ಬೆಳಗಾವಿ: ಪಾರ್ಟಿ ಮಾಡಲು ಕುರಿ ಕೊಡದ ಮೂರು ಜನ ಕುರಿಗಾಯಿಗಳ ಮೇಲೆ ಏಳು ಜನ ದುಷ್ಕರ್ಮಿಗಳಿಂದ ಹಲ್ಲೆಗೈದು ಪರಾರಿಯಾಗಿರುವ ಘಟನೆ ನಡೆದಿದೆ.
ಜನಿವಾರ ತೆಗೆಸಿದ ಪ್ರಕರಣ: ಕ್ರಮಕ್ಕೆ ಮುಂದಾದ KEA.. ವರದಿ ಕೊಡುವಂತೆ ಡಿಸಿಗೆ ಸೂಚನೆ!
ಬೆಳಗಾವಿ ಹೊರವಲಯದ ಮಜ್ಜಗಾವಿಯಲ್ಲಿ ಈ ಘಟನೆ ನಡೆದಿದೆ. ಜಮೀನಿನಲ್ಲಿ ಬೀಡುಬಿಟ್ಟಿದ್ದ ಕುರಿ ಕಳ್ಳತನಕ್ಕೆ ಬಂದಿದ್ದ ಖದೀಮರ ಗ್ಯಾಂಗ್ ಪಾರ್ಟಿ ಮಾಡಲು ಕುರಿ ಕೊಡಿ ಎಂದು ಕುರಿಗಾಯಿಗಳಿಗೆ ಧಮ್ಕಿ ಹಾಕಿದ್ದಾರೆ. ಕುರಿ ಕೊಡದೇ ಇದ್ದಾಗ ಏಕಾಏಕಿ ಹಲ್ಲೆಗೈದು ಪರಾರಿಯಾಗಿದ್ದಾರೆ.
ಗಾಯಾಳು ಕುರಿಗಾರರು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಲಿಸಲಾಗಿದೆ. ಆನಂದ ಕಲ್ಲೊಳ್ಳರ್, ಯಲ್ಲಪ್ಪ ಕಲ್ಲೊಳ್ಕರ್, ಗಂಗಾರಾಮ್ ಬೆಳಗಾಂವಕರ್ ಅವರ ಕಣ್ಣು, ಕೈ, ಹೊಟ್ಟೆ, ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದೆ. ಬೆಳಗಾವಿ ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.