ಹುಬ್ಬಳ್ಳಿ : ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಎರಡು ದಿನಗಳ ಹಿಂದೆ ಕಂಟ್ರಾಕ್ಟರ್ ಶಿವಾನಂದ ಎಂಬಾತನನ್ನು ಹಳೇ ದ್ವೇಷದ ಹಿನ್ನೆಲೆ ನಡು ರಸ್ತೆಯಲ್ಲಿಯೇ ಮಾರಾಕಾಸ್ತ್ರಗಳಿಂದ ನೂರಾರು ಜನರ ಮುಂದೆಯೇ ಕೊಚ್ಚಿ ಕೊಲೆ ಮಾಡಿದ ಆರೋಪಿಗಳ ಮೇಲೆ ಪೊಲೀಸರು ಪೈರಿಂಗ್ ಮಾಡಿದ್ದಾರೆ.
Green Tea: ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ? ಇಲ್ಲಿದೆ ನೋಡಿ ಉತ್ತರ
ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳು ಇರುವ ಮಾಹಿತಿ ಲಭ್ಯವಾಗಿ ಶಿಗ್ಗಾವಿ ಠಾಣೆಯ ಸಿಪಿಐ ಸತ್ಯಪ್ಪ ಮಾಳಗೊಂಡ ಹಾಗೂ ಪಿಎಸ್ ಐ ಸಂಪತ್ತ ಆರೋಪಿಗಳನ್ನು ಬಂಧನ ಮಾಡಲು ಹೋದಾಗ ಆರೋಪಿಗಳಾದ ಅಶ್ರಪ್ ಹಾಗೂ ನಾಗರಾಜ ಪೊಲೀಸರ್ ಮೇಲೆ ಹಲ್ಲೆ ಮಾಡಿ ತಪ್ಪಿಸಿ ಕೊಳ್ಳಲು ಯತ್ನಿಸಿದಾಗ ಸಿಪಿಐ ಸತ್ಯಪ್ಪ ಮಾಳಗೊಂಡ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡೇಟು ನೀಡಿ ಬಂಧನ ಮಾಡಿದ್ದಾರೆ.
ಸದ್ಯ ಆರೋಪಿಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ, ಮೊದ ಮೊದಲು ಶಿವಾನಂದನ ಕೊಲೆ ಆಸ್ತಿ ವಿಚಾರಕ್ಕೇ ಎನ್ನಲಾಗಿತ್ತು ನಂತರದಲ್ಲಿ ಅಶ್ರಪ್ನನ್ನ ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಕ್ಕಾಗಿ ಈ ಕೊಲೆ ನಡೆದಿದೆ ಎಂಬ ಆಡಿಯೋ ಕೂಡ ವೈರಲ್ ಆಗಿತ್ತು, ಆದ್ರೆ ಇದುವರೆಗೂ ಕೊಲೆಗೆ ನಿಖರ ಕಾರಣ ಪೊಲೀಸರ್ ತನಿಖೆಯಿಂದ ತಿಳಿದು ಬರಬೇಕಿದೆ.