ಹಾರ್ದಿಕ್- ಗಿಲ್ ನಡುವಿನ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕ್ಯಾಪ್ಟನ್ ಗಿಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕನ್ನಡಕ್ಕಾಗಿ ಏನು ಮಾಡಿದ್ದೇನೆ ಎಂಬುದು ಕರ್ನಾಟಕದ ಜನರಿಗೆ ಗೊತ್ತಿದೆ: ಶಿವಣ್ಣ!
ಐಪಿಎಲ್ನಲ್ಲಿ ಪಂದ್ಯ ನಡೆಯುವ ವೇಳೆ ಟೀಂ ಇಂಡಿಯಾ ಆಟಗಾರರೇ ಪರಸ್ಪರ ಜಗಳ ಮಾಡಿಕೊಂಡಿರುವ ಘಟನೆಗಳನ್ನು ನಾವು ಸಾಕಷ್ಟು ಭಾರಿ ನೋಡಿದ್ದೇವೆ. ಈ ಬಾರಿಯ ಐಪಿಎಲ್ನಲ್ಲೂ ಇದೇ ರೀತಿಯ ಸಾಕಷ್ಟು ಘಟನೆಗಳು ನಡೆದಿದ್ದವು. ಇದೀಗ ಆ ರೀತಿಯ ಘಟನೆ ನಿನ್ನೆಯ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ನಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆ ಸುದ್ದಿಯ ಪ್ರಕಾರ ಗುಜರಾತ್ ಟೈಟನ್ಸ್ ನಾಯಕ ಶುಭ್ಮನ್ ಗಿಲ್ ಮತ್ತು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ನಡುವಿನ ಸ್ನೇಹದಲ್ಲಿ ಬಿರುಕು ಉಂಟಾಗಿದೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ಕೆಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆದರೀಗ ಹಬ್ಬಿರುವ ವದಂತಿಯ ಬಗ್ಗೆ ಸ್ವತಃ ಶುಭ್ಮನ್ ಗಿಲ್ ಅವರೇ ಮೌನ ಮುರಿದಿದ್ದಾರೆ.
ಪಂದ್ಯದಲ್ಲಿ ಗುಜರಾತ್ ಟೈಟನ್ಸ್, ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿತು. ಪಂದ್ಯ ಪ್ರಾರಂಭವಾಗುವ ಮೊದಲು ಟಾಸ್ ನಡೆದಾಗ, ಶುಭ್ಮನ್ ಗಿಲ್ ನಾಣ್ಯವನ್ನು ಚಿಮ್ಮಿಸಿದರು ಮತ್ತು ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದರು. ಟಾಸ್ ನಡೆದಾಗಲೆಲ್ಲಾ ಇಬ್ಬರೂ ನಾಯಕರು ಕೈಕುಲುಕಿ ನಂತರ ತಮ್ಮ ನಿರ್ಧಾರಗಳನ್ನು ಪ್ರಕಟಿಸುವುದು ಸಾಮಾನ್ಯವಾಗಿ ಸಂಭವಿಸುತ್ತದೆ. ಆದರೆ ಇಲ್ಲಿ, ಟಾಸ್ ಸೋತ ನಂತರ, ಗಿಲ್ ಮತ್ತು ಹಾರ್ದಿಕ್ ಕೈಕುಲುಕದೆ ಹೊರಟುಹೋದರು. ಇದು ಕ್ಯಾಮರಾದಲ್ಲಿ ರೆಕಾರ್ಡ್ ಕೂಡ ಆಗಿತ್ತು. ಇದರ ವಿಡಿಯೋ ‘ಎಕ್ಸ್’ ನಿಂದ ಇನ್ಸ್ಟಾಗ್ರಾಮ್ವರೆಗೆ ಎಲ್ಲಾ ಕಡೆ ವೈರಲ್ ಆಗಿತ್ತು. ಈ ವಿಡಿಯೋವನ್ನು ನೋಡಿದವರು ಇಬ್ಬರ ನಡುವೆ ಬಿರುಕು ಮೂಡಿದೆ ಎಂದು ಹೇಳಲಾರಂಭಿಸಿದರು.
ಸಾಮಾನ್ಯವಾಗಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳ ವದಂತಿಗಳಿಗೆ ಪ್ರತಿಕ್ರಿಯಿಸುವುದರಿಂದ ದೂರವಿರುತ್ತಾರೆ. ಆದರೆ ಇಬ್ಬರ ನಡುವೆ ಬಿರುಕು ಮೂಡಿದೆ ಎಂಬ ವದಂತಿ ಸಾಕಷ್ಟು ವೇಗ ಪಡೆದುಕೊಂಡಿರುವುದನ್ನು ಗಮನಿಸಿದ ಶುಭ್ಮನ್ ಗಿಲ್, ಪಂದ್ಯಾವಳಿಯಿಂದ ತಂಡ ಹೊರನಡೆದ ನೋವಿನ ನಡುವೆಯೂ ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. ಗಿಲ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾರ್ದಿಕ್ ಜೊತೆಗಿನ ಎರಡು ಫೋಟೋಗಳನ್ನು ಪೋಸ್ಟ್ ಮಾಡಿ, “ಜಸ್ಟ್ ಲವ್, ಬೇರೇನೂ ಇಲ್ಲ (ಇಂಟರ್ನೆಟ್ನಲ್ಲಿ ನೋಡುವ ಎಲ್ಲವನ್ನೂ ನಂಬಬೇಡಿ)” ಎಂದು ಬರೆದಿದ್ದಾರೆ. ಅಲ್ಲದೆ ಗಿಲ್, ಹಾರ್ದಿಕ್ ಪಾಂಡ್ಯ ಅವರನ್ನು ಸಹ ಟ್ಯಾಗ್ ಮಾಡಿದ್ದಾರೆ. ಇತ್ತ ಹಾರ್ದಿಕ್ ಪಾಂಡ್ಯಕ್ಕೆ ಕೂಡ ಗಿಲ್ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ.