ಮಂಡ್ಯ:– ಹೋರಾಟಗಾರರ ವಿರುದ್ದ ನಾಲಿಗೆ ಹರಿಬಿಟ್ಟ ಮದ್ದೂರು ಶಾಸಕ ಕದಲೂರು ಉದಯ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ವಾಹನ ಸವಾರರಿಗೆ ಬಿಗ್ ಶಾಕಿಂಗ್ ಸುದ್ದಿ: ಈ ರಸ್ತೆಯಲ್ಲಿ ಮೂರು ತಿಂಗಳು ಸಂಚಾರ ನಿಷೇಧ!
ಮದ್ದೂರು ನಗರಸಭೆಯನ್ನು ಮೇಲ್ದರ್ಜೆಗೆ ಏರಿಕೆಗೆ ವಿರೋಧ ವ್ಯಕ್ತಪಡಿಸಿರುವ ರೈತರು ಸೇರಿದಂತೆ ಕೆಲವು ಸಂಘಟನೆಗಳು ಹಲವು ಗ್ರಾಮ ಪಂಚಾಯತಿಗಳ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಈ ಪ್ರತಿಭಟನೆ ಖಂಡಿಸುವ ಭರದಲ್ಲಿ ಹೋರಾಟಗಾರನ್ನು ರೋಲ್ ಕಾಲ್ ಗಿರಾಕಿಗಳೆಂದು ಶಾಸಕ ಕದಲೂರು ಉದಯ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಅಭಿವೃದ್ಧಿಗೆ ವಿರೋಧಿಸುವವರ ಬಗ್ಗೆ ಎನ್ ಹೇಳೋಕಾಗುತ್ತೆ, ಸಹಿಸಲಾದವರು ಇಂಹತವನ್ನು ಮಾಡ್ತಾರೆ. ಎಂಜಲು ಕಾಸು ಕೊಟ್ಟು ಛೂ ಬಿಟ್ಟು ಇಂತಹ ಕೆಲಸ ಮಾಡಿಸ್ತಾರೆ. ಕೆಲ ರೋಲ್ ಕಾಲ್ ಗಿರಾಕಿಗಳಿದ್ದಾರೆ,ಸಂಘ ಸಂಸ್ಥೆಕಟ್ಟಿಕೊಂಡು ಎಂಜಲು ಕಾಸಿಗೆ ನಿಂತಿವೆ. ಯಾರೋ ಕೊಟ್ಟ ಪ್ರಸಾದ ಈಸ್ಕೋಂಡು ಈ ತರ ಮಾಡ್ತಿದ್ದಾರೆ.
ಯಾರಾದ್ರು ಅಭಿವೃದ್ಧಿ ಕೆಲಸ ಬೇಡ ಅಂತಾರಾ ಎಂದು ಹೋರಾಟಗಾರರ ವಿರುದ್ದ ಕಿಡಿಕಾರಿದ್ದಾರೆ.
ಶಾಸಕನ ಈ ವಿವಾದಾತ್ಮಕ ಹೇಳಿಕೆಗೆ ಹೋರಾಟಗಾರರು ಮತ್ತು ರೈತ ಸಂಘಟನೆಗಳು ತಿರುಗಿ ಬಿದ್ದಿದ್ದು, ಶಾಸಕನ ಹೇಳಿಕೆ ಖಂಡಿಸಿ ಮದ್ದೂರಿನಲ್ಲಿ ಆಕ್ರೋಶ ಭುಗಿಲೆದ್ದಿದೆ.