ದಾವಣಗೆರೆ:- ಭದ್ರಾ ಬಲದಂಡೆ ಕಾಲುವೆ ಸೀಳಿ ಕುಡಿಯುವ ನೀರಿನ ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಇಂದು ಭಾರತೀಯ ರೈತ ಒಕ್ಕೂಟ ಹಾಗೂ ಬಿಜೆಪಿ ರೈತ ಮೋರ್ಚಾ ವತಿಯಿಂದ ದಾವಣಗೆರೆ ಬಂದ್ ಗೆ ಕರೆ ಕೊಡಲಾಗಿದೆ. ಅದರಂತೆ ಪ್ರತಿಭಟನೆ ಹೀಗಾಗಲೇ ಆರಂಭವಾಗಿದ್ದು, ನಗರದ ವಿದ್ಯಾನಗರ ಸರ್ಕಲ್ ನಲ್ಲಿ ಬಿಜೆಪಿ ನಾಯಕರು ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ.
ಗುಜರಾತ್ ಹೈಕೋರ್ಟ್ನಲ್ಲಿ ವಿಚಿತ್ರ ಘಟನೆ: ಟಾಯ್ಲೆಟ್ನಿಂದಲೇ ವಿಚಾರಣೆಗೆ ಹಾಜರಾದ ಭೂಪ!
ದಾವಣಗೆರೆ ಬಂದ್ ಹಿನ್ನಲೆ ತೆರೆದ ವಾಹನದಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ ರೌಂಡ್ಸ್ ಹಾಕಲಾಗಿದ್ದು, ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ನಮ್ಮ ನೀರಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಹೀಗಾಗಿ ಬಂದ್ ಗೆ ನೀವೆಲ್ಲರೂ ಬೆಂಬಲ ಕೊಡಬೇಕು ಎಂದು ಆಟೋ ಚಾಲಕರಿಗೆ, ಬಸ್ ಚಾಲಕರಿಗೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಭದ್ರಾ ಬಲದಂಡೆ ಕಾಲುವೆ ಸೀಳಿ ಕುಡಿಯುವ ನೀರಿನ ಅವೈಜ್ಞಾನಿಕ ಕಾಮಗಾರಿ ಹಿನ್ನಲೆ ದಾವಣಗೆರೆ ನಗರಕ್ಕೆ ಬಂದ್ ಕರೆ ಕೊಡಲಾಗಿದ್ದು, ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಐದು ಗಂಟೆವರೆಗೆ ಬಂದ್ ಇರಲಿದೆ. ಮೆಡಿಕಲ್ ಮತ್ತು ಹಾಲು ಬಿಟ್ಟು ಉಳಿದಂತೆ ಎಲ್ಲರೂ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ. ಎಲ್ಲಾ ಸರ್ಕಲ್ಗಳಲ್ಲಿ ಪೊಲೀಸರ ಬಿಗಿ ಭದ್ರತೆ ಮಾಡಲಾಗಿದೆ.
ಪ್ರತಿಭಟನೆ ಏಕೆ?
ಭದ್ರಾ ಬಲದಂಡೆ ನಾಲೆಯಿಂದ ಅವೈಜ್ಞಾನಿಕವಾಗಿ ಕುಡಿಯುವ ನೀರಿನ ಯೋಜನೆ ಮಾಡಲಾಗುತ್ತಿದೆ. ಹೊಸದುರ್ಗ ಅಜ್ಜಂಪುರ ತರೀಕೆರೆ ತಾಲೂಕುಗಳ 1600ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಭದ್ರಾ ಬಲನಾಲೆ ಸೀಳಿ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ದಾವಣಗೆರೆ ಭಾಗದ ರೈತರಿಗೆ ನೀರು ಪೂರೈಕೆಯಾಗುವುದಿಲ್ಲ. ಇದು ಅವೈಜ್ಞಾನಿಕ, ಕೂಡಲೇ ಕಾಮಗಾರಿಯನ್ನು ಸ್ಥಗಿತ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.