ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂ ಬೆಳಗ್ಗೆ ಭಯಾನಕ ಆಕ್ಸಿಡೆಂಟ್ ನಡೆದಿದ್ದು ನಗರದ ಹಗದೂರಿನಲ್ಲಿ ನಡೆದಿದ್ದು ಸಿಸಿಟಿವಿಯಲ್ಲಿ ಡೆಡ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.
ಕಂಟ್ರೋಲ್ ಸಿಗದೆ ಅಡ್ಡಾದಿಡ್ಡಿ ಚಾಲನೆ ಮಾಡಿದ ಚಾಲಕ ರಸ್ತೆ ಬದಿ ನಿಂತಿದ್ದವ್ರಿಗೆ ಡಿಕ್ಕಿ ಹೊಡೆದ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ.
ಇಂದು ಬೆಳಗ್ಗೆ 7.30 ರ ಸುಮಾರಿಗೆ ನಡೆದಿರೋ ಘಟನೆಯಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಇಬ್ಬರು ವ್ಯಕ್ತಿಗಳು ಪಾರಾಗಿದ್ದಾರೆ.
ಈ ವೇಳೆ ಬೈಕ್ ನಲ್ಲಿ ಕುಳಿತಿದ್ದ ಅಪ್ಪಣ್ಣ ಹಾಗೂ ಪೋನ್ ನಲ್ಲಿ ಮಾತಾಡಿಕೊಂಡು ಹೋಗ್ತಿದ್ದ ಶ್ರೀನಿವಾಸ್ ಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಜಂಪ್ ಮಾಡಿ ಬಿದ್ದಿದ್ದ ಅಪ್ಪಣ್ಣಗೆ ತಲೆಗೆ ಗಾಯ ಹಾಗೆ ಶ್ರೀನಿವಾಸ್ ಗೆ ಕಾಲಿಗೆ ಗಂಭೀರ ಗಾಯವಾಗಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಅಪ್ಪಣ್ಣ ಸ್ಥಳೀಯ ವ್ಯಕ್ತಿಯಾಗಿದ್ದು, ಶ್ರೀನಿವಾಸ್ ಖಾಸಗಿ ಕಂಪನಿಯೊಂದ್ರಲ್ಲಿ ಮ್ಯಾನೇಜರ್ ಗಿ ಕೆಲಸ ಮಾಡುತ್ತಿದ್ದರು
ಡಿಕ್ಕಿ ಹೊಡೆದ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ವಾಹನದ ಮುಂಭಾಗ ನಜ್ಜುಗುಜ್ಜು..
ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ವೈಟ್ ಫೀಲ್ಡ್ ಸಂಚಾರಿ ಠಾಣೆ ಪೊಲೀಸರು ಚಾಲಕನನ್ನು ಅರೆಸ್ಟ್ ಮಾಡಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.