ಬೀದರ್ : ಜನಿವಾರ ಹಾಕಿದ್ದಕ್ಕೆ K-CET ಪರೀಕ್ಷೆ ಬರೆಯಲು ಬಿಡದ ಪರೀಕ್ಷಾ ಕೇಂದ್ರ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿ ಮತ್ತು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಬ್ಬಂದಿಗಳ ಅಮಾನವೀಯ ವರ್ತನೆಯಿಂದಾಗಿ ಬೀದರ್ ನಗರದ ಚೌಬಾರ ನಿವಾಸಿ ಸುಚಿವ್ರತ್ ಕುಲಕರ್ಣಿ ಪರೀಕ್ಷೆಯಿಂದ ವಂಚಿತನಾಗಿದ್ದಾರೆ. ಗುಂಪಾ ಸಮೀಪದ ಸಾಯಿ ಸ್ಪೂರ್ತಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಘಟನೆ ನಡೆಸಿದ್ದು, ಜನಿವಾರ ಹಾಕಿದ್ದಕ್ಕೆ ಗಣಿತ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರದ ಸಿಬ್ಬಂದಿ ಅನುಮತಿ ನಿರಾಕಿಸಿದ್ದಾರೆ.
ಸಿಇಟಿ ಪರೀಕ್ಷಾರ್ಥಿಗಳು ಜನಿವಾರ ತೆಗೆಸಿದ ಸಿಬ್ಬಂದಿ ; ಬ್ರಾಹ್ಮಣ ಸಮುದಾಯ ಆಕ್ರೋಶ
ವಿದ್ಯಾರ್ಥಿ ಸುಚಿವ್ರತ್ ಜನಿವಾರ ಹಾಕಿಕೊಂಡೆ ದಿ.16ರಂದು ಅದೇ ಪರೀಕ್ಷಾ ಕೇಂದ್ರದಲ್ಲಿ ಭೌತಶಾಸ್ತ್ರ ಹಾಗೂ ರಾಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದಾನೆ. ಆದರೆ ಗುರುವಾರ ಗಣಿತ ಪರೀಕ್ಷೆ ನಡೆದಿತ್ತು. ಈ ವೇಳೆ ಜನಿವಾರ ತೆಗೆದು ಹೋಗಿ, ಜನಿವಾರ ಧಾರ ದಿಂದ ಏನಾದ್ರೂ ಮಾಡಿಕೊಂಡರೆ ಯಾರು ಹೊಣೆ…?ಎಂದು ವಿದ್ಯಾರ್ಥಿಗೆ ಸಿಬ್ಬಂದಿ ತಡೆದಿದ್ದಾರೆ. ವಿದ್ಯಾರ್ಥಿ.ಜನಿವಾರ ಹಾಕಿಕೊಂಡೆ ನಿನ್ನೆ ಪರೀಕ್ಷೆ ಬರೆದಿದ್ದೆ, ಈಗಲೂ ಅವಕಾಶ ಕೊಡಿ, ಎಂದು ಮನವಿ ಮಾಡಿಕೊಂಡರೂ ಸಹ ಬಿಡದಲಿಲ್ಲ ಎನ್ನಲಾಗಿದೆ. ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅನುಮತಿ ನೀಡದಿದ್ದಕ್ಕೆ, ವಿದ್ಯಾರ್ಥಿ ತಾಯಿ ಬೇಸರ ವ್ಯಕ್ತಪಡಿಸಿದ್ದು, ಪುತ್ರನ ಒಂದು ವರ್ಷದ ಜೀವನ ಹಾಳಾಯಿತು ಎಂದು ಕಾಲೇಜು ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.