ಬೆಂಗಳೂರು:- ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಎಂಬ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ರಾಯರೆಡ್ಡಿ ಹೇಳಿಕೆ ನಾನು ಕೇಳಿದ್ದೇನೆ. ಮಾಧ್ಯಮಗಳಲ್ಲೂ ನಾನು ನೋಡಿದ್ದೇನೆ. ಜನರಲ್ ಆಗಿ ಅವರು ಅಸೆಸ್ ಮಾಡಿರಬಹುದು. ನೇರವಾಗಿ ಎಲ್ಲಿಯೂ ಹೇಳಿಲ್ಲ. ಅದಕ್ಕೆ ಹೆಚ್ಚು ಒತ್ತು ಕೊಡಬೇಕಿಲ್ಲ. ಸರ್ಕಾರದ ಬಗ್ಗೆ ಪರ್ಟಿಕ್ಯುಲರ್ ಎಲ್ಲಿಯೂ ಹೇಳಿಲ್ಲ ಎಂದರು.
ಕಾಮಗಾರಿಗಳಲ್ಲಿ ಗುಣಮಟ್ಟ ಇಲ್ಲ ಎಂಬ ವಿಚಾರವಾಗಿ ಮಾತನಾಡಿ, ಕಳಪೆ ಆಗಿದೆ ಅಂತ ಹೇಳ್ತಾರೆ. ಕೆಕೆಆರ್ ಡಿಬಿಯಲ್ಲಿ ಅವರು ಸದಸ್ಯರಿದ್ದಾರೆ. ಅವರು ಅಲ್ಲಿಯೇ ಕೇಳಬಹುದು. ಕ್ರಮಕೈಗೊಳ್ಳುವ ವಿಚಾರ ಬರಲ್ಲ. ಅವರು ನೇರವಾಗಿ ಹೇಳಿದ್ದಾರಾ? ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿದ್ದಾರಾ? ಎಂದು ಪ್ರಶ್ನಿಸಿದರು.
ಗುತ್ತಿಗೆದಾರರ ಆರೋಪ ವಿಚಾರವಾಗಿ ಮಾತನಾಡಿ, ಸ್ಪೆಷಲ್ ಎನ್ ಒಸಿ ಕೊಡಲು ಅವಕಾಶವಿದೆ. ನಮ್ಮ ಇಲಾಖೆಗೆ ೨೦% ಅವಕಾಶವಿದೆ. ಒಳ್ಳೆಯದಿದ್ದರೆ ಅವರು ಹೇಳಲಿ. ಅದನ್ನ ನಾವು ಸರಿಪಡಿಸಿಕೊಳ್ಳಬಹುದು.ಅವರು ಶಿಫಾರಸು ಮಾಡ್ತಾರೆ.ಇಂತವರಿಗೆ ಕೊಡಿ ಅಂತ ಕೇಳ್ತಾರೆ. ನಮ್ಮವರು ಹೇಳೋದ್ರಲ್ಲಿ ತಪ್ಪೇನಿಲ್ಲ. ಏನಾದ್ರೂ ಸಲಹೆ ಕೊಟ್ಟರೆ ಸರಿಪಡಿಸಬಹುದು. ಯಾವ ಇಲಾಖೆಯಲ್ಲಿ ಎಷ್ಟು ಸಭೆ ಕರೆದಿದ್ದಾರೆ. ನಾವು ಎಷ್ಟು ಸಭೆ ಕರೆದಿದ್ದೇವೆ. ನಾವು ಹಲವು ಸಭೆ ಕರೆದಿದ್ದೇವೆ. ನಾವು ಸರಿಪಡಿಸಿಕೊಳ್ಳೋಕೆ ನೋಡ್ತೇವೆ ಎಂದರು.
ಎರಡನೇ ಏರ್ಪೋರ್ಟ್ ವಿಚಾರವಾಗಿ ಮಾತನಾಡಿ, ನಾನು ಆರು ತಿಂಗಳ ಹಿಂದೆಯೇ ಪತ್ರ ಬರೆದಿದ್ದೆ. ಸಿಎಂ ಅವರಿಗೆ ಶಿರಾ ಬಳಿ ಮಾಡಿ ಅಂತ. ಅದು ಈಗ ಚರ್ಚೆಗೆ ಬಂದಿದೆ. ಅಲ್ಲಿಮಾಡಿದರೆ ಏಳೆಂಟು ಜಿಲ್ಲೆಗೆ ಅನುಕೂಲ. ಏಳೇಂಟು ಏನು ಬಹಳಷ್ಟು ಜಿಲ್ಲೆಗೆ ಅನುಕೂಲ. ಜಯಚಂದ್ರ ಅವರು ಪತ್ರ ಬರೆದಿದ್ದಾರೆ. ಈಗ ಮತ್ತೊಮ್ಕೆ ಪರಿಶೀಲನೆ ನಡೆಸಲಿ. ಶಿರಾಬಳಿ ಜಾಗ ಗುರ್ತಿಸಲಾಗಿದೆ. ಇಲ್ಲಿ ತಪ್ಪಿಸಿ ಅಲ್ಲಿ ಮಾಡಬೇಕು ಅಂತ ಇಲ್ಲ. ನೆಲಮಂಗಲ ಆದ್ರೂ ಓಕೆ. ಇಲ್ಲ ತುಮಕೂರು ಬಳಿ ಎಲ್ಲಿಯಾದ್ರೂ ಆಗಲಿ. ವಸಂತನರಸಾಪುರ ಬಳಿಯಾದ್ರೂ ಆಗಲಿ. ಶಿರಾ ಬಳಿ ನಮ್ಮದೇ ಸರ್ಕಾರಿ ಜಮೀನು ಇದೆ. ನಾನು ಮೊನ್ನೆ ಹೋದಾಗ ಹೇಳಿ ಬಂದಿದ್ದೇನೆ. ರಾಮಮೋಹನ್ ನಾಯ್ಡು ಭೇಟಿ ಮಾಡಿದ್ದೆವು. ನೀವು ಪತ್ರವನ್ನ ಕೊಡಿ ಅಂದಿದ್ದರು. ಅದಕ್ಕೆ ಜಯಚಂದ್ರ ಅವರಿಗೆ ಹೇಳಿದ್ದೆ. ಶಿರಾ,ವಸಂತನರಸಾಪುರ ಎಲ್ಲಿ ಬೇಕಾದ್ರೂ ಆಗಲಿ. ತುಮಕೂರು ಬಳಿ ಎಲ್ಲಿಯಾದ್ರೂ ಆಗಲಿ. ಬೆಂಗಳೂರು ಟ್ರಾಫಿಕ್ ಹೆಚ್ಚಿದೆ. ನಮಗೂ ಅನುಕೂಲವಾಗಲಿದೆ. ನಾವು ಸಿಎಂಗೆ ಪತ್ರ ಬರೆದಿದ್ದೇವೆ. ಅವರು ಫಾಲೋಅಪ್ ಮಾಡಬೇಕಲ್ಲ. ಇಲ್ಲಿ ಅವರದ್ದು ಇವರದ್ದು ಏನೂ ಇಲ್ಲ. ಎಲ್ಲರಿಗೆ ಅನುಕೂಲ ಆಗಬೇಕು ಎಂದರು.
ಶಿರಾ ಹೆಸರು ಶಿಫಾರಸು ಕೈಬಿಟ್ಟ ವಿಚಾರವಾಗಿ ಮಾತನಾಡಿ, ನಾಲ್ಕೈದು ಪ್ರಭಾವಿ ಸಚಿವರು ಇದ್ದಾರೆ. ಒತ್ತಡ ಮಾಡಿರಬಹುದು ಎಂದರು.