Close Menu
Ain Live News
    Facebook X (Twitter) Instagram YouTube
    Tuesday, June 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿಮಗೂ ಶುಗರ್ ಇದ್ಯಾ!? ಹಾಗಿದ್ರೆ ಈ ಮೂರು ಜ್ಯೂಸ್ ಕುಡಿಯಲೇಬೇಡಿ!?

    By AIN AuthorApril 10, 2025
    Share
    Facebook Twitter LinkedIn Pinterest Email
    Demo

    ಇತ್ತೀಚಿನ ದಿನಗಳಲ್ಲಿ ಮಧುಮೇಹ ಬಹುತೇಕ ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ದೇಹದ ಮೆದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಕೊರತೆ ಉಂಟಾಗಿ ಕಡಿಮೆ ಪ್ರಮಾಣದ ಇನ್ಸುಲಿನ್​ ಉತ್ಪತ್ತಿಯಾಗುವುದರಿಂದ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗಿ ಉಂಟಾಗುವುದೇ ಈ ಮಧುಮೇಹ.

    ಪೋಡಿಮುಕ್ತ ಗ್ರಾಮ ಗುರಿ: ಸರ್ವೇ ಪೂರ್ಣಗೊಳಿಸಲು ಸಿಎಂ ಸೂಚನೆ: ಸಚಿವ ಕೃಷ್ಣಬೈರೇಗೌಡ ಹಾಡಿಹೊಗಳಿದ ಸಿದ್ದು

    ಇಂತಹ ಮಧುಮೇಹದಿಂದ ಬಳಲುತ್ತಿರುವವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಊಟ, ಉಪಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.

    ಮಧುಮೇಹ ಅಥವಾ ಸಕ್ಕರೆಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ದೈನಂದಿನ ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಕೆಲವೊಂದು ಆಹಾರಗಳನ್ನು ಕಡಿಮೆ ತಿನ್ನಬೇಕು ಅಂದ್ರೆ ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು, ಇನ್ನು ಕೆಲವು ಆಹಾರ ಪದಾರ್ಥಗಳು, ಆರೋಗ್ಯಕ್ಕೆ ಆರೋಗ್ಯಕಾರಿಯಾಗಿದ್ದರೂ ಕೂಡ, ಮಧುಮೇಹ ಇರುವವರು ಮಾತ್ರ ಇಂತಹ ಆಹಾರಗಳನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕಾಗಿ ಬರುತ್ತದೆ

    ಇವೆಲ್ಲಾದರ ಜೊತೆಗೆ ವೈದ್ಯರು ನೀಡುವ ಔಷಧಿಗಳನ್ನು ಸರಿಯಾಗಿ ತೆಗೆದುಕೊಂಡು ನಿಯಮಿತ ವಾದ ಆಹಾರ ಪದ್ಧತಿಯನ್ನು ರೂಢಿ ಮಾಡಿಕೊಳ್ಳುವುದರಿಂದ ಈ ಕಾಯಿಲೆಯನ್ನು ತಕ್ಕಮಟ್ಟಿಗೆ ಆದರೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವಾಗುತ್ತದೆ. ಈ ಕಾಯಿಲೆ ಕಾಣಿಸಿಕೊಂಡರೆ ಜೀವನ ಪರ್ಯಾಂತ ನಮ್ಮನ್ನು ಬಿಟ್ಟು ಹೋಗದೇ ಇರುವುದರಿಂದ, ಜೀವಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ, ಈ ಕಾಯಿಲೆ ತೊಂದರೆಗಳಿಂದ ದೂರವಿರಬಹುದು ಅಷ್ಟೇ!

    ದೆಹಲಿ ವೈದ್ಯರೋರ್ವರ ಪ್ರಕಾರ, ಮಧುಮೇಹ ರೋಗಿಗಳು, ಕೆಲವೊಂದು ಬಗೆಯ ಹಣ್ಣುಗಳ ಜ್ಯೂಸ್ ಕುಡಿಯುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡುತ್ತಾರೆ.

    ಉದಾಹರಣೆಗೆ, ಕಿತ್ತಳೆ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಹೆಚ್ಚಿನ ಜನರು ಬೆಳಿಗ್ಗೆ ಕಿತ್ತಳೆ ರಸವನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ನಿಮಗೆ ಗೊತ್ತಿರಲಿ ಕಿತ್ತಳೆ ಜ್ಯೂಸ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೈಸರ್ಗಿಕ ಸಕ್ಕರೆಯಾಂಶ ಕಂಡು ಬರುತ್ತದೆ. ಹೀಗಾಗಿ ಈ ಹಣ್ಣಿನ ಜ್ಯೂಸ್ ಕುಡಿಯುವ ಬದಲು, ಇದನ್ನು ಹಾಗೆಯೇ ತಿನ್ನುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು. ಯಾಕೆಂದ್ರೆ ಈ ಹಣ್ಣಿನಲ್ಲಿ ಸಿಗುವ ವಿಟಮಿನ್ ಸಿ ಹಾಗೂ ಅಧಿಕ ಪ್ರಮಾಣದ ನಾರಿನಾಂಶವು ಈ ಕಾಯಿಲೆಯನ್ನು ನಿಯಂತ್ರಿಸಲು ನೆರವಾಗುತ್ತದೆ.

    ಸೇಬು ತಿನ್ನುವುದರಿಂದ ಅನೇಕ ರೋಗಗಳು ನಮ್ಮಿಂದ ದೂರ ವಾಗುತ್ತದೆ ಎಂದು ಹೇಳಲಾಗುತ್ತದೆ. ಸೇಬು ಹಣ್ಣುಗಳು ಬೆಲೆಯಲ್ಲಿ ದುಬಾರಿಯಾ ದರೂ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
    ಆದರೆ ಈ ಹಣ್ಣಿನ ಜ್ಯೂಸ್ ಮಾಡಿ ಕುಡಿಯುವ ಬದಲು ಊಟದ ಬಳಿಕ ಒಂದೆರಡು ಪೀಸ್ ತಿನ್ನುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು. ಇದಕ್ಕೆ ಪ್ರಮುಖ ಕಾರಣ, ನೈಸರ್ಗಿಕ ಸಕ್ಕರೆಯಾಂಶ ಹೆಚ್ಚಾಗಿರುವ ಈ ಹಣ್ಣಿನ ಜ್ಯೂಸ್ ಕುಡಿಯುವುದರಿಂದ, ರಕ್ತದಲ್ಲಿ ಸಕ್ಕರೆಮಟ್ಟ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗುತ್ತದೆ

    ಹುಳಿಸಿಹಿ ಮಿಶ್ರಿತ ಅನಾನಸ್‌ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಅಧಿಕ ಪ್ರಮಾಣದಲ್ಲ ಕಂಡು ಬರುವುದರ ಜೊತೆಗೆ ಈ ಹಣ್ಣಿನಲ್ಲಿ ಕಂಡು ಬರುವ ಗ್ಲೈಸೆಮಿಕ್ ಸೂಚ್ಯಂಕ ಕೂಡ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ವೇಗವಾಗಿ ಹೆಚ್ಚಿಸುತ್ತದೆ. ಆದ್ದರಿಂದ ಈ ಹಣ್ಣಿನ ಜ್ಯೂಸ್ ನಿಂದ ಮಧುಮೇಹ ಕಾಯಿಲೆ ಇರುವವರು ದೂರವಿದ್ದರೆ ಒಳ್ಳೆಯದು ಎನ್ನುತ್ತಾರೆ ವೈದ್ಯರು.

    ದ್ರಾಕ್ಷಿ ಹಣ್ಣಿನಲ್ಲಿಯೂ ಕೂಡ ಅಧಿಕ ಪ್ರಮಾಣದಲ್ಲಿ ಸಕ್ಕರೆಯಾಂಶ ಕಂಡು ಬರುತ್ತದೆ ಎನ್ನುತ್ತಾರೆ ವೈದ್ಯರು ಆದರೆ ಈ ಹಣ್ಣಿನ ಜ್ಯೂಸ್ ಕುಡಿಯುವ ಬದಲು ಮಿತವಾಗಿ ಈ ಹಣ್ಣನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು. ಆದರೆ ನೆನಪಿಡಿ ಈಗಾಗಲೇ ಶುಗರ್ ಹೆಚ್ಚಾಗಿರುವವರು ದ್ರಾಕ್ಷಿಯನ್ನು ದಿನನಿತ್ಯ ಸೇವಿಸುವುದು ಒಳ್ಳೆಯದಲ್ಲ.

    ಹಾಗಲಕಾಯಿ- ಹಾಗಲಕಾಯಿ ರಸವು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ
    ಸೋರೆಕಾಯಿ- ಮಧುಮೇಹ ರೋಗಿಗಳಿಗೆ ಸೋರೆಕಾಯಿ ಪ್ರಯೋಜನಕಾರಿ. ಇದರ ರಸವನ್ನು ಕುಡಿಯುವುದರಿಂದ ಸಕ್ಕರೆ ಮಟ್ಟ ನಿಯಂತ್ರಣ ದಲ್ಲಿ ಇಟ್ಟುಕೊಳ್ಳಬಹುದು
    ಸೌತೆಕಾಯಿ- ಸೌತೆಕಾಯಿ ಮತ್ತು ಪುದೀನಾ ರಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅವುಗಳ ರಸವನ್ನು ಕುಡಿಯುವುದ ರಿಂದ ಸಕ್ಕರೆ ಮಟ್ಟ ಹೆಚ್ಚಾಗುವುದಿಲ್ಲ ಮತ್ತು ಆರೋಗ್ಯಕ್ಕೂ ಪ್ರಯೋಜನವಾಗುತ್ತದೆ

    Demo
    Share. Facebook Twitter LinkedIn Email WhatsApp

    Related Posts

    ಮುಟ್ಟಿನ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಸರಿಯೋ ತಪ್ಪೋ? ತಜ್ಞರು ಹೇಳೋದು ಹೀಗೆ

    June 24, 2025

    Healthy Food: ಎಲ್ಲಕ್ಕಿಂತ ಮಿಗಿಲು ಆರೋಗ್ಯ ಸಂಪತ್ತು; ಮೆಂತ್ಯ ನೀರು ಕುಡಿದ್ರೆ ಸಿಗುತ್ತೆ ಸೂಪರ್ ಪ್ರಯೋಜನಗಳು..!

    June 24, 2025

    ಮಂಗಳವಾರ ಸಂಜೆ ಹೀಗೆ ಮಾಡಿದ್ರೆ ಕಷ್ಟಗಳೆಲ್ಲಾ ಕ್ಷಣಾರ್ಧದಲ್ಲಿ ಮಾಯವಾಗತ್ತೆ!

    June 24, 2025

    ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಾ!? ಹಾಗಿದ್ರೆ ರಾತ್ರಿ ಮಾಡುವ ಈ ತಪ್ಪು ಕಾರಣ!

    June 23, 2025

    ನಿಮಗಿದು ಗೊತ್ತಾ!? ಕರಿಬೇವಿನ ಎಲೆಗಳನ್ನು ನೆನೆಸಿ ನೀರು ಕುಡಿಯುವುದರಿಂದ, ಸಿಗುವ ಆರೋಗ್ಯ ಬೆನಿಫಿಟ್ ಎಷ್ಟು ಗೊತ್ತಾ!?

    June 23, 2025

    ಒಂದೇ ತಿಂಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿಸಬೇಕಾ? ಹಾಗಿದ್ರೆ ಏಲಕ್ಕಿಯನ್ನು ಹೀಗೆ ತಿನ್ನಿರಿ!

    June 23, 2025

    Milk For Health: ನೀವು ಜಾಸ್ತಿ ಹಾಲು ಕುಡಿತೀರಾ? ಹಾಗಾದ್ರೆ ಈ ವಿಚಾರ ಮೊದ್ಲು ತಿಳಿದುಕೊಳ್ಳಿ!

    June 23, 2025

    ಈ ಕಾಳು ನೆನೆಸಿದ ನೀರು ಕುಡಿದ್ರೆ ಸಂಪೂರ್ಣ ನಿಯಂತ್ರಣವಾಗುತ್ತೆ ಬ್ಲಡ್ ಶುಗರ್!

    June 23, 2025

    ನಿಂಬೆ ಸಿಪ್ಪೆ ಬಿಸಾಕೋ ಮುನ್ನ ಈ ಸ್ಟೋರಿ ನೋಡಿ: ಇದರಿಂದಾಗುವ ಲಾಭ ಎಷ್ಟು ಗೊತ್ತಾ?

    June 23, 2025

    ಕೊಲೆಸ್ಟ್ರಾಲ್‌, ಗ್ಯಾಸ್ಟ್ರಿಕ್ ಇರೋರಿಗೆ ಒಣ ಶುಂಠಿ ಸೇವನೆ ಬೆಸ್ಟ್ ಅಂತೆ!

    June 22, 2025

    ಹಳೇ ಬಟ್ಟೆ ದಾನ ಮಾಡ್ತಿದ್ದೀರಾ!? ಎಚ್ಚರ, ಈ ತಪ್ಪು ಮಾಡೋ ಮುನ್ನ ಸುದ್ದಿ ನೋಡಿ!

    June 22, 2025

    ರಾತ್ರಿ ಮಲಗಿದ್ದಾಗ ಕೈ-ಕಾಲು ಸೆಳೆತ ಆಗೋದ್ಯಾಕೆ? ಕಾರಣ ತಿಳಿದ್ರೆ ಶಾಕ್ ಆಗ್ತೀರಾ?

    June 22, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.