ಬಹಳಷ್ಟು ಜನ ಮನೆ ಕಟ್ಟುವಾಗ ವಾಸ್ತು ತಜ್ಞರ ಸಲಹೆ ಪಡೆಯುತ್ತಾರೆ. ಯಾವ ಮೂಲೆ ಎಲ್ಲಿರಬೇಕು. ಯಾವ ದಿಕ್ಕಿನಲ್ಲಿ ಏನು ಬರಬೇಕು ಎಂದು ಕೇಳಿ ತಿಳಿಯುತ್ತಾರೆ. ಆದರೆ ಮನೆ ಕಟ್ಟಿದ ಮೇಲೆ ಕೆಲವು ವಾಸ್ತು ದೋಷಗಳು ಇದ್ದೇ ಇರುತ್ತದೆ. ಇದಕ್ಕೆ ಪರಿಹಾರ ಎನ್ನುವಂತೆ ಮನೆಯಲ್ಲಿ ಕೆಲವು ಸಸಿಗಳನ್ನು ಬೆಳೆಸಿದರೆ ವಾಸ್ತು ದೋಷವು ಪರಿಹಾರವಾಗುತ್ತದೆ. ಜೊತೆಗೆ ಧನಾತ್ಮಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಜನರು ತೋಟದಲ್ಲಿ ಸಮಯ ಕಳೆಯುವುದರಿಂದ ಆಯಾಸ ಕಳೆಯುತ್ತದೆ ಜೊತೆಗೆ ಮನಶಾಂತಿಯೂ ಸಿಗುತ್ತದೆ. ಒತ್ತಡ ಕಡಿಮೆ ಮಾಡಲು ಜನರು ಕೃಷಿ ಮೊರೆ ಹೋಗುವುದನ್ನು ನೋಡಿದ್ದೀರಿ. ಅದೇ ಕೃಷಿಯು ವಾಸ್ತುವನ್ನೂ ಸರಿಪಡಿಸುತ್ತದೆ
Chicken Benefits: ಚಿಕನ್ ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಬೆನಿಫಿಟ್ ಗಳಿದೆ ಗೊತ್ತಾ?
ಕೆಲವು ಹೂವುಗಳು ಕೆಲವು ದೇವರುಗಳಿಗೆ ಸೂಕ್ತವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆ ರೀತಿಯಲ್ಲಿ, ದಾಸವಾಳದ ಹೂವುಗಳು ನೈಸರ್ಗಿಕವಾಗಿ ಸುಂದರವಾಗಿರುತ್ತದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಅಷ್ಟೇ ಅಲ್ಲ, ಮನೆಯ ಮುಂದೆ ಈ ಗಿಡವನ್ನು ಬೆಳೆಸುವುದಿಂದ ಅನೇಕ ಆಧ್ಯಾತ್ಮಿಕ ಪ್ರಯೋಜನಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ.
ಲಕ್ಷ್ಮಿ ದೇವಿಯ ಆಶೀರ್ವಾದ : ಮನೆಯಲ್ಲಿ ದಾಸವಾಳ ಗಿಡ ಬೆಳೆಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬಹುದು ಎಂದು ನಂಬಲಾಗಿದೆ. ಆದರೆ ಈ ಗಿಡ ಒಣಗದಂತೆ ನೋಡಿಕೊಳ್ಳಬೇಕು. ಎಚ್ಚರಿಕೆಯಿಂದ ಬೆಳೆಸಬೇಕು. ಸಂಪತ್ತಿನ ದೇವತೆ ಲಕ್ಷ್ಮಿ ದೇವಿಗೆ ಪ್ರಿಯವಾದ ದಾಸವಾಳವು ವಾಸ್ತು ಶಾಸ್ತ್ರದಲ್ಲಿ ಭಾರಿ ಆರ್ಥಿಕ ಕೊಡುಗೆಯನ್ನು ನೀಡುತ್ತದೆ ಎಂದು ನಂಬಲಾಗಿದೆ..
ದಾಸವಾಳ ಗಿಡಗಳನ್ನು ಬೆಳೆಸುವುದರ ಪ್ರಯೋಜನಗಳು : ಈ ದಾಸವಾಳ ಗಿಡವನ್ನು ಮನೆಯಲ್ಲಿ ಬೆಳೆಸಿದರೆ, ಆರ್ಥಿಕ ಸಂಕಷ್ಟದಲ್ಲಿರುವವರು ಮತ್ತು ಸಾಲದಲ್ಲಿರುವವರ ಸಮಸ್ಯೆಗಳು ಬಹಳ ಕಡಿಮೆಯಾಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯಲ್ಲಿ ಹಣವನ್ನು ಇಡುವ ಸ್ಥಳದಲ್ಲಿ, ವಿಶೇಷವಾಗಿ ಶುಕ್ರವಾರದಂದು ದಾಸವಾಳದ ಹೂವುಗಳನ್ನು ಇರಿಸಿ, ಗಣೇಶ ಮತ್ತು ದುರ್ಗೆಯನ್ನು ಪೂಜಿಸಿದರೆ, ಹೆಚ್ಚಿನ ಲಾಭವಾಗುತ್ತದೆ ಎಂದು ನಂಬಲಾಗಿದೆ.
ಕುಟುಂಬ ಸಂಬಂಧಗಳಲ್ಲಿ ಘರ್ಷಣೆ, ಜಗಳ, ವಾಸ್ತು ಸಮಸ್ಯೆಗೆ ನೀವು ಮಲಗುವಾಗ ನಿಮ್ಮ ದಿಂಬಿನ ಕೆಳಗೆ ದಾಸವಾಳದ ಹೂವನ್ನು ಇಟ್ಟುಕೊಳ್ಳಬೇಕು. ಇದು ಮನಸ್ಸನ್ನು ಶಾಂತಗೊಳಿಸುತ್ತದೆ, ನಿಮ್ಮಲ್ಲಿ ಸಕಾರಾತ್ಮಕ ಭಾವನೆಗಳನ್ನು ಸೃಷ್ಟಿಸುತ್ತದೆ. ಸಂಬಂಧಿಕರ ನಡುವೆ ಪ್ರೀತಿಯನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ.
ಅಷ್ಟೇ ಅಲ್ಲ, ಮನೆಯಲ್ಲಿ ದಾಸವಾಳ ಸಸ್ಯ ಬೆಳೆಸಿದರೆ, ಮನೆ ಸೌಂದರ್ಯ ಮತ್ತು ವಾತಾವರಣ ಉತ್ತಮವಾಗಿರುತ್ತೆ.