ಬೆಂಗಳೂರು: ಕಾಂಗ್ರೆಸ್ ಶಾಸಕರಿಗೆ ಜೆಡಿಎಲ್ಪಿ ನಾಯಕ ಸುರೇಶ್ ಬಾಬು ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲು ಸುರೇಶ್ ಬಾಬು ಮನೆಯ ದೋಸೆ ತವಾದ ತೂತು ಮುಚ್ಚಿಕೊಳ್ಳಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
Green Tea: ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ? ಇಲ್ಲಿದೆ ನೋಡಿ ಉತ್ತರ
ಸುರೇಶ್ ಬಾಬು ಮೊದಲು ಅವನ ಪಾರ್ಟಿದು ರಿಪೇರಿ ಮಾಡಿಕೊಳ್ಳಲಿ, ಅವರ ಮನೆಯ ದೋಸೆಯ ತವಾದ ತೂತು ಮುಚ್ಚಿಕೊಳ್ಳಲಿ ಎಂದು ಟಾಂಗ್ ಕೊಟ್ಟಿದ್ದಾರೆ. ತುಮಕೂರು ಭೇಟಿ ವಿಚಾರಕ್ಕೆ, ಎತ್ತಿನಹೊಳೆ ಯೋಜನೆಯ ಕೆಲಸ ಆಗಬೇಕು. ಇವತ್ತು ಗುತ್ತಿಗೆದಾರರ ಸಭೆ ಕರೆದಿದ್ದೆ.
ಈಗ ನಾಳೆ, ನಾಡಿದ್ದು ಆ ಸಭೆ ಮಾಡುತ್ತೇನೆ. ಏನು ಸಮಸ್ಯೆ ಇದೆ ಅಂತ ನೋಡೋದಕ್ಕೆ ಹೋಗುತ್ತೇನೆ. ಟೆಕ್ನಿಕಲ್ ಸಮಸ್ಯೆ ಬಗ್ಗೆ ಪರಿಶೀಲಿಸುತ್ತೇನೆ. ಜನರ, ಶಾಸಕರ ಅಭಿಪ್ರಾಯ ಕೇಳುತ್ತೇನೆ. ಕೇಂದ್ರ ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದು, ಹಾಗಾಗಿ ಸಭೆ ಮುಂದಕ್ಕೆ ಹಾಕಿದ್ದೇವೆ ಎಂದು ತಿಳಿಸಿದರು.