ಬೆಳಗಾವಿ:- ಪ್ರಖ್ಯಾತ ಮಠವೊಂದರ ಸ್ವಾಮೀಜಿಯೋರ್ವರು ಲೇಡಿ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಸಾರ್ವಜನಿಕರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದ ಪ್ರಖ್ಯಾತ ಮಠವೊಂದರಲ್ಲಿ ರಾತ್ರಿಹೊತ್ತು ಅನಾಚಾರ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯ ಯುವಕರು ಮಠದ ಮೇಲೆ ಅಟ್ಯಾಕ್ ಮಾಡಿ ಸ್ವಾಮೀಜಿ ನೀರಿಳಿಸಿದ್ದಾರೆ. ಈ ವೇಳೆ ಅಡವಿಸಿದ್ಧೇಶ್ವರ ಮಠದ ಅಡವಿಸಿದ್ಧರಾಮ ಸ್ವಾಮೀಜಿಗೆ ತರಾಟೆ ತೆಗೆದುಕೊಂಡಿದ್ದಾರೆ. ಮಠದ ಸ್ವಾಮೀಜಿ ರೂಂನಲ್ಲಿ ಲೇಡಿ ಇರುವುದನ್ನು ಕೆಲ ಯುವಕರು ನೋಡಿದ್ದಾರೆ. ಆಗ ತಕ್ಷಣವೇ ಊರಿನವರಿಗೆಲ್ಲ ಸುದ್ದಿ ಹರಡಿ ಮಠಕ್ಕೆ ನೂರಾರು ಯುವಕರು ದೌಡಾಯಿಸಿದರು.
ಮಠದ ರೂಂನೊಳಗೆ ನುಗ್ಗಿ ಸ್ವಾಮೀಜಿ ಹಾಗೂ ಮಹಿಳೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಯುವಕರನ್ನು ಹೊರಹಾಕಲು ಸ್ವಾಮೀಜಿ ಹರಸಾಹಸ ಪಟ್ಟಿದ್ದು, ಸ್ಥಳೀಯರಿಂದ ಸ್ವಾಮೀಜಿಗೆ ನಿಂದಿಸಲಾಗಿದೆ. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಮೂಡಲಗಿ ಠಾಣೆ ಪೊಲೀಸರು ಪರಿಸ್ಥಿತಿ ತಿಳಿ ಗೊಳಿಸಿದರು. ತಕ್ಷಣವೇ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಮೂಡಲಗಿ ಠಾಣೆ ಪೊಲೀಸರು ಶಿಫ್ಟ್ ಮಾಡಿದ್ದಾರೆ. ಬಳಿಕ ಮೂಡಲಗಿ ಠಾಣೆ ಪೊಲೀಸರು ಸ್ವಾಮೀಜಿ ಹಾಗೂ ಗ್ರಾಮಸ್ಥರ ಸಭೆ ನಡೆಸಿದ್ದಾರೆ. ಅಡವಿಸಿದ್ಧರಾಮ ಸ್ವಾಮೀಜಿ ಯಾವುದೇ ಕಾರಣಕ್ಕೂ ಮಠದಲ್ಲಿ ಇರಬಾರದು ಎಂದು ಸ್ಥಳೀಯರು ಹೇಳಿದ್ದಾರೆ. ಈ ಬೆನ್ನಲ್ಲೇ ಮಠಬಿಟ್ಟು ಅಡವಿಸಿದ್ಧರಾಮ ಸ್ವಾಮೀಜಿ ತೆರಳಿದ್ದಾರೆ.