ಬೆಂಗಳೂರು: ಮನೆಗಳ್ಳತನ ಮಾಡ್ತಿದ್ದ ಖತರ್ನಾಕ್ ಆರೋಪಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ದೀಕ್ಷಿತ್ (25) ಬಂಧಿತ ಆರೋಪಿಯಾಗಿದ್ದು, ನಗರದಲ್ಲಿಸ್ವಿಗ್ಗಿ ಡೆಲಿವರಿ ಮಾಡುತ್ತಾ ಯಾವ್ಯಾವ ಮನೆ ಕಾಲಿ ಇದೆ ಅನ್ನೋದನ್ನ ನೋಡಿ ಗುರುತಿಸಿಕೊಳ್ತಿದ್ದನು.
ಬೀಗ ಹಾಕಿರುವ ಮನೆ, ರಾತ್ರಿ ಲೈಟ್ ಹಾಕದ ಮನೆ ಗುರುತಿಸಿಕೊಳ್ತಿದ್ದನು. ಇದೇ ರೀತಿ ಬಿಲ್ಡರ್ ಒಬ್ಬರ ಮನೆ ಟಾರ್ಗೆಟ್ ಮಾಡಿ, ಬಿಲ್ಡರ್ ಮನೆಯಲ್ಲಿ 70ಗ್ರಾಂ ಚಿನ್ನ, ಒಂದೂವರೆ ಲಕ್ಷ ಕ್ಯಾಶ್ ಕದ್ದಿದ್ದನು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸ್ರು.
ಬಿಳಿ ಕೂದಲು ಬುಡದಿಂದಲೇ ಕಡು ಕಪ್ಪಾಗ್ಬೇಕಾ!? ಈ ಹಣ್ಣಿನ ಗಿಡದ ಎಲೆಯನ್ನು ನೀರಲ್ಲಿ ಕುದಿಸಿ ತಲೆಗೆ ಹಚ್ಚಿ ಸಾಕು!
ಸಿಸಿಟಿವಿಯಲ್ಲಿ ಆರೋಪಿಯ ಚಲನವಲನ ರೆಕಾರ್ಡ್ ಆಗಿತ್ತು. ಇದರಿಂದ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿ ಜೈಲಿಗೆ ಕಳಿಸಿರುವ ಪೊಲೀಸ್ರು. ಬಂಧಿತನಿಂದ ಒಂದೂವರೆ ಲಕ್ಷ ಕ್ಯಾಶ್, 70ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.