ಬೆಂಗಳೂರು:- ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ರೈತರಿಗೆ ಡಬಲ್ ಖುಷಿ ಸುದ್ದಿ ಕೊಟ್ಟಿದ್ದಾರೆ. ನಗರದಲ್ಲಿ ಇಂದು ನಡೆದ ಸಭೆಯಲ್ಲಿ ರಾಗಿ, ಜೋಳ, ತೊಗರಿಗೆ MSP ದರ ನಿಗದಿ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ.
ರೈತರ ಸಾಲ ಮನ್ನಾ ಮಾಡೋಕೆ ನಮ್ಮತ್ರ ಪ್ರಿಂಟಿಂಗ್ ಮಿಷನ್ ಇಟ್ಟಿಲ್ಲ: ಸಚಿವ ರಾಜಣ್ಣ!
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ , ರಾಗಿ, ಜೋಳ, ತೊಗರಿ ಖರೀದಿ ಮಾಡುತ್ತಿದ್ದೇವೆ. 7550 ರೂ. ತೊಗರಿಗೆ ಕೇಂದ್ರ ನಿಗದಿ ಮಾಡಿದೆ. ಇದಕ್ಕೆ 450 ರೂ. ಹೆಚ್ಚುವರಿ ಕೊಟ್ಟು ಖರೀದಿ ಮಾಡುತ್ತಿದ್ದೇವೆ. ಜಿಯೋ ಟ್ಯಾಗ್ ಕೊಟ್ಟು ಖರೀದಿ ಮಾಡಲಾಗುತ್ತೆ. ರಾಗಿಯನ್ನ 20 ಕ್ವಿಂಟಾಲ್ ನಿಂದ 30 ಕ್ವಿಂಟಾಲ್ ಖರೀದಿಗೆ ಮುಂದಾಗಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನು ಇದೇ ವೇಳೆ ರೈತರಿಗೆ ಮತ್ತೊಂದು ಗುಡನ್ಯೂಸ್ ನೀಡಿದ್ದಾರೆ. ಬೆಂಗಳೂರಿನ ಕಾವೇರಿ ಆಸ್ಪತ್ರೆಯು CSR ಫಂಡ್ ನಲ್ಲಿ 100 ಜನ ರೈತರಿಗೆ ಮಂಡಿ ಚಿಪ್ಪು ಸಮಸ್ಯೆಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗಿದ್ದಾರೆ. 15 ಕೋಟಿ ರೂ. ವೆಚ್ಚದಲ್ಲಿ 100 ರಿಂದ 150 ಜನ ರೈತರಿಗೆ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ. ರೋಬೋಟಿಕ್ ಮೂಲಕ ಚಿಕಿತ್ಸೆ ನೀಡುತ್ತಿದ್ದು, ಓರ್ವ ರೋಗಿಗೆ 3- 4 ಲಕ್ಷ ಆಗುತ್ತದೆ. ಆಯಾ ತಾಲ್ಲೂಕು, ಜಿಲ್ಲಾ ಹೆಡ್ ಕ್ವಾಟ್ರಸ್ ನಿಂದ ಪ್ರಕ್ರಿಯೆ ಶುರುವಾಗಲಿದೆ ಎಂದಿದ್ದಾರೆ.
ಚಿಕಿತ್ಸೆ ಒಳಗಾಗುವವಿಗೆ ಬೇಕಾಗುವ ದಾಖಲೆಗಳು:-
ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ