ತುಮಕೂರು : ಪರಿಷತ್ ಸದಸ್ಯ ರಾಜೇಂದ್ರ ಮೇಲೆ ಕೊಲೆ ಯತ್ನ ಆರೋಪ ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದೆ. ಎಂಎಲ್ ಸಿ ರಾಜೇಂದ್ರ ದೂರಿನ ಆಧಾರದ ಮೇಲೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಐದು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
A1 ಸೋಮ ಅಲಿಯಾಸ್ ಜಯಪುರ ಸೋಮ, A2 ಭರತ್ , A3 ಅಮಿತ್ , A4 ಗುಂಡಾ A5 ಯತೀಶ್ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಬಿಎನ್ ಎಸ್ ಕಲಂ 109, 329(4), 61(2) ಹಾಗೂ 190 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅನಾಮಧೇಯ ಮೂಲಗಳಿಂದ ಆಡಿಯೋ ಸಿಕ್ಕಿದ್ದು, ಅದೇ ಆಡಿಯೋದಲ್ಲಿ ರಾಜೇಂದ್ರ ಸುಪಾರಿ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ.
ಆಡಿಯೋದಲ್ಲಿ ಸ್ಫೋಟಕ ರಹಸ್ಯ..!?
ಆರೋಪಿಗಳಾದ ಸೋಮ, ಭರತ, ಅಮಿತ್, ಗುಂಡ ಮತ್ತು ಯತೀಶ್ ಎಂಬುವರು ಕೊಲೆಗೆ ಸಂಚು ರೂಪಿಸಿರುವುದು ಬಹಿರಂಗಗೊಂಡಿದ್ದು, ಒಟ್ಟು 70 ಲಕ್ಷಕ್ಕೆ ಡೀಲ್, 5 ಲಕ್ಷ ಮುಂಗಡವಾಗಿ ಪಡೆದಿದ್ದರು ಎನ್ನಲಾಗಿದೆ.
ರಾಜೇಂದ್ರ ಅವರ ಮಗಳ ಜನ್ಮದಿನವೇ ರಾಜೇಂದ್ರರನ್ನ ಹತ್ಯೆ ಮಾಡೋಕೆ ಮುಹೂರ್ತ ಫಿಕ್ಸ್ ಆಗಿರುವ ಬಗ್ಗೆ ಆಡಿಯೋದಲ್ಲಿ ಉಲ್ಲೇಖವಾಗಿದೆ. ಆದರೆ ಸಮಯ ಸಂದರ್ಭ ಕಾರಣದಿಂದ ಕೃತ್ಯವೆಸಗಲು ಆಗಿರಲಿಲ್ಲ. ಮುಂದೊಂದು ದಿನ ಹತ್ಯೆ ಮಾಡೋಕೆ ಸ್ಕೆಚ್ ಹಾಕಿದ್ದರು. ತುಮಕೂರು ನಗರದ ಶಿರಾ ಗೇಟ್ ಶೆಡ್ ಒಂದರಲ್ಲಿ ನಿರಂತರ ಸ್ಕೆಚ್ ಹಾಕುತ್ತಿದ್ದರು. ರಾಜೇಂದ್ರ ಹತ್ಯೆಗೆಂದೇ ಹೊಸ ಕಾರು, ಅಕ್ರಮ ಶಸ್ತ್ರಾಗಳನ್ನ ಖರೀದಿಸಿದ್ದರು..
ಮಧುಗಿರಿ, ತುಮಕೂರು, ಬೆಂಗಳೂರು, ಕಾಲಾಸಿಪಾಳ್ಯಗಳಲ್ಲಿ ಇವರ ಚಲನವಲನಗಳ ಬಗ್ಗೆ ಆಪ್ರೇಟ್ ಮಾಡುತ್ತಿದ್ದರು. ಉನ್ನತ ಮಟ್ಟದ ರಾಜಕಾರಣಿಗಳ ಕೈವಾಡ ಇರುವುದಾಗಿ ಉಲ್ಲೇಖವಾಗಿದೆ.