2025ರ ಕ್ವಾಲಿಫೈಯರ್ 2 IPL ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮಣಿಸಿ ಪಂಜಾಬ್ ಕಿಂಗ್ಸ್ ಫೈನಲ್ ಗೇರಿದೆ.
IPL 2025: ಮುಂಬೈ ವಿರುದ್ಧ ಅಮೋಘ ಗೆಲುವು: ನಾಳೆ ಆರ್ ಸಿಬಿ-ಪಂಜಾಬ್ ಫೈನಲ್ ಫೈಟ್!
ಗೆದ್ದ ಬಳಿಕ ಮಾತನಾಡಿದ ಶ್ರೇಯಸ್, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಹೇಗೆ ಇಷ್ಟೊಂದು ಶಾಂತವಾಗಿರುತ್ತೇನೆಂದು ನನಗೆ ತಿಳಿದಿಲ್ಲ. ಆದರೆ ನಾನು ಯಾವಾಗಲೂ ಹೇಳುವುದೇನೆಂದರೆ, ಸಂದರ್ಭ ದೊಡ್ಡದಾದಷ್ಟೂ ನೀವು ಹೆಚ್ಚು ಶಾಂತವಾಗಿರಬೇಕು. ಆಗ ಮಾತ್ರ ನಮಗೆ ನಿಜವಾದ ಫಲಿತಾಂಶಗಳು ಸಿಗುತ್ತವೆ. ಇಂದು ನಾನು ನನ್ನ ಉಸಿರಾಟದ ಮೇಲೆ ಗಮನಹರಿಸಿದೆ, ಬೆವರುವುದಕ್ಕಿಂತ ಮಾನಸಿಕ ಸ್ಥಿರತೆಗೆ ಹೆಚ್ಚು ಗಮನ ನೀಡಿದೆ’ ಎಂದು ಹೇಳಿದ್ದಾರೆ.
ಆರ್ಸಿಬಿ ಪಂದ್ಯದ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್, ಆ ಸೋಲಿನ ಬಗ್ಗೆ ತಂಡ ಹೆಚ್ಚು ಯೋಚಿಸಲಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರು ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಕೇವಲ 101 ರನ್ಗಳಿಗೆ ಆಲೌಟ್ ಆಗಿತ್ತು. ಆ ಸೋಲಿನ ಬಗ್ಗೆ ತಂಡ ಹೆಚ್ಚು ಯೋಚಿಸಲಿಲ್ಲ ಎಂದು ಶ್ರೇಯಸ್ ಅಯ್ಯರ್ ಹೇಳಿದರು. ನಾವು ಋತುವಿನ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದೇವೆ. ಒಂದು ಪಂದ್ಯದಿಂದ ನಮ್ಮ ತಂಡವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ನಾವು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ನಾವು ಆರಂಭದಿಂದಲೂ ಸಕಾರಾತ್ಮಕ ಮತ್ತು ಆಕ್ರಮಣಕಾರಿ ಕ್ರಿಕೆಟ್ ಆಡುತ್ತಿದ್ದೇವೆ. ಮಾಡಿದ ತಪ್ಪುಗಳನ್ನು ಮರೆತು ಮುಂದುವರಿಯುವುದು ಮುಖ್ಯ ಎಂಬುದು ಅಯ್ಯರ್ ಮಾತುಗಳಾಗಿದೆ.