ತುಮಕೂರು : ತುಮಕೂರು ರೈಲ್ವೇ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡಲು ಪ್ರಸ್ತಾಪ ಬಂದಿದೆ. ಈ ಬಗ್ಗೆ ಸಿಎಂ ಜೊತೆಗೆ ಮಾತನಾಡಿ, ಒಪ್ಪಿಗೆ ಪಡೆದು ಆದೇಶ ಹೊರಡಿಸುತ್ತಾರೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು. ತುಮಕೂರಿನಲ್ಲಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಚಿವ ಜಿ.ಪರಮೇಶ್ವರ್ ಅವರು, ಶಿವಕುಮಾರ ಸ್ವಾಮೀಜಿಗಳ ಜನ್ಮದಿನಾಚರಣೆಗೆ ಬರಲು ಆಗಿರಲಿಲ್ಲ. ಇವತ್ತು ಸ್ವಾಮೀಜಿಗೆ ಗೌರವ ಸಮರ್ಪಣೆ ಮಾಡಲು ಬಂದಿದ್ದೇನೆ. ಸಿದ್ದಲಿಂಗಸ್ವಾಮೀಜಿಗೆ ನಮನ ಸಲ್ಲಿಸಿದ್ದೇನೆ. ನಮ್ಮ ಕುಟುಂಬಕ್ಕೂ ಮಠಕ್ಕೂ ಅವಿನಾಭವ ಸಂಬಂಧವಿದೆ. ನಮ್ಮ ತಂದೆ ಹಾಗೂ ಹಿರಿಯ ಸ್ವಾಮೀಜಿ ಜೊತೆಗೆ ಇದ್ದಂತಹ ಸಂಬಂಧ ಯಾವಾಗಲೂ ಇರುತ್ತದೆ. ನಾವು ಈ ಸಂಬಂಧವನ್ನು ನಾವು ಮುನ್ನಡೆಸಿಕೊಂಡು ಹೋಗುತ್ತೇವೆ ಎಂದರು. ತುಮಕೂರು ರೈಲ್ವೇ ನಿಲ್ದಾಣ ಸ್ವಾಮೀಜಿ ಅವರ ಹೆಸರಿನಲ್ಲಿ ಶಾಶ್ವತವಾಗಿ ಇರುತ್ತದೆ ಎಂದರು.
ಸಾಯಿಗೋಲ್ಡ್ ಪ್ಯಾಲೇಸ್: 7ನೇ ಮಳಿಗೆ ಉದ್ಘಾಟಿಸಿದ ವಿನಯ್ ಗುರೂಜಿ, ನಟ ಕಿಚ್ಚ ಸುದೀಪ್
ಭದ್ರಮೇಲ್ದಂಡೆ ಯೋಜನೆಗೆ ಕೇಂದ್ರಕ್ಕೆ ಒತ್ತಾಯ ಮಾಡಿದ್ವು. ರಾಷ್ಟ್ರೀಯ ಯೋಜನೆ ಅಂತ ಘೋಷಣೆ ಮಾಡಲಾಗಿತ್ತು. ಎರಡು ವರ್ಷದ ಹಿಂದೆ 5300 ಕೋಟಿ ರೂಪಾಯಿಯನ್ನ ಅನುದಾನ ಕೊಡ್ತೀವಿ ಅಂತ ಬಜೆಟ್ ನಲ್ಲಿ ಹೇಳಿದರು. ಬಹಳ ಸಂತೋಷದಲ್ಲಿ ಇದ್ದೆವು. ಕಾರಣಾಂತರಗಳಿಂದ ಹಣ ಅವರು ಕೊಡಲು ಆಗಿರಲಿಲ್ಲ. ಆದರೂ ಯೋಜನೆ ನಿಲ್ಲುವ ಆಗಿಲ್ಲ, ಕಾಮಗಾರಿಗಳನ್ನ ಬೇಗ ಬೇಗ ಮಾಡಬೇಕು ಅಂತ ಹೊರಟಿದ್ದೇವೆ. ಕೆಲ ಕಡೆ ಫಾರೆಸ್ಟ್ ಬರುವುದರಿಂದ ತಡವಾಗಿದೆ. ಕೊರಟಗೆರೆ ಬರೋದು ಡೌಟು, ಮಧುಗಿರಿ ಕೆಲ ಭಾಗಕ್ಕೆ ನೀರು ಬರಲಿದೆ. ಪಾವಗಡಕ್ಕೆ ನೀರು ಬರುತ್ತಿದೆ ಎಂದರು. 2300 ಕೋಟಿ ರೂಪಾಯಿಯ ಕುಡಿಯುವ ನೀರಿನ ಯೋಜನೆ ಮಾಡಿದ್ವು, ಪಾವಗಡಕ್ಕೆ ಈಗಾಗ್ಲೆ 328 ಹಳ್ಳಿಗಳಲ್ಲಿ 270 ಹಳ್ಳಿಗಳಿಗೆ ನೀರು ಕೊಡ್ತಿದ್ದೀವಿ. ಸಿಎಂ ಸದ್ಯದಲ್ಲೇ ಉದ್ಘಾಟನೆ ಮಾಡಲಿದ್ದಾರೆ ಎಂದರು. ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದೆ. ಹಣ ಬಿಡುಗಡೆ ಮಾಡ್ತಿದ್ದೇವೆ ಎಂದರು. ಮೇ ನಲ್ಲಿ ಹೇಮಾವತಿಯಿಂದ ಒಂದೆರಡು ಟಿಎಂಸಿ ನೀರು ಬಿಡಿಸುವಂತೆ ಹಾಸನ ಉಸ್ತುವಾರಿ ರಾಜಣ್ಣ ಜೊತೆಗೆ ಮಾತನಾಡುತ್ತೇವೆ ಎಂದರು.
ಇನ್ನೂ ಶಿರಾ ಬಳಿ ಇಂಟರ್ ನ್ಯಾಷನಲ್ ಏರ್ಪೋರ್ಟ್ ನಿರ್ಮಾಣ ವಿಚಾರವಾಗಿ ಜಯಚಂದ್ರ ಸೇರಿ 35 ಜನ ಶಾಸಕರು ಪತ್ರ ವಿಚಾರವಾಗಿ ಮಾತನಾಡಿ, ಅದನ್ನ ಕೇಂದ್ರ ಸರ್ಕಾರ ಪರಿಗಣಿಸಬೇಕು. ಶಿರಾ ಭಾಗದಲ್ಲಿ ಆದ್ರೆ ನಮಗೆ ಸಂತೋಷವಾಗುತ್ತೆ. ಎರಡು ಕಡೆ ಸರ್ವೆ ಮಾಡಿದ್ದಾರೆ. ಒಂದು ನೆಲಮಂಗಲ, ಕನಕಪುರ ಭಾಗದಲ್ಲಿ ಸರ್ವೆ ಮಾಡಿದ್ದಾರೆ. ಅವರದ್ದೇ ಆದ ಪ್ಯಾರಾಮೀಟರ್ಸ್ ಇದೆ. ಪ್ಯಾರಮೀಟರ್ಸ್ ಅಡಿಯಲ್ಲೇ ರೆಕಮೆಂಡೇಷನ್ ಮಾಡ್ತಾರೆ. ಶಿರಾಗೆ ಸರ್ವೆಗೆ ಬಂದಿಲ್ಲ, ಬಂದ್ರೆ ಸಂತೋಷವಾಗುತ್ತದೆ ಎಂದರು.