ಕೊಡಗು: ನಮ್ಮ ದೇಶ ಅಭಿವೃದ್ಧಿಯನ್ನು ಹೊಂದುತ್ತಾ ಆರ್ಥಿಕತೆಯಲ್ಲಿ ಇತರ ದೇಶಗಳನ್ನ ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಆದ್ರೆ ಇಂತ ಒಂದು ದೇಶದ ಗ್ರಾಮೀಣ ರಸ್ತೆಗಳ ಸ್ಥಿತಿ ಮಾತ್ರ ನಿಜಕ್ಕೂ ಶೋಚನೀಯ. ಸರಿಯಾದ ರಸ್ತೆಗಳಿಲ್ಲದೆ ಅಲ್ಲಿನ ಜನತೆ ಪಡುತ್ತಿರುವ ಕಷ್ಟಗಳನ್ನ ನೋಡಿದ್ರೆ ನಿಜಕ್ಕು ನೀವೆ ಶಾಕ್ ಆಗ್ತಿರಾ.
ಎಸ್ ಹಿಗೋಂದು ಶೋಚನೀಯ ಸ್ಥಿತಿ ಕಂಡು ಬಂದಿರೋದು ಬೆರೆ ಎಲ್ಲೂ ಅಲ್ಲ. ನಮ್ಮದೆ ಈ ಕೊಡಗಿನಲ್ಲಿ. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮಂಕ್ಕದೂರು ಗ್ರಾಮ ಪಂಚಾಯತ್ ಗೆ ಒಳ ಪಡುವ ಮುಕ್ಕೋಡ್ಲು ಎನ್ನುವ ಒಂದು ಪುಟ್ಟ ಗ್ರಾಮದಲ್ಲಿ. ಸುಮಾರು 150 ಕ್ಕೂ ಹೆಚ್ಚು ಕುಟುಂಬಗಳಿರುವ ಈ ಗ್ರಾಮಕ್ಕೆ ತೆರಳುವ ರಸ್ತೆಗಳನ್ನ ನೋಡಿದ್ರೆನೆ ನಮಗೆ ಭಯ ಆಗುತ್ತೆ.
ಇನ್ನು ಪ್ರತಿ ನಿತ್ಯ ಕೂಡ ಬೆಟ್ಟ ಗುಡ್ಡ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ತಿರುಗಾಡೊದಾದ್ರೆ ಹೇಗಾಬ್ಬೇಡಾ ಹೇಳಿ. ಇದು ಇಂದು ನಿನ್ನೆಯ ಸಮಸ್ಯೆ ಅಲ್ಲ ಶತ ಶತಮಾನದಿಂದಲ್ಲೂ ಈ ಒಂದು ರಸ್ತೆಯ ಸ್ಥಿತಿ ಮಾತ್ರ ಹೀಗೆಯೆ ಇದೆ. ಈ ಒಂದು ರಸ್ತೆ ತಂತಿಪಾಲ ಮುಕೋಡ್ಲು ಕಲ್ಲುಕೊಟ್ಟು ಮೂಲಕ ಮಾಂದಲಪಟ್ಟಿಗೆ ಹಾಗೂ ಸೋಮವಾರಪೇಟೆಯ ಶಾಂತಳ್ಳಿ ಎಂಬ ಊರಿಗೆ ಸಂಪರ್ಕ ಕಲ್ಪಿಸುತ್ತೆ ಆದ್ರೆ ಈ ರಸ್ತೆಯ ದುರಸ್ತಿ ಕಾರ್ಯ ಮಾತ್ರ ನಡೆದೆ ಇಲ್ಲ.
ಮಳೆಗಾಲ ಬಂದ್ರೆ ಸಾಕು ಈ ಊರಿನ ಜನರ ಜೀವನ ಮಾತ್ರ ಆ ದೇವರಿಗೆ ಪ್ರೀತಿ. ಈ ಒಂದು ಗ್ರಾಮೀಣ ರಸ್ತೆಯ ದುರಸ್ತಿ ಮಾತ್ರ ಮರಿಚಿಕೆಯಾಗೆ ಉಳಿದಿದೆ. ಮಳೆಗಾಲದಲ್ಲಂತು ಈ ಒಂದು ರಸ್ತೆಯಲ್ಲಿ ಸಾಗೋದು ಮಾತ್ರ ನಿಜಕ್ಕೂ ಸಾಹಸವೇ ಸರಿ. ಹೊಂಡ, ಗುಂಡಿಗಳಿಂದ ಕೂಡಿದ ಈ ರಸ್ತೆಗೆ 4×4 ವಾಹನದಲ್ಲೇ ಸಾಗಬೇಕು. ಅದು ಮಳೆಗಾಲದಲ್ಲಿ ಇಲ್ಲಿನ ಜನರ ಜೀವನ ನಿಜಕ್ಕೂ ಸಾಹಸ ಮಯ.
ಈ ಭಾಗದಲ್ಲಿ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಈ ದುರ್ಘಮ ಹಾದಿಯಲ್ಲೆ ಸಾಗಬೇಕು. ಈ ಭಾಗದ ರಸ್ತೆಗಳು ಮಧ್ಯ ಮಧ್ಯದಲ್ಲಿ ಮಾತ್ರ ಅಲ್ಪ ಸ್ವಲ್ಪ ರಸ್ತೆಯನ್ನ ಮಾಡಿದ್ದಾರೆಯೇ ಹೊರತು ಸಂಪೂರ್ಣವಾದ ರಸ್ತೆಯನ್ನೋದೆ ಇಲ್ಲ. ಸುಮಾರು 6/7 ಕಿಲೋಮೀಟರ್ ಹರಸಹಾಸ ಪಟ್ಟುಕೊಂಡು ಸಾಗಬೇಕು.
ನಗರ ಪ್ರದೇಶಕ್ಕೆ ಹತ್ತಿರವಿರುವ ಪ್ರದೇಶದಲ್ಲಿ ಮಾತ್ರ ಕೊಂಚ ಮಟ್ಟಿನ ರಸ್ತೆ ಆಗಿದೇಯೆ ಹೊರತು ಬೆಟ್ಟದ ಮೇಲೆ ಹೋಗುತ್ತಿದ್ದಂತೆ ಡಾಂಬರಿಕರಣ ಕಾಣದೆ ಕಲ್ಲು ಮಣ್ಣಿನ ರಸ್ತೆಯಲ್ಲೆ ಸಾಗಬೇಕು. ಈ ಭಾಗದಲ್ಲಿ ಸಾಕಷ್ಟು ಮಂದಿ ವಯೋ ವೃದ್ಧರಿದ್ದು, ವೈದ್ಯಕೀಯ ಸೇವೆ ಪಡೆಯ ಬೇಕು ಅಂದ್ರೆ ತುರ್ತಾಗಿ ಆಸ್ಪತ್ರೆ ಸೇರಬೇಕು ಅಂದ್ರೆ ಈ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಾಗಿದ್ರೆ ಅದು ಮತ್ತೊಂದು ಅನಾಹುತವನ್ನೆ ತಂದೊಡ್ಡೊದಂತು ಸತ್ಯ. ಹೀಗಾಗಿ ಪ್ರತಿ ನಿತ್ಯ ಈ ಓಡಾಡುವ ಗ್ರಾಮದ ಜನತೆ ಸಾಕಷ್ಟು ಸಮಸ್ಯೆಯನ್ನ ಎದುರಿಸುತ್ತಿದ್ದಾರೆ.
ಅಷ್ಟು ಮಾತ್ರವಲ್ಲ ಇಲ್ಲಿ ವಿದ್ಯುತ್ ಹಾಗೂ ನೆಟ್ವರ್ಕ್ ಸಮಸ್ಯೆ ಕೂಡ ಇದೆ. ಮಳೆ ಗಾಲ ಬಂದ್ರೆ ಸಾಕು ವಾರಗಟ್ಟಲೆ ವಿದ್ಯುತ್ ಸಂಪರ್ಕ ಕಡಿತ ವಾಗುತ್ತೆ. ಮೋಬೈಲ್ ನೆಟ್ವರ್ಕ್ ಬೇಕು ಅಂದ್ರೆ ಯಾವುದಾದರು ಬೆಟ್ಟದ ತುದಿಯನ್ನೆ ಹತ್ತಬೇಕು. ಇಲ್ಲಿನ ಜನತೆಯನ್ನ ಸಂಪರ್ಕ ಮಾಡೊದು ಕೂಡ ಬಹಳ ದೊಡ್ಡ ಸಮಸ್ಯೆಯಾಗುತ್ತೆ. ಸರಿಯಾದ ರಸ್ತೆಗಳಿಲ್ಲದೆ ತಮ್ಮತೋಟಗಳಿಗೆ ಬೇಕಾದ ಗೊಬ್ಬರಗಳನ್ನ ತರಲು ಕಾಫಿ ಕರಿಮೆಣಸಿನ ಕೊಯ್ಲು ಸಮಯದಲ್ಲಿ ಬಹಳ ಸಮಸ್ಯೆ ಎದುರಿಸುತ್ತಾರೆ. ಜೊತೆಗೆ ಬಹಳಷ್ಟು ಮಂದಿ ರಸ್ತೆ ಸಮಸ್ಯೆಯಿಂದ ಗದ್ದೆಗಳನ್ನ ಮಾಡೊದನ್ನ ಕೂಡ ನಿಲ್ಲಿಸಿದ್ದಾರೆ.
ಜೊತೆಗೆ ಬಹಳ ಮುಖ್ಯವಾಗಿ ಇದು ಇಬ್ಬರು ಪ್ರಭಾವಿ ರಾಜಕೀಯ ನಾಯರಾದ ಮಾಜಿ ಎಂ.ಎಲ್.ಸಿ ವೀಣಾ ಅಚ್ಚಯ್ಯ ಹಾಗೂ ರವಿ ಕುಶಾಲಪ್ಪ ತವರಾದ್ರು ಕೂಡ ಮೂಲ ಭೂತ ಸೌಕರ್ಯ ಇಲ್ಲದಿರೋದು ಮಾತ್ರ ವಿಪರ್ಯಾಸ. ಗ್ರಾಮದ ಜನರು ಸಾಕಷ್ಟು ಬಾರಿ ಅಧಿಕಾರಿಗಳು, ಜನ ಪ್ರತಿನಿಧಿಗಳ ಕಚೇರಿ ಅಲೆದು ಅಲೆದು ಸುಸ್ತಾಗಿ ಹೋಗಿದ್ದಾರೆಯೆ ಹೊರತು ರಸ್ತೆಗಳ ದುರಸ್ತಿ ಮಾತ್ರ ನಡೆದಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ. ರಸ್ತೆ ದುರಸ್ತಿಯಾಗದಿದ್ದಲ್ಲಿ ಸೋಮವಾರಪೇಟೆ ಮಡಿಕೇರಿ ರಸ್ತೆಯನ್ನ ಬಂದ್ ಮಾಡಿ ಪ್ರತಿಭಟನೆ ನಡೆಸೋದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಸ್ಥಳಕ್ಕೆ ಇಂಜಿನಯರ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಗ್ರಾಮಸ್ಥರು ಗ್ರಾಮದ ರಸ್ತೆಯನ್ನ ದುರಸ್ಥಿ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸಮಸ್ಯೆ ಬಗೆ ಹರಿಸೋದಾಗಿ ಭರವಸೆಯನ್ನ ಕೂಡ ನೀಡಿದ್ದಾರೆ.ಒಟ್ಟಿನಲ್ಲಿ ಶತಶತಮಾನಗಳಿಂದಲೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಕುಗ್ರಾಮಕ್ಕೆ ಇನ್ನಾದ್ರು ಅಧಿಕಾರಿಗಳು ಜನಪ್ರತಿನಿಧಿಗಳು ಭೇಟಿ ನೀಡಿ ಸರಿಯಾದ ರೀತಿಯಲ್ಲಿ ಸ್ಪಂದಿಸಿ ಸಮಸ್ಯೆ ಬಗೆ ಹರಿಸಬೇಕೆಂಬುದೆ ನಮ್ಮ ಆಶಯ ಕೂಡ ಹೌದು..