ಬೆಂಗಳೂರು: ಉದ್ದೇಶಿತ ಬೆಂಗಳೂರಿನ ೨ನೇ ಏರ್ ಪೋರ್ಟನ್ನು ಕನಕಪುರದಲ್ಲೇ ಆರಂಭಿಸಿ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ನಡೆಗೆ ಕಾಂಗ್ರೆಸ್ ನಲ್ಲೇ ಅಪಸ್ವರ ತೀವ್ರಗೊಂಡಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳ ತಂಡ ಈಗಾಗಲೇ ಕನಕಪುರ ಹಾಗೂ ನೆಲಮಂಗಲ-ಕುಣಿಗಲ್ ಬಳಿ ಉದ್ದೇಶಿತ ಏರ್ಪೋರ್ಟ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದೆ. ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿರುವಾಗಲೇ ಕಾಂಗ್ರೆಸ್ ನ ಮತ್ತೊಂದು ಬಣ ಡಿ.ಕೆ ಶಿವಕುಮಾರ್ ಗೆ ಟಕ್ಕರ್ ಕೊಡಲು ಮುಂದಾಗಿದೆ.
ತುಮಕೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ಶಾಸಕರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಕನಪುರದಲ್ಲಿ ಹೊಸ ಏರ್ ಪೋರ್ಟ್ ಮಾಡೋದು ಬೇಡ. ನೆಲಮಂಗಲ ಅಥವಾ ಶಿರಾದಲ್ಲಿ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಈಗ ನೆಲಮಂಗಲ ಹೊಸ ಎರ್ ಪೋರ್ಟ್ ಮಾಡಿದರೆ ಮತ್ತಷ್ಟು ಟ್ರಾಫಿಕ್ ಹೆಚ್ಚಾಗುತ್ತದೆ. ಹೀಗಾಗ ಶಿರಾ ಸೂಕ್ತ ಸ್ಥಳ ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ ಹೇಳಿದ್ದಾರೆ.
ದೇವನಹಳ್ಳಿ ಏರ್ ಪೋರ್ಟ್ ಗೆ ನಾಲ್ಕು ಸಾವಿರ ಎಕರೆ ಇದೆ. ಈಗಾಗಲೇ ಇದು ನಂಬರ್ ಒನ್ ಏರ್ಪೋರ್ಟ್ ಅಂತ ಹೆಸರು ಪಡೆದಿದೆ. ದೆಹಲಿ ಬಾಂಬೆಯನ್ನ ದೇವನಹಳ್ಳಿ ಏರ್ ಪೋರ್ಟ್ ಮೀರಿಸಿದೆ. ಎರಡನೇ ಏರ್ಪೋರ್ಟ್ ಮಾಡಲು ೧೫೦ ಕಿಮೀ ಅಂತರದಲ್ಲಿ ಎರಡನೇ ಏರ್ ಪೋರ್ಟ್ ಅಗಬೇಕು. ಶಿರಾದಲ್ಲಿ ಏರ್ ಪೋರ್ಟ್ ಯಾಕೆ ಆಗಬೇಕು ಅಂದರೆ ಈ ರಸ್ತೆಗೆ ನಾಲ್ಕು ಹೆದ್ದಾರಿ ಸಿಗುತ್ತದೆ. ಶಿರಸ ಹೈವೇನಿಂದ ಅನೇಕ ರಸ್ತೆಗಳು ಬೇರೆ ಬೇರೆ ಕಡೆ ಹೋಗುತ್ತವೆ. ಹೀಗಾಗಿ
ಶಿರಾದಲ್ಲಿ ಏರ್ಪೋರ್ಟ್ ಆಗಬೇಕು ಅಂತ ಮನವಿ ಸಲ್ಲಿಸಿದ್ದೇವೆ ಎಂದು ಟಿ.ಬಿ ಜಯಚಂದ್ರ ತಿಳಿಸಿದರು.
ಮುಂಬರುವ ವರ್ಷಗಳಲ್ಲಿ ಬೆಂಗಳೂರಲ್ಲಿ ಜನಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ನೆಲಮಂಗಲ-ಕನಕಪುರದಲ್ಲೂ ಟ್ರಾಫಿಕ್ ಹೆಚ್ಚಾಗಲಿದೆ. ಏರ್ ಪೋರ್ಟ್ ನ ಒಂದಿಷ್ಟು ಕಂಡೀಷನ್ ಫುಲ್ ಫಿಲ್ ಆಗೋದು ಶಿರಾದಲ್ಲಿ ಮಾತ್ರ. ಇದರಿಂದ ಕೃಷಿ ಎಕ್ಸಪೋರ್ಟ್ ಗೆ ಅನುಕೂಲ ಆಗಲಿದೆ.
ಹಾಗಾಗಿ ಶಿರಾದಲ್ಲಿ ಆಗಲಿ ಅನ್ನೋದು ಅನೇಕ ಶಾಸಕರ ಮನವಿಯಾಗಲಿದೆ. ಶಿರಾದಲ್ಲಿ ಮಾಡಿದರೆ ಬೇರೆ ಬೇರೆ ಜಿಲ್ಲೆಯ ಫ್ಲೈಟ್ ಗಳು ಕನೆಕ್ಟ್ ಆಗುತ್ತವೆ. ಹಿಂದೆ ಬಿಡದಿ ಬಳಿ ಜಾಗ ನೋಡಿದ್ದರು ಆದರೆ ಅದು ಬೇಡ ಅಂದ್ರು. ಈಗ ನೆಲಮಂಗಲ ಮಾಡಿದರೆ ಮತ್ತಷ್ಟು ಟ್ರಾಫಿಕ್ ಹೆಚ್ಚಾಗುತ್ತದೆ ಎಂದು ಟಿ.ಬಿ ಜಯಚಂದ್ರ ಸಮರ್ಥನೆ ಮಾಡಿಕೊಂಡಿದ್ದಾರೆ.