ಬೆಂಗಳೂರು: ಇ.ಡಿ. ನನ್ನ ಮೇಲೂ ಕೇಸ್ ಹಾಕಿತ್ತು. ಆಮೇಲೆ ಏನಾಯಿತು?. ಯಾರೂ ನನ್ನ ರಕ್ಷಣೆಗೆ ಬಂದಿರಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇ.ಡಿ. ನನ್ನ ಮೇಲೂ ಕೇಸ್ ಹಾಕಿತ್ತು. ಆಮೇಲೆ ಏನಾಯಿತು?. ಯಾರೂ ನನ್ನ ರಕ್ಷಣೆಗೆ ಬಂದಿರಲಿಲ್ಲ. ನ್ಯಾಯಾಲಯ ನನ್ನ ರಕ್ಷಣೆಗೆ ಬಂತು ಎಂದರು.
ನಿಂಬೆ ಸಿಪ್ಪೆ ಬಿಸಾಕೋ ಮುನ್ನ ಈ ಸ್ಟೋರಿ ನೋಡಿ: ಇದರಿಂದಾಗುವ ಲಾಭ ಎಷ್ಟು ಗೊತ್ತಾ?
ಈಗ ಯಾರೋ ಹೇಳಿಕೆ ನೀಡಿದ್ದಾರೆ ಅಂತ ಡಿ. ಕೆ. ಸುರೇಶ್ರನ್ನು ಕರೆದಿದ್ದಾರೆ. ಜನಪ್ರತಿನಿಧಿಗಳನ್ನು ಅವರ ಕ್ಷೇತ್ರದಲ್ಲಿ ಅನೇಕರು ಭೇಟಿ ಮಾಡುತ್ತಾರೆ. ಇ. ಡಿ. ಏನೆಲ್ಲ ಪ್ರಶ್ನೆ ಕೇಳುತ್ತಾರೆ ಅದಕ್ಕೆ ಉತ್ತರ ಕೊಡುತ್ತಾರೆ. ತನಿಖೆಗೆ ಸಹಕಾರ ನೀಡಲು ಸಿದ್ಧರಿದ್ದಾರೆ. ನೀವು ಅದನ್ನು ದೊಡ್ಡದಾಗಿ ಬಿಂಬಿಸುತ್ತಿದ್ದೀರಿ. ಯಾವುದನ್ನು ಬಿಂಬಿಸಬೇಕೋ ಅದನ್ನು ಬಿಂಬಿಸಲ್ಲ ಎಂದು ಬೇಸರ ವ್ಯಕ್ತಪಡಿಸಿದರು.