ಬೆಂಗಳೂರು:- ನಡುರಸ್ತೆಯಲ್ಲೇ ಪಟಾಕಿ, ಪೇಪರ್ ಬ್ಲಾಸ್ಟ್ ಸಿಡಿಸಿ ಬರ್ತಡೆ ಸೆಲಬ್ರೇಷನ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಜೋರು ಸಾಧ್ಯತೆ: ಯೆಲ್ಲೋ ಅಲರ್ಟ್ ಘೋಷಣೆ?
ವಿದ್ಯಾರಣ್ಯಪುರದ ಅಪ್ಪು ಸರ್ಕಲ್ನಲ್ಲಿ ಭಕ್ತವತ್ಸಲ ಎಂಬಾತನ ಹುಟ್ಟುಹಬ್ಬವನ್ನು ಪಟಾಕಿ ಸಿಡಿಸಿ ನಡುರಸ್ತೆಯಲ್ಲೇ ಕೇಕ್ ಕತ್ತರಿಸಿ ಸೆಲಬ್ರೇಷನ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೂನ್ 12 ರ ರಾತ್ರಿ ನಡುರಸ್ತೆಯಲ್ಲಿ ಈ ಬರ್ತಡೆ ಸೆಲಬ್ರೇಷನ್ ನಡೆದಿದೆ.
ಸೋಷಿಯಲ್ ಮೀಡಿಯಾದಲ್ಲಿ ಬರ್ತಡೆ ವಿಡಿಯೋಸ್ ವೈರಲ್ ಆಗ್ತಿದ್ದಂತೆ ಪೊಲೀಸರು ಆಕ್ಟೀವ್ ಆಗಿದ್ದು, ಭರ್ಜರಿಯಾಗಿ ಬೀದಿಯಲ್ಲಿ ಬರ್ತಡೆ ಸೆಲಬ್ರೇಷನ್ ಮಾಡ್ಕೊಂಡವನ ವಿರುದ್ದ ಪೊಲೀಸರು ಕ್ರಮಕ್ಕೆ ಸಿದ್ದತೆ ನಡೆಸಿದ್ದಾರೆ. ಘಟನೆ ಸಂಬಂಧ ಸುಮೋಟೋ ಕೇಸ್ ದಾಖಲಿಸಿ ತನಿಖೆ ನಡೆಸಲು ಸಿದ್ದತೆ ಕೈಗೊಂಡಿದ್ದಾರೆ.
ಸಾರ್ವಜನಿಕ ಸಂಚಾರಕ್ಕೆ ಅಡ್ಡಿ, ಪಬ್ಲಿಕ್ ನ್ಯೂಸೆನ್ಸ್ ಅಡಿ ಕೇಸ್ ದಾಖಲಿಸಲು ಸಿದ್ದತೆ ನಡೆಸಿದ್ದು,
ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.