ಬಾಗಲಕೋಟೆ : ಹರಳಯ್ಯ ಮತ್ತು ಕಲ್ಯಾಣಮ್ಮನವರು ತಮ್ಮ ತೊಡೆ ಚರ್ಮದಿಂದ ಬಸವಣ್ಣನವರಿಗೆ ಪಾದ ರಕ್ಷಣೆ ಮಾಡಿಕೊಟ್ಟಿದ್ದು ಇತಿಹಾಸ. ಕಲ್ಬುರ್ಗಿಯ ಜಿಲ್ಲೆಯ ಸೇಡಂ ತಾಲೂಕಿನ ಬಿಜನಳ್ಳಿ ಗ್ರಾಮದಲ್ಲಿ 12ನೇ ಶತಮಾನದಲ್ಲಿ ಶಿವಶರಣ ಹರಳಯ್ಯ ಮತ್ತು ಕಲ್ಯಾಣ್ ಅಮ್ಮನವರು ತಮ್ಮ ತೊಡೆಯಿಂದ ಮಾಡಿದ ಪಾದ ರಕ್ಷಣೆ ಇನ್ನೂ ನೋಡಲು ಸಿಗುತ್ತದೆ. ನಮ್ಮ ಜಿಲ್ಲೆಯಲ್ಲಿ ಸಮಗಾರ ಸಮುದಾಯವು ಹೆಚ್ಚಿನ ಮಟ್ಟದಲ್ಲಿ ಸಂಘಟಿತರಾಗಿ ಮತ್ತು ಪ್ರತಿಯೊಂದು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದರ ಜೊತೆಗೆ ಈ ದೇಶದಲ್ಲಿ ಉತ್ತಮ ಸಮಗಾರ ಸಮುದಾಯವಾಗಿ ಹೊರಹೊಮ್ಮಬೇಕು ಎಂದು ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಬ್ರಹ್ಮಾನಂದ ಮಠ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ತೇರದಾಳ ರಬಕವಿ ಬನಹಟ್ಟಿ ತಾಲೂಕ ಘಟಕದ ವತಿಯಿಂದ ಶ್ರೀ ಶಿವಶರಣ ಸಮಗಾರ ಹರಳಯ್ಯನವರ ಜಯಂತೋತ್ಸವ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಗೀರಮಲ್ವಪ್ಪ ಕಬಾಡಿ ಗೌರವಾಧ್ಯಕ್ಷರು ಹರಳಯ್ಯ ಸಮಾಜ ರಬಕವಿ ಬನಹಟ್ಟಿ ತಾಲೂಕ. ಸಚಿನ ಕೊಡತೆ ಅಧ್ಯಕ್ಷರು ಹರಳಯ್ಯ ಸಮಾಜ ರಬಕವಿ ಬನಹಟ್ಟಿ ತಾಲೂಕ. ಸಿದ್ದು ಕೊಣ್ಣೂರ ಕಾಂಗ್ರೆಸ ಮುಖಂಡರು. ಜಗದೀಶ ಬೆಟಗೇರಿ. ಯಲ್ಲಪ್ಪ ಬೆಂಡಿಗೇರಿ. ಪ್ರಶಾಂತ ಹೊಸಮನಿ. ಉಮೇಶ್ ಹೊನ್ನಮೋರೆ. ಸಂತೋಷ್ ಹಂಜಗಿ. ಎಸ್ ಬಿ ಕಾಂಬಳೆ. ನಾಗೇಶ ಚಾಂಬರ. ರವಿ ಸಣ್ಣಕ್ಕಿ. ಮಹಾದೇವ ಹಂಜಗಿ. ಸುಧಾಕರ ಸಣ್ಣಕ್ಕಿ. ಸಂಜು ಕೊಡತೆ. ಬಸವರಾಜ ಮಡ್ಡೆನ್ನವರ. ಶಿವಾನಂದ ಹೊನ್ನಕಡಬಿ.ಆನಂದ ಪಾಂಡವ.ಅರುಣ ಸಣ್ಣಕ್ಕಿ ಸೇರಿದಂತೆ ಮುಂತಾದವು ಪಾಲ್ಗೊಂಡಿದ್ದರು.