ನಮ್ಮ ಲಿವರ್ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ನೀವು ಹೊರಗಿನಿಂದ ಹೆಚ್ಚು ಅನಾರೋಗ್ಯಕರ ಆಹಾರವನ್ನು ಸೇವಿಸಿದಾಗ ಅಥವಾ ಆಲ್ಕೋಹಾಲ್ ಸೇವಿಸಿದಾಗ, ಅದು ಯಕೃತ್ತಿಗೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ. ಅದು ತನ್ನ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ. ಯಕೃತ್ತು ಆರೋಗ್ಯಕರವಾಗಿ ಮತ್ತು ರೋಗರಹಿತವಾಗಿರಲು ನೀವು ಬಯಸಿದರೆ, ಅದನ್ನು ಶುದ್ಧೀಕರಿಸುವುದು ಮತ್ತು ನಿರ್ವಿಷಗೊಳಿಸುವುದು ಮುಖ್ಯ. ಇದಕ್ಕಾಗಿ, ಪೌಷ್ಟಿಕತಜ್ಞ ಅಂಜಲಿ ಮುಖರ್ಜಿ ಅವರು ಸೂಚಿಸಿದ ಕೆಲವು ನೈಸರ್ಗಿಕ ವಿಧಾನಗಳನ್ನು ಪ್ರಯತ್ನಿಸಿ.
ಕಬ್ಬಿನ ಬಾಕಿ ಬಿಲ್ ಪಾವತಿಗೆ ಆಗ್ರಹ: ಜಿಲ್ಲಾಡಳಿತ ಭವನದ ಮುಂದೆ ರೈತರ ಪ್ರತಿಭಟನೆ!
ನೀವು ಯಕೃತ್ತನ್ನು ಆರೋಗ್ಯಕರವಾಗಿ ಮತ್ತು ದೀರ್ಘಾಯುಷ್ಯದವರೆಗೆ ಆರೋಗ್ಯಕರವಾಗಿರಿಸಲು ಬಯಸಿದರೆ, ಅದನ್ನು ಸ್ವಚ್ಛಗೊಳಿಸಲು, ನೀವು ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಕುಡಿಯಬೇಕು.
ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಮುಂಜಾನೆ ಎದ್ದ ಕೂಡಲೇ ದಿನಾ ಒಂದೆರಡು ಲೋಟ ಉಗುರು ಬೆಚ್ಚಗಿನ ನೀರನ್ನು, ಖಾಲಿ ಹೊಟ್ಟೆಗೆ ಕುಡಿಯುವ ಅಭ್ಯಾಸ ಕೊಂಡರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.ಪ್ರಮುಖವಾಗಿ ದೇಹದಿಂದ ದೇಹದಿಂದ ವಿಷಕಾರಿ ಅಂಶಗಳು ಮೂತ್ರದ ಮೂಲಕ ಹೊರ ಹೋಗಿ, ಲಿವರ್ ಆರೋಗ್ಯವು ಚೆನ್ನಾಗಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಲಿವರ್ ಅಥವಾ ಯಾಕೃತ್ ನಮ್ಮ ದೇಹದ ಒಂದು ಪ್ರಮುಖ ಅಂಗ. ಇದರ ಪ್ರಮುಖ ಕಾರ್ಯ ಏನೆಂದರೆ ದೇಹದ ರಕ್ತವನ್ನು ಶುದ್ಧೀಕರಿಸುವುದರ ಜೊತೆಗೆ ಮೆಟಬಾಲಿಸಂ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತದೆ. ಇನ್ನೂ ಮುಖ್ಯವಾಗಿ ನಾವು ದಿನನಿತ್ಯ ಸೇವನೆ ಮಾಡುವ ಆಹಾರ ಗಳಿಂದ ಕಂಡು ಬರುವ ವಿಷಕಾರಿ ಅಂಶಗಳನ್ನು ನಿವಾರಿಸಿ, ಜೀರ್ಣ ಕ್ರಿಯೆ ಪ್ರಕ್ರಿಯೆಗೆ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತದೆ. ಈ ಬಗ್ಗೆ ವೈದ್ಯರು ಕೂಡ ಹೇಳುವ ಪ್ರಕಾರ, ಈ ಪ್ರಮುಖ ಅಂಗ ದೇಹದಿಂದ ಹಾನಿಕಾರಕ ವಿಷವನ್ನು ಸ್ವಯಂಚಾಲಿತವಾಗಿ ಶೋಧಿಸಿ ಮೂತ್ರ ಮತ್ತು ಬೆವರಿನ ಮೂಲಕ ಹೊರಹಾಕುತ್ತದೆಯಂತೆ. ಹೀಗಾಗಿ ಯಾವುದೇ ಕಾರಣಕ್ಕೂ ಕೂಡ ಲಿವರ್ ಭಾಗದಲ್ಲಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು.
ನಿಮಗೆ ಗೊತ್ತಿರಲಿ, ನಾವು ಪ್ರತಿದಿನ ಸೇವನೆ ಮಾಡುವ ಆಹಾರ ಪದಾರ್ಥಗಳಲ್ಲಿ ಕಂಡುಬರುವ ಬೇಡದ ತ್ಯಾಜ್ಯದ ಅಂಶಗಳು, ಕೆಲವೊಮ್ಮೆ ಜೀರ್ಣಕ್ರಿಯೆ ಪ್ರಕ್ರಿಯೆಗೆ ಒಳಗಾಗದೆ ದೇಹದಲ್ಲಿ ಹಾಗೆ ಉಳಿದುಬಿಡುತ್ತದೆ. ಕೊನೆಗೆ ಇದೇ ವಿಷಕಾರಿ ಅಂಶವಾಗಿ ಬದಲಾಗುತ್ತದೆ.
ಇದರಿಂದ ಲಿವರ್ ಭಾಗದ ಮೇಲೆ ಒತ್ತಡ ಹೆಚ್ಚಾಗುವುದರ ಜೊತೆಗೆ, ಈ ಪ್ರಮುಖ ಅಂಗದ ದೈನಂದಿನ ಕಾರ್ಯ ಚಟುವಟಿಕೆಗೂ ಕೂಡ ಅಡ್ಡಿಯಾಗುತ್ತದೆ. ಹೀಗಾಗಿ ಇವೆಲ್ಲಾ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬೇಕು ಎಂದರೆ, ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು
ಇದರಿಂದ ದೇಹದಿಂದ ವಿಷಕಾರಿ ಅಂಶಗಳು ಮೂತ್ರದ ಮೂಲಕ ಹೊರಹೋಗಿ, ಲಿವರ್ ಆರೋಗ್ಯವು ಕೂಡ ಚೆನ್ನಾಗಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಇಷ್ಟು ಮಾತ್ರವಲ್ಲದೆ ಪ್ರತಿದಿನ ದಿನಾ ಹೀಗೆ ನೀರು ಕುಡಿಯುತ್ತಾ ಬಂದರೆ ಇನ್ನಷ್ಟು ಆರೋಗ್ಯ ಲಾಭಗಳು ಕೂಡ ಇವೆ, ಅವು ಯಾವುದು ಎನ್ನುವುದನ್ನು ನೋಡುತ್ತಾ ಹೋಗೋಣ…
ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿರುತ್ತದೆ: ಬೆಳಗ್ಗೆ ಖಾಲಿ ಹೊಟ್ಟೆಗೆ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆಯು ಸುಧಾರಿಸುತ್ತದೆ ಮತ್ತು ಮಲಬದ್ಧತೆಯಂತಹ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ.
ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ- ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿಯುವುದರಿಂದ ದೇಹದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ.
ನಿರ್ಜಲೀಕರಣ ಸಮಸ್ಯೆ ದೂರವಾಗುತ್ತದೆ: ಬೆಚ್ಚಗಿನ ನೀರು ದೇಹವನ್ನು ಹೈಡ್ರೀಕರಿಸುತ್ತದೆ, ಇದು ಅಂಗಗಳ ಕಾರ್ಯ ನಿರ್ವಹಣೆಯನ್ನು ಸುಧಾರಿಸುತ್ತದೆ.
ಕೇವಲ ಉಗುರುಬೆಚ್ಚಗಿ ಬಿಸಿನೀರು ಕುಡಿಯುವುದರಿಂದ ಯಕೃತ್ತು ಸಂಪೂರ್ಣವಾಗಿ ಶುದ್ಧವಾಗುವುದಿಲ್ಲ ಎನ್ನುತ್ತಾರೆ ವೈದ್ಯರು. ದಿನಾ ಬೆಳಗ್ಗೆ ಉಗುರು ಬೆಚ್ಚಗಿನ ಬಿಸಿನೀರು ಕುಡಿಯುವುದರಿಂದ ತಕ್ಕ ಮಟ್ಟಿಗಾದರೂ ಯಕೃತ್ತು ಆರೋಗ್ಯವಾಗಿಡಲು ಸ್ವಲ್ಪ ಸಹಾಯವಾ ಗುತ್ತದೆ,