಟರ್ ವಿಭಾಗದಲ್ಲಿ ಕಾನ್ಸ್ ಟೇಬಲ್ ರೇಣುಕ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ವೇಳೆ ಮನೆ ಬಿಟ್ಟು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಂಡು ಊಟ ಕೊಡಲು ಠಾಣೆಯ ಎಎಸ್ಐ ತಿಮ್ಮೇಗೌಡ ಹೇಳಿದ್ರಂತೆ.
ಅದರಂತೆ ರೇಣುಕಾ, ತಡರಾತ್ರಿ 2.30ಕ್ಕೆ ಮಕ್ಕಳನ್ನ ತನಿಖಾ ಸಹಾಯಕರ ಕೊಠಡಿಗೆ ಕರೆದೊಯ್ದು ಊಟ ಮಾಡಿಸ್ತಿದ್ದರು. ಈ ವೇಳೆ ಹೆಡ್ ಕಾನ್ಸ್ಟೇಬಲ್ ಗೋವಿಂದರಾಜು ನಿಂದ ಹೆಣ್ಣು ಮಕ್ಕಳ ಕುರಿತು ನಿಂದನೆ ಆರೋಪ ಕೇಳಿ ಬಂದಿದೆ. ಇದನ್ನ ಪ್ರಶ್ನಿಸಿದ್ದ ರೇಣುಕಾಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಶೂ ಕಾಲಿನಿಂದ ಮೂರ್ನಾಲ್ಕು ಬಾರಿ ಒದ್ದಿರೋ ಆರೋಪ ಕೇಳಿ ಬಂದಿದೆ.
ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ತಿಮ್ಮೇಗೌಡ, ಕಾನ್ಸ್ಟೇಬಲ್ಗಳಾದ ಬಸಪ್ಪ, ಮಹೇಶ್ ಬಿಡಿಸಿದ್ರೂ ನಿಂದಿಸಿ ಹಲ್ಲೆ ನಡೆಸಿರೋ ಆರೋಪ ಕೇಳಿ ಬಂದಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.