ಸಾವು ಯಾರಿಗೆ ಹೇಗೆ ಬರುತ್ತೇ ಅನ್ನೋದನ್ನು ಹೇಳೋದಿಕ್ಕೆ ಆಗುವುದಿಲ್ಲ. ಇತ್ತೀಚೆಗಂತೂ ಹೃದಯಸ್ತಂಭದಿಂದ ಚಿಕ್ಕ ವಯಸ್ಸಿನವರಿಂದ ಹಿಡಿದು ದೊಡ್ಡವರು ನಿಧನರಾಗುತ್ತಿರುವುದನ್ನು ಕೇಳುತ್ತಲೇ ಇರುತ್ತವೆ. ಇದೀಗ ಖ್ಯಾತ ತಮಿಳಿನ ನಿರ್ದೇಶಕರು ಕಾರ್ಡಿಕ್ ಅರೆಸ್ಟ್ ನಿಂದ ಅಸುನೀಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.
ಇಂದು ಬೆಳಗ್ಗೆ ತಮಿಳುನಾಡಿನ ಮಧುರೈನಲ್ಲಿ ನಿರ್ಮಾಪಕರೊಬ್ಬರಿಗೆ ಸಿನಿಮಾದ ಸ್ಕ್ರಿಪ್ಟ್ ಹೇಳಿ ವಾಪಸ್ ಆಗುತ್ತಿದ್ದ ವೇಳೆ ನಿರ್ದೇಶಕ ವಿಕ್ರಮ್ ಸುಗುಮಾರನ್ಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಕೊನೆಯುಸಿರೆಳೆದಿದ್ದಾರೆ.
ನಿರ್ದೇಶಕ ವಿಕ್ರಮ್ ಸುಗುಮಾರನ್ ನಿರ್ದೇಶನದ ಚೊಚ್ಚಲ ಚಿತ್ರ ಮಧ ಯಾನೈ ಕೂಟ್ಟಾಮ್ ಸಿನಿಮಾ ಹಿಟ್ ಕಂಡಿತ್ತು. 2013ರಲ್ಲಿ ತೆರೆಕಂಡ ಈ ಚಿತ್ರ ಭರ್ಜರಿ ಪ್ರದರ್ಶನವಾಗಿತ್ತು. 2023ರಲ್ಲಿ ರಾವಣ ಕೊಟ್ಟಂ ಎನ್ನವ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇತ್ತೀಚೆಗೆ ತೇರಮ್ ಪೋರಮ್ ಎನ್ನುವ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದರು. ಆದರೆ ಇದರ ಮಧ್ಯೆ ನಿಧನ ಹೊಂದಿದ್ದಾರೆ. ನಿರ್ದೇಶಕ ವಿಕ್ರಮ್ ಸುಗುಮಾರನ್ ನಿಧನಕ್ಕೆ ತಮಿಳು ಚಿತ್ರರಂಗ ಸಂತಾಪ ಸೂಚಿಸುತ್ತಿದೆ.